ಮಂಗಳೂರು: ಕುಡಿದ ಮತ್ತಿನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಕತ್ತಿ ಝಳಪಿಸಿದ ಇಬ್ಬರ ಬಂಧನ

ಚಲಿಸುತ್ತಿದ್ದ ರೈಲಿನೊಳಗೆ ಕತ್ತಿಯನ್ನು ಝಳಪಿಸುತ್ತಿದ್ದ ಇಬ್ಬರನ್ನು ಕರ್ನಾಟಕ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಇದು ಪ್ರಯಾಣಿಕರಲ್ಲಿ ಭಯ ಮತ್ತು ಗೊಂದಲವನ್ನು ಉಂಟುಮಾಡಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಚಲಿಸುತ್ತಿದ್ದ ರೈಲಿನೊಳಗೆ ಕತ್ತಿಯನ್ನು ಝಳಪಿಸುತ್ತಿದ್ದ ಇಬ್ಬರನ್ನು ಕರ್ನಾಟಕ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಇದು ಪ್ರಯಾಣಿಕರಲ್ಲಿ ಭಯ ಮತ್ತು ಗೊಂದಲವನ್ನು ಉಂಟುಮಾಡಿತು.

ಗೋವಾದಿಂದ ತಮಿಳುನಾಡಿನ ತಿರುನಲ್ವೇಲಿಗೆ ತೆರಳುತ್ತಿದ್ದ ಇಬ್ಬರು ಬಂಧಿತರನ್ನು ಜಯಪ್ರಭು ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ.

ತಿರುನಲ್ವೇಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸುರತ್ಕಲ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ತೋಕೂರು ಕಡೆಗೆ ತೆರಳುತ್ತಿದ್ದಾಗ ಶುಕ್ರವಾರ ಈ ಘಟನೆ ನಡೆದಿದೆ.

ಕುಡಿದ ಮತ್ತಿನಲ್ಲಿ ಕತ್ತಿಗಳನ್ನು ಹೊರತೆಗೆದು ಪ್ರಯಾಣಿಕರನ್ನು ಬೆದರಿಸಲು ಆರಂಭಿಸಿದರು. ಇದರಿಂದ ಪ್ರಯಾಣಿಕರು ಪ್ರಾಣಭಯದಿಂದ ಕೋಚ್‌ನಿಂದ ಹೊರಗೆ ಓಡಿ ಬಂದರು.

ಟಿಟಿಇ ಬಾಬು. ಕೆ., ಕೆ. ಶ್ರೀನಿವಾಸ್ ಶೆಟ್ಟಿ ಮತ್ತು ತಿಮ್ಮಪ್ಪ ಗೌಡ ಅವರು ಸ್ಥಳಕ್ಕೆ ಧಾವಿಸಿ ಅವರ ಕೈಯಲ್ಲಿದ್ದ ಕತ್ತಿಗಳನ್ನು ಕಸಿದುಕೊಂಡರು.

ನಂತರ ಆರೋಪಿಗಳನ್ನು ಮಂಗಳೂರು ರೈಲು ನಿಲ್ದಾಣದಲ್ಲಿ ಪೊಲೀಸರಿಗೆ ಒಪ್ಪಿಸಲಾಯಿತು. ಘಟನೆಯಿಂದಾಗಿ ಹಲವು ಸೀಟುಗಳು ಮತ್ತು ಕಿಟಕಿಗಳಿಗೆ ಹಾನಿಯಾಗಿದೆ.

ರೈಲ್ವೆ ಪೊಲೀಸರು ಕತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com