ಬೆಂಗಳೂರು: ಭಾರಿ ಗಾಳಿ, ಉದ್ಘಾಟನೆಯಾದ ಒಂದೇ ವರ್ಷಕ್ಕೆ ಕುಸಿದು ಬಿತ್ತು ವಿಶ್ವೇಶ್ವರಯ್ಯ ಟರ್ಮಿನಲ್‌ ಛಾವಣಿ

ಉದ್ಘಾಟನೆಯಾದ ಒಂದೇ ವರ್ಷಕ್ಕೆ ಬೈಯಪ್ಪನಹಳ್ಳಿಯ ಅತ್ಯಾಧುನಿಕ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನ ಛಾವಣಿ ಕುಸಿದು ಬಿದಿದ್ದು, ಕೂದಲೆಳೆ ಅಂತರದಲ್ಲಿ ಕೆಳಗಿದ್ದ ಪ್ರಯಾಣಿಕರು ಪಾರಾಗಿದ್ದಾರೆ.
ವಿಶ್ವೇಶ್ವರಯ್ಯ ಟರ್ಮಿನಲ್‌ ಛಾವಣಿ ಕುಸಿತ
ವಿಶ್ವೇಶ್ವರಯ್ಯ ಟರ್ಮಿನಲ್‌ ಛಾವಣಿ ಕುಸಿತ
Updated on

ಬೆಂಗಳೂರು: ಉದ್ಘಾಟನೆಯಾದ ಒಂದೇ ವರ್ಷಕ್ಕೆ ಬೈಯಪ್ಪನಹಳ್ಳಿಯ ಅತ್ಯಾಧುನಿಕ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನ ಛಾವಣಿ ಕುಸಿದು ಬಿದಿದ್ದು, ಕೂದಲೆಳೆ ಅಂತರದಲ್ಲಿ ಕೆಳಗಿದ್ದ ಪ್ರಯಾಣಿಕರು ಪಾರಾಗಿದ್ದಾರೆ.

ಬೈಯಪ್ಪನಹಳ್ಳಿಯ ಅತ್ಯಾಧುನಿಕ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಮಂಗಳವಾರ ಮಧ್ಯಾಹ್ನ 1.45 ರ ಸುಮಾರಿಗೆ ಈ ಘಟನೆ ನಡೆದಿದ್ದು, ಛಾವಣಿ ಕೆಳಗೆ ಇದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸೀಲಿಂಗ್ ಗೆ ಹಾಕಿದ್ದ ಹಲವು ಬೀಮ್‌ಗಳು ಮುರಿದಿದ್ದರಿಂದ ಮೇಲ್ಛಾವಣಿ ಸ್ವಲ್ಪಮಟ್ಟಿಗೆ ಕುಸಿದು ಬಿದ್ದಿದೆ. ಈ ವೇಳೆ ಪ್ರವೇಶ ದ್ವಾರದಲ್ಲಿ ಕುಳಿತಿದ್ದ ಸುಮಾರು 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಇನ್ನು ಗಾಳಿಯ ರಭಸಕ್ಕೆ ಟರ್ಮಿನಲ್ ನ ಟಿವಿ ಸೆಟ್ ಸೇರಿದಂತೆ ಕೆಲವು ಸಾಮಾನುಗಳು ಹಾನಿಗೊಳಗಾಗಿವೆ. ಸುಮಾರು 314 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಕೇಂದ್ರೀಯ ಹವಾನಿಯಂತ್ರಿತ ರೈಲು ನಿಲ್ದಾಣವನ್ನು ಕೇವಲ ಒಂದು ವರ್ಷದ ಹಿಂದೆ (ಜೂನ್ 6) ಉದ್ಘಾಟಿಸಲಾಗಿತ್ತು.  ಕಳೆದ ವರ್ಷ ನವೆಂಬರ್‌ನಲ್ಲಿ ಮೇಲ್ಛಾವಣಿಯು ಇದೇ ರೀತಿಯ ಕುಸಿತ ಕಂಡಿತ್ತು. ಆದರೆ ಈ ಬಾರಿ ಚಿಕ್ಕ ಭಾಗ ಕುಸಿದಿದೆ. 

TNIE ನಿಲ್ದಾಣಕ್ಕೆ ಭೇಟಿ ನೀಡಿದಾಗ, ಛಾವಣಿಯಿಂದ ಮುರಿದ ವಸ್ತುಗಳನ್ನು ಒಂದು ಮೂಲೆಯಲ್ಲಿ ಎಸೆಯಲಾಗಿತ್ತು. ಪ್ರವೇಶ ಮುಚ್ಚಲಾಯಿತು. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು TNIE ಜೊತೆ ಮಾತನಾಡಿದ್ದು, "ಇಂದು ಹೌರಾ ಎಕ್ಸ್‌ಪ್ರೆಸ್ ರೈಲು ನಿರ್ಗಮನವು ಸುಮಾರು ಮೂರು ಗಂಟೆಗಳ ಕಾಲ ತಡವಾಗಿ, ರೈಲು ಹತ್ತಬೇಕಾದ ಸಾಮಾನ್ಯ ಟಿಕೆಟ್ ಪ್ರಯಾಣಿಕರು ಟರ್ಮಿನಲ್‌ನ ಹೊರಗೆ ಕಾಯುತ್ತಿದ್ದರು. ಮಳೆ ಪ್ರಾರಂಭವಾದಾಗ, ಅವರು ಆಶ್ರಯಕ್ಕಾಗಿ ಪ್ರದೇಶಕ್ಕೆ ಧಾವಿಸಿ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆ ವೇಗವಾಗಿ ಗಾಳಿ ಬೀಸಿತು ಮತ್ತು ಮೇಲಿನ ಮೇಲ್ಛಾವಣಿಯು ಕ್ರಮೇಣ ಕೆಳಗೆ ಬೀಳಲು ಪ್ರಾರಂಭಿಸಿತು.ಇದು ಪ್ರಯಾಣಿಕರಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಟರ್ಮಿನಲ್ ಒಳಗೆ ಓಡಬೇಕಾಯಿತು. ಅದೃಷ್ಟವಶಾತ್ ಯಾರ ಮೇಲೂ ಬೀಳಲಿಲ್ಲ. ಬಿದ್ದ ಕಬ್ಬಿಣದ ಶೀಟ್ ವಸ್ತುವು ಭಾರ ಮತ್ತು ಚೂಪಾಗಿತ್ತು. ಹಲವು ಸಾಮಾನು ಸರಂಜಾಮುಗಳು ಹಾನಿಗೊಳಗಾಗಿವೆ ಎಂದರು.

ಖಾಸಗಿ ಹವಾಮಾನ ಮುನ್ಸೂಚಕ ಆದರ್ಶ್ ಗೌಡ TNIE  ಜೊತೆ ಮಾತನಾಡಿ, " SMVT ನಿಲ್ದಾಣದ ಹತ್ತಿರ ಹತ್ತು ನಿಮಿಷಗಳ ಕಾಲ ಗಂಟೆಗೆ 65 ಕಿಮೀ ವೇಗದ ಗಾಳಿ ಬೀಸುತ್ತಿತ್ತು. ಗಾಳಿಯ ವೇಗ ಸಾಕಷ್ಟು ತೀವ್ರವಾಗಿತ್ತು ಮತ್ತು ರಭಸದಿಂದ ಕೂಡಿತ್ತು. ಇಲ್ಲಿ ಸಾಮಾನ್ಯ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿ.ಮೀ ಇರುತ್ತದೆ. 25 ನಿಮಿಷಗಳ ಕಾಲ 40 ಮಿಮೀ ಮಳೆಯಾಗಿದೆ ಎಂದು ಹೇಳಿದ್ದಾರೆ.

ಸುರಂಗಮಾರ್ಗ ಜಲಾವೃತ:
ಮಳೆಯಿಂದಾಗಿ ಪ್ಲಾಟ್‌ಫಾರ್ಮ್ ಒಂದನ್ನು ಸಂಪರ್ಕಿಸುವ ದೂರದ ಸುರಂಗಮಾರ್ಗ ಮತ್ತು ಪಿಎಫ್ 7 ರವರೆಗಿನ ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಜಲಾವೃತವಾಗಿದ್ದು, ಮೋಟಾರ್ ಬಳಸಿ ನೀರನ್ನು ಹೊರಗೆ ಹರಿಸಬೇಕಾಯಿತು. ಮನೆಗೆಲಸದ ಸಿಬ್ಬಂದಿ ನೆಲದ ಮೇಲೆ ನೀರು ಒರೆಸುತ್ತಿದ್ದರು. ಈ ನಿಲ್ದಾಣಕ್ಕೆ ಇಷ್ಟು ಖರ್ಚು ಮಾಡಿ ಏನು ಕೆಲಸ ಮಾಡಿದ್ದಾರೋ ಆ ದೇವರೇ ಬಲ್ಲ. ಪ್ರತಿ ಬಾರಿ ಮಳೆ ಬಂದಾಗಲೂ ಸಬ್ ವೇ ಜಲಾವೃತವಾಗಿದೆ. ಇವತ್ತು ಮಾಡಿದ ಕೆಲಸದಿಂದ ನಮ್ಮ ಕೈ ನೋಯುತ್ತಿದೆ ಎಂದು ಅವರಲ್ಲಿ ಒಬ್ಬರು ಹೇಳಿದರು. ಪ್ರಯಾಣಿಕರು ತಮ್ಮ ತಲೆಯ ಮೇಲೆ ಸಾಮಾನುಗಳನ್ನು ಹೊತ್ತುಕೊಂಡು ಹೋಗುತ್ತಿದ್ದರು ಮತ್ತು ಕೆಲವರು ಇಲ್ಲಿ ನಡೆಯುವುದರಿಂದ ಬಟ್ಟೆ ಒದ್ದೆಯಾಗುವುದನ್ನು ತಪ್ಪಿಸಲು ಬಗ್ಗಿ ವಾಹನದ ಮೂಲಕ ಪ್ರಯಾಣಿಸಲು ನಿರ್ಧರಿಸಿದರು ಎಂದು ಇನ್ನೊಬ್ಬ ಸಿಬ್ಬಂದಿ ಹೇಳಿದರು.

ಪ್ಲಾಟ್‌ಫಾರ್ಮ್ ಮಹಡಿಗಳಲ್ಲಿನ ನಯವಾದ ಗ್ರಾನೈಟ್ ಕಲ್ಲುಗಳು ಪ್ರಯಾಣಿಕರಿಗೆ ವಿಶೇಷವಾಗಿ ಮಳೆಯ ಸಮಯದಲ್ಲಿ ಅಪಾಯಕಾರಿ ಎಂದು ಸಾಬೀತಾಗಿದೆ ಎಂದು ಮಾರಾಟಗಾರರೊಬ್ಬರು ಹೇಳಿದ್ದಾರೆ. ಗ್ರಾನೈಟ್ ಕಲ್ಲು ಜಾರುತ್ತಿದ್ದು, ಅದರ ಮೇಲೆ ಸ್ವಲ್ಪ ನೀರು ಬಿದ್ದಾಗ ಅದು ಕೂಡ ಗೋಚರಿಸುವುದಿಲ್ಲ,  ನೀರು ನೋಡದೆ ಅನೇಕರು ಜಾರಿ ಬೀಳುತ್ತಾರೆ, ದಯವಿಟ್ಟು ಅಧಿಕಾರಿಗಳೊಂದಿಗೆ ಮಾತನಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಕಾಂಕ್ರೀಟ್ ವಸ್ತುವಾಗಿ ಪರಿವರ್ತಿಸಿ. ನಾನು ತುಂಬಾ ನೋಡಿದ್ದೇನೆ. ರೈಲು ಹತ್ತಲು ಹೋಗುವ ದಾರಿಯಲ್ಲಿ ಜನರು ಪ್ಲಾಟ್‌ಫಾರ್ಮ್ ಮೇಲೆ ಕೆಟ್ಟದಾಗಿ ಬೀಳುತ್ತಾರೆ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com