ಸಾಹಿತ್ಯ ಲೋಕದಲ್ಲೂ ರಾಜಕೀಯ ಅಸ್ಪೃಶ್ಯತೆ: ಪರ್ಯಾಯ 'ಜನ ಸಾಹಿತ್ಯ ಸಮ್ಮೇಳನ'ದಲ್ಲಿ ಚಿಂತಕ

ರಾಜಕೀಯ ಅಸ್ಪೃಶ್ಯತೆ ಸಾಹಿತ್ಯ ಲೋಕದಲ್ಲಿ ನುಸುಳಿದೆ. ಈ ಬೆಳವಣಿಗೆ ಅಪಾಯದ ಸೂಚನೆಯಾಗಿದೆ. ಅದರ ವಿರುದ್ಧದ ಎಲ್ಲ ಧ್ವನಿಗಳನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಚಿಂತಕ ರಾಮಕೃಷ್ಣ ಜಿ. ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ನಡೆದ ಜನ ಸಾಹಿತ್ಯ ಸಮ್ಮೇಳನದಲ್ಲಿ ಬರಹಗಾರ್ತಿ ಬಾನು ಮುಷ್ಟಾಕ್ ಮತ್ತು ನಟ ಪ್ರಕಾಶ್ ರಾಜ್
ಬೆಂಗಳೂರಿನಲ್ಲಿ ಭಾನುವಾರ ನಡೆದ ಜನ ಸಾಹಿತ್ಯ ಸಮ್ಮೇಳನದಲ್ಲಿ ಬರಹಗಾರ್ತಿ ಬಾನು ಮುಷ್ಟಾಕ್ ಮತ್ತು ನಟ ಪ್ರಕಾಶ್ ರಾಜ್
Updated on

ಬೆಂಗಳೂರು: ರಾಜಕೀಯ ಅಸ್ಪೃಶ್ಯತೆ ಸಾಹಿತ್ಯ ಲೋಕದಲ್ಲಿ ನುಸುಳಿದೆ. ಈ ಬೆಳವಣಿಗೆ ಅಪಾಯದ ಸೂಚನೆಯಾಗಿದೆ. ಅದರ ವಿರುದ್ಧದ ಎಲ್ಲ ಧ್ವನಿಗಳನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಚಿಂತಕ ರಾಮಕೃಷ್ಣ ಜಿ. ಹೇಳಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮಾನಾಂತರವಾಗಿ ಕ್ರೌಡ್ ಫಂಡಿಂಗ್ ಮೂಲಕ ಸಾಹಿತಿಗಳು ಮತ್ತು ಬುದ್ಧಿಜೀವಿಗಳ ವಿಭಾಗ ಭಾನುವಾರ ಇಲ್ಲಿ ಆಯೋಜಿಸಿದ್ದ ಜನ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಪ್ರಾಯೋಜಿತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಮತ್ತು ದಲಿತ ಲೇಖಕರನ್ನು ಕಡೆಗಣಿಸಿರುವ ಆರೋಪದ ಮೇಲೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

'ಎಲ್ಲಾ ಮನುಷ್ಯರನ್ನು ಸಮಾನತೆಯಿಂದ ಕಾಣಬೇಕು. ಅವರು (ಸರ್ಕಾರ) ‘ಸಂಸ್ಕೃತಿ’ಯ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಾರೆ. ಆದರೆ, ಅದನ್ನು ತ್ಯಾಗ ಮಾಡಿದ್ದಾರೆ ಮತ್ತು ಅದರ ವಿರುದ್ಧದ ಎಲ್ಲಾ ಧ್ವನಿಗಳನ್ನು ಹತ್ತಿಕ್ಕಲು ಹೇಯ ಕೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವರು ಚಿಂತಿಸುತ್ತಿಲ್ಲ. ಈ ದಮನದ ವಿರುದ್ಧ ಆಂದೋಲನ ನಡೆಯಬೇಕು' ಎಂದು ಹೇಳಿದರು.

ಖ್ಯಾತ ಕವಿ ಮುಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, 'ದೇಶ ಕಟ್ಟುವವರು ಕವಿಗಳು ಮತ್ತು ಕಲಾವಿದರೇ ಹೊರತು ರಾಜಕಾರಣಿಗಳು ಅಥವಾ ಉದ್ಯಮಿಗಳಲ್ಲ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಎಂದೂ ಕಾಣದಂತಹ ಬಿಕ್ಕಟ್ಟು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತಲೆದೋರಿದೆ' ಎಂದರು.

ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ ಎಂಬ ಕಾವ್ಯನಾಮದಿಂದ ಪರಿಚಿತರು) ಅವರು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳಿಂದ ರಾಜಕಾರಣಿಗಳನ್ನು ದೂರವಿಟ್ಟಿದ್ದನ್ನು ಸ್ಮರಿಸಿದ ಬರಹಗಾರ ರವಿಕುಮಾರ್, ಸಾಹಿತ್ಯದ ಹಬ್ಬವನ್ನು ಸಾಮಾನ್ಯ ಅಜೆಂಡಾ ಇಟ್ಟುಕೊಂಡು ಜನರಿಗೆ ಸೀಮಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಅಂಗೀಕರಿಸಲ್ಪಟ್ಟ ಪ್ರಮುಣ ನಿರ್ಣಯಗಳೆಂದರೆ, ಜಾತಿ, ಲಿಂಗ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಮಾನವರನ್ನು ಸಮಾನವಾಗಿ ಪರಿಗಣಿಸುವುದು ಮತ್ತು ಅರ್ಹ ಅಭ್ಯರ್ಥಿಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡುವುದು. ಹಿಂದಿ ಹೇರಿಕೆ, ಉತ್ತರ ಭಾರತದ ಸಂಸ್ಥೆಗಳೊಂದಿಗೆ ನಂದಿನಿ ವಿಲೀನ ಮತ್ತು ಸರ್ಕಾರದ ಕೋಮುವಾದಿ ನಡೆಗಳನ್ನು ವಿರೋಧಿಸುವ ನಿರ್ಣಯಗಳನ್ನು ಅಂಗೀಕರಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com