ರಾಜ್ಯ
ಬೆಂಗಳೂರಿನ ಹಲವೆಡೆ ಜಲಾವೃತ, ಟ್ರಾಫಿಕ್ ಕಿರಿಕಿರಿ: 'ವೆರಿ ಸ್ಮಾರ್ಟ್ ಸಿಟಿ' ಎಂದ ನಟಿ ರಮ್ಯಾ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನಸಾಮಾನ್ಯರು ತತ್ತರಿಸಿದ್ದಾರೆ. ಭಾನುವಾರ ಸಂಜೆಯಿಂದ ಸುರಿದ ದಾಖಲೆ ಪ್ರಮಾಣದ ಮಳೆಗೆ ಮಹಾನಗರ ಅಕ್ಷರಶ: ನಲುಗಿ ಹೋಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನಸಾಮಾನ್ಯರು ತತ್ತರಿಸಿದ್ದಾರೆ. ಭಾನುವಾರ ಸಂಜೆಯಿಂದ ಸುರಿದ ದಾಖಲೆ ಪ್ರಮಾಣದ ಮಳೆಗೆ ಮಹಾನಗರ ಅಕ್ಷರಶ: ನಲುಗಿ ಹೋಗಿದೆ.
ಹಲವೆಡೆ ಮನೆಗಳು, ರಸ್ತೆಗಳು, ಬಸ್ ನಿಲ್ದಾಣಗಳು ಜಲಾವೃತವಾಗಿದ್ದು, ಟ್ರಾಫಿಕ್ ಕಿರಿಕಿರಿಯಿಂದ ಜನರು ಹೈರಾಣಾಗಿದ್ದಾರೆ. ರಸ್ತೆ ತುಂಬೆಲ್ಲಾ ನೀರು ತುಂಬಿ ಹೊಳೆಯಂತಾಗಿದ್ದು, ವಾಹನ ಸವಾರರ ಪಾಡು ಹೇಳತೀರದಂತಾಗಿದೆ.
ಈ ಮಧ್ಯೆ ನಗರದಲ್ಲಿನ ನಿರ್ವಹಣೆ ಸಮಸ್ಯೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಜಲಾವೃತ ರಸ್ತೆಗಳು, ವಾಹನಗಳಿರುವ ಫೋಟೋವೊಂದನ್ನು ಟ್ವೀಟ್ ಮಾಡಿರುವ ರಮ್ಯಾ, ವೆರಿ ಸ್ಟಾರ್ಟ್ ಸಿಟಿ ಅಂತಾ
ವಿಡಂಬನೆ ಮಾಡಿದ್ದಾರೆ. ಅಕ್ರಮ ನಿರ್ಮಾಣಕ್ಕೆ ಕಡಿವಾಣ ಹಾಕುವ ಸರಕಾರಕ್ಕೆ ನನ್ನ ಮತ ಎಂದು ಅವರು ಬರೆದುಕೊಂಡಿದ್ದಾರೆ.