'ಮಸೀದಿ ಕಟ್ಟಿಸಿದ್ದು ಕಾಂಗ್ರೆಸ್.. ನೀವು ಇಲ್ಲಿ ಪ್ರಚಾರ ಮಾಡಬೇಡಿ': ಚಾಮರಾಜಪೇಟೆ ಜೆಡಿಎಸ್ ಅಭ್ಯರ್ಥಿ ಮೇಲೆ 'ಕೈ' ಕಾರ್ಯಕರ್ತರ ಹಲ್ಲೆ

ಕರ್ನಾಟಕ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
JDS ಅಭ್ಯರ್ಥಿ ಮೇಲೆ 'ಕೈ' ಕಾರ್ಯಕರ್ತರ ಹಲ್ಲೆ
JDS ಅಭ್ಯರ್ಥಿ ಮೇಲೆ 'ಕೈ' ಕಾರ್ಯಕರ್ತರ ಹಲ್ಲೆ
Updated on

ಬೆಂಗಳೂರು: ಕರ್ನಾಟಕ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.

ಶುಕ್ರವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಮರಾಜಪೇಟೆಯ ಜೆಡಿಎಸ್ ಅಭ್ಯರ್ಥಿ ಸಿ.ಗೋವಿಂದರಾಜು ಎನ್ನುವವರು ಶುಕ್ರವಾರ ಆಗಿರುವ ಹಿನ್ನಲೆಯಲ್ಲಿ ಅಜಾದ್ ನಗರದ ವಾಲ್ಮೀಕಿ ನಗರ ಮಸೀದಿ ಬಳಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಜತೆ ಸೇರಿಕೊಂಡು ಪಕ್ಷದ ಪ್ರಚಾರ ಮಾಡಿ ಕರಪತ್ರ ಹಂಚುತ್ತಿದ್ದರು.

ಈ ಸಂದರ್ಭ ಜೆಡಿಎಸ್ ಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದರು. ಆಗ ಇಲ್ಲಿಗೆ ಬಂದ ಕೆಲ ಕಾಂಗ್ರೆಸ್ ಕಾರ್ಯಕರ್ತರು 'ಯಾಕೆ ಬಂದಿದ್ದೀರಾ ನೀವು ಅಂತ ಪ್ರಶ್ನೆ ಕೇಳಿದ್ದಾರೆ..  ಕಾಂಗ್ರೆಸ್ ನವರು ಈ ಮಸೀದಿ ಕಟ್ಟಿದ್ದು ನೀವು ಯಾಕೆ ಬಂದಿದ್ದೀರಾ ಅಂತ ಪ್ರಶ್ನೆ ಕೇಳಿದ್ದಾರೆ.

ನಂತರ ಅಲ್ಲಿದ್ದ ಯುವಕರಿಂದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮೇಲೆ ಹಲ್ಲೆಗೆ ಯತ್ನ ನಡೆಸಿದ್ದು, ಜೆಡಿಎಸ್ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಅಭ್ಯರ್ಥಿ ಗೋವಿಂಗರಾಜು ಅವರನ್ನು ರಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಗೋವಿಂದರಾಜು ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂಲಗಳ ಪ್ರಕಾರ ಸ್ಥಳೀಯ ರೌಡಿ ಶೀಟರ್ ಕಾಲೂ, ಗೌಸಿ ಮತ್ತು ಆತನ ಸಹಚರರು ಈ ಹಲ್ಲೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ತನಿಖೆ ನಡೆಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com