ರಾಜ್ಯದ ಬಜೆಟ್ ಸಮತೋಲಿತವಾಗಿದ್ದು, ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದೆ: ಬಿಜೆಪಿ

ರಾಜ್ಯ ಸರ್ಕಾರದ ಬಜೆಟ್ ಸಮತೋಲಿತವಾಗಿದ್ದು, ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದೆ ಎಂದು ರಾಜ್ಯ ಬಿಜೆಪಿ ಶನಿವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉಡುಪಿ: ರಾಜ್ಯ ಸರ್ಕಾರದ ಬಜೆಟ್ ಸಮತೋಲಿತವಾಗಿದ್ದು, ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದೆ ಎಂದು ರಾಜ್ಯ ಬಿಜೆಪಿ ಶನಿವಾರ ಹೇಳಿದೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಅಧ್ಯಕ್ಷ ದಿವಾಕರ ಶೆಟ್ಟಿ ಅವರು, ಮುಖ್ಯಮಂದ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ರಾಜ್ಯ ಬಜೆಟ್ ಉತ್ತಮ ದೃಷ್ಟಿಕೋನ ಹೊಂದಿದೆ ಎಂದು ಹೇಳಿದರು.

ರಾಜ್ಯ ಬಜೆಟ್ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದ್ದು, ಆದಾಯ ಉತ್ಪಾದನೆಯ ಮೇಲೆ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದರು.

ಬಜೆಟ್‌ನಲ್ಲಿ ಆರ್ಥಿಕ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಡಿಜಿಟಲೀಕರಣದಿಂದ ತೆರಿಗೆ ಅನುಸರಣೆಗೆ ಹೆಚ್ಚಿನ ಗಮನ ನೀಡಿರುವುದರಿಂದ ಸರ್ಕಾರಕ್ಕೆ ವಿವಿಧ ಮೂಲಗಳ ಮೂಲಕ ಆದಾಯ ಹರಿದುಬರುತ್ತಿದೆ. ರಾಷ್ಟ್ರದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. “ರಾಜ್ಯದತ್ತ ಹೆಚ್ಚಿನ ಎಫ್‌ಡಿಐ ಹರಿದುಬರುತ್ತಿದೆ ಎಂದರು.

ಉದ್ಯೋಗ ಸೃಷ್ಟಿಯ ನಿರೀಕ್ಷೆಗೆ ಇದು ಉತ್ತಮ ಸಂಕೇತವಾಗಿದೆ. ಕೃಷಿ, ಪರಿಸರ ಸಂರಕ್ಷಣೆ ಮತ್ತು ಆಡಳಿತ ಸುಧಾರಣೆಯಂತಹ ವಿವಿಧ ವಿಭಾಗಗಳ ಅನುದಾನದ ಬಗ್ಗೆ ಗಮನ ಹರಿಸಲಾಗಿದೆ. ಎಲ್ಲಾ ಪ್ರದೇಶಗಳ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಅನುದಾನಗಳನ್ನು ಹಂಚಿಕೆ ಮಾಡಲಾಗಿದೆ. ಸೀಮೆಎಣ್ಣೆ ಬಳಸಿ ಮೀನುಗಾರಿಕೆ ನಡೆಸುವ ಮೀನುಗಾರರ ಬೋಟ್‌ಗಳನ್ನು ಡೀಸೆಲ್‌ಗೆ ಪರಿವರ್ತಿಸಲು 50,000 ರೂಪಾಯಿ ಸಹಾಯಧನ ನೀಡುತ್ತಿರುವುದು ಕರಾವಳಿ ಭಾಗದ ಮೀನುಗಾರ ಸಮುದಾಯಕ್ಕೆ ವರದಾನವಾಗಿದೆ. ಮೀನುಗಾರ ಸಮುದಾಯಕ್ಕೆ ಮನೆಗಳು ನೀಡುವ ಮೂಲಕ ಮತ್ತೊಂದು ನೆರವನ್ನು ನೀಡಲಾಗಿದೆ.

ಏಳು ಇಂಜಿನಿಯರಿಂಗ್ ಕಾಲೇಜುಗಳನ್ನು ಕೆಐಟಿಗಳಾಗಿ ಪರಿವರ್ತಿಸುವುದು ಮತ್ತು ಶಾಲೆಗಳಲ್ಲಿ 5,581 ಶೌಚಾಲಯಗಳ ನಿರ್ಮಾಣವು ಈ ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ಬೆಂಬಲಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಶಂಸನೆ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com