ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಯುವ ಜೋಡಿಗೆ ಕಿರುಕುಳ ನೀಡಿದ ಮೂವರ ಬಂಧನ

ಮಂಗಳೂರು ನಗರದ ಉಪಾಹಾರ ಗೃಹವೊಂದರಲ್ಲಿ ಯುವ ಜೋಡಿಗೆ ಗುರುತಿನ ಚೀಟಿ ಕೇಳಿ ಕಿರುಕುಳ ನೀಡಲಾಗಿದ್ದು, ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ನಗರದ ಉಪಾಹಾರ ಗೃಹವೊಂದರಲ್ಲಿ ಯುವ ಜೋಡಿಗೆ ಗುರುತಿನ ಚೀಟಿ ಕೇಳಿ ಕಿರುಕುಳ ನೀಡಲಾಗಿದ್ದು, ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ.

ಮೂಲಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬಾತ ಡಿಸೆಂಬರ್ 21 ರಂದು ಕೇರಳದ ಹುಡುಗ ಮತ್ತು ಹುಡುಗಿಯನ್ನು ಉಪಾಹಾರ ಗೃಹದಲ್ಲಿ ಕಂಡಿದ್ದಾನೆ. ಅವರು ಯಾವ ಸಮುದಾಯಕ್ಕೆ ಸೇರಿದವರು ಎಂಬುದನ್ನು ತಿಳಿಯಲು ಅವರ ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿದ್ದಾನೆ.

ಅವರು ಅವರಿಬ್ಬರನ್ನು ಗದರಿಸಿದ್ದಾರೆ. ಇದರಿಂದಾಗುವ ತೊಂದರೆಯನ್ನು ತಪ್ಪಿಸಿಕೊಳ್ಳಬೇಕು ಎಂದುಕೊಂಡ ಇಬ್ಬರು ಸ್ಥಳದಿಂದ ಹೊರಟು ಆಟೋರಿಕ್ಷಾ ಹತ್ತಿದ್ದಾರೆ.

ನಂತರ ಆರೋಪಿ ತನ್ನ ಇಬ್ಬರು ಸಹಚರರೊಂದಿಗೆ ಆಟೋ ನಿಲ್ಲಿಸಿ, ಚಾಲಕನ ಮೇಲೆ ದೌರ್ಜನ್ಯ ಎಸಗಿದ್ದಾನೆ.
ಚಾಲಕನ ದೂರಿನ ಮೇರೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಥಮಿಕ ವಿಚಾರಣೆ ಬಳಿಕ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com