ಬೆಂಗಳೂರು: ಕರ್ನಾಟಕ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಶುಕ್ರವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಮರಾಜಪೇಟೆಯ ಜೆಡಿಎಸ್ ಅಭ್ಯರ್ಥಿ ಸಿ.ಗೋವಿಂದರಾಜು ಎನ್ನುವವರು ಶುಕ್ರವಾರ ಆಗಿರುವ ಹಿನ್ನಲೆಯಲ್ಲಿ ಅಜಾದ್ ನಗರದ ವಾಲ್ಮೀಕಿ ನಗರ ಮಸೀದಿ ಬಳಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಜತೆ ಸೇರಿಕೊಂಡು ಪಕ್ಷದ ಪ್ರಚಾರ ಮಾಡಿ ಕರಪತ್ರ ಹಂಚುತ್ತಿದ್ದರು.
ಈ ಸಂದರ್ಭ ಜೆಡಿಎಸ್ ಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದರು. ಆಗ ಇಲ್ಲಿಗೆ ಬಂದ ಕೆಲ ಕಾಂಗ್ರೆಸ್ ಕಾರ್ಯಕರ್ತರು 'ಯಾಕೆ ಬಂದಿದ್ದೀರಾ ನೀವು ಅಂತ ಪ್ರಶ್ನೆ ಕೇಳಿದ್ದಾರೆ.. ಕಾಂಗ್ರೆಸ್ ನವರು ಈ ಮಸೀದಿ ಕಟ್ಟಿದ್ದು ನೀವು ಯಾಕೆ ಬಂದಿದ್ದೀರಾ ಅಂತ ಪ್ರಶ್ನೆ ಕೇಳಿದ್ದಾರೆ.
ನಂತರ ಅಲ್ಲಿದ್ದ ಯುವಕರಿಂದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮೇಲೆ ಹಲ್ಲೆಗೆ ಯತ್ನ ನಡೆಸಿದ್ದು, ಜೆಡಿಎಸ್ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಅಭ್ಯರ್ಥಿ ಗೋವಿಂಗರಾಜು ಅವರನ್ನು ರಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಗೋವಿಂದರಾಜು ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರ: ಶಿಕ್ಷಕನ ಬಂಧನ
ಮೂಲಗಳ ಪ್ರಕಾರ ಸ್ಥಳೀಯ ರೌಡಿ ಶೀಟರ್ ಕಾಲೂ, ಗೌಸಿ ಮತ್ತು ಆತನ ಸಹಚರರು ಈ ಹಲ್ಲೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ತನಿಖೆ ನಡೆಸಿದ್ದಾರೆ.
Advertisement