social_icon

ಕರ್ನಾಟಕ ವಿಧಾನಸಭೆ ಚುನಾವಣೆ: ಮಧ್ಯಾಹ್ನ 3 ಗಂಟೆವರೆಗೆ ಶೇ 52.18 ರಷ್ಟು ಮತದಾನ, ರಾಮನಗರದಲ್ಲಿ ಅತಿಹೆಚ್ಚು!

224 ಸ್ಥಾನಗಳಿಗೆ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 52.18ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

Published: 10th May 2023 04:04 PM  |   Last Updated: 10th May 2023 05:14 PM   |  A+A-


Shivamogga district recorded an approximate voter turnout of 55.39 % as of 3 pm.

ಶಿವಮೊಗ್ಗ ಜಿಲ್ಲೆಯ ಮತಗಟ್ಟೆಯಲ್ಲಿ ಮತಚಲಾಯಿಸಲು ಬಂದಿದ್ದ ಮತದಾರರು

Posted By : Ramyashree GN
Source : Online Desk

ಬೆಂಗಳೂರು: 224 ಸ್ಥಾನಗಳಿಗೆ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 52.18ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಈ ಪೈಕಿ, ರಾಮನಗರದಲ್ಲಿ ಅತಿ ಹೆಚ್ಚು ಅಂದರೆ ಶೇ 63.36 ರಷ್ಟು ಮತದಾನವಾಗಿದೆ. ಬೆಂಗಳೂರು ನಗರದಲ್ಲಿ ಮತದಾರ ಆಸಕ್ತಿ ತೋರಿಸದಿರುವಂತೆ ಕಾಣಿಸುತ್ತಿದ್ದು, ಅತಿ ಕಡಿಮೆ ಅಂದರೆ ಶೇ 41.82ರಷ್ಟು ಮತದಾನವಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದ ಮೊದಲ ಆರು ಗಂಟೆಗಳಲ್ಲಿ ಶೇ 37.25ರಷ್ಟು ಮತದಾನವಾಗಿತ್ತು. ಇದೀಗ ಅತಿಹೆಚ್ಚು ಮತದಾನ ಮಾಡಲು ಮತದಾರರು ಮತಗಟ್ಟೆಗಳತ್ತ ತೆರಳುತ್ತಿದ್ದಾರೆ. 1 ಗಂಟೆ ಸುಮಾರಿಗೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅತಿ ಹೆಚ್ಚು ಅಂದರೆ ಶೇ 47.79 ರಷ್ಟು ಮತದಾನವಾಗಿತ್ತು.

ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆ 2023: ಈವರೆಗೆ ಶೇ.37.25ರಷ್ಟು ಮತದಾನ, ಉಡುಪಿಯಲ್ಲಿ ಅತಿಹೆಚ್ಚು!

ಇನ್ನುಳಿದಂತೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಶೇ 60.14ರಷ್ಟು, ಬೆಂಗಳೂರು ನಗರದಲ್ಲಿ ಶೇ 41.82, ಬಾಗಲಕೋಟೆ ಜಿಲ್ಲೆಯಲ್ಲಿ ಶೇ 56.42ರಷ್ಟು, ಬೆಳಗಾವಿಯಲ್ಲಿ ಶೇ 53.93, ಬಳ್ಳಾರಿಯಲ್ಲಿ ಶೇ 53.31, ಬೀದರ್‌ನಲ್ಲಿ ಶೇ 50.64, ವಿಜಯಪುರದಲ್ಲಿ ಶೇ 49, ಚಾಮರಾಜನಗರದಲ್ಲಿ ಶೇ 51.75, ಚಿಕ್ಕಬಳ್ಳಾಪುರ ಶೇ 58.74, ಚಿಕ್ಕಮಗಳೂರು ಶೇ 57.28, ಚಿತ್ರದುರ್ಗ ಶೇ 53.05, ದಕ್ಷಿಣ ಕನ್ನಡ ಶೇ 57.48, ದಾವಣಗೆರೆ ಶೇ 55.80, ಧಾರವಾಡ ಶೇ 50.25 ಮತ್ತು ಗದಗದಲ್ಲಿ ಶೇ 55.04 ರಷ್ಟು ಮತದಾನವಾಗಿದೆ.

ಇನ್ನುಳಿದಂತೆ, ಹಾಸನದಲ್ಲಿ ಶೇ 59.15ರಷ್ಟು, ಹಾವೇರಿಯಲ್ಲಿ ಶೇ 57.21ರಷ್ಟು, ಕೊಡಗಿನಲ್ಲಿ ಶೇ 58.24, ಕೋಲಾರದಲ್ಲಿ ಶೇ 54.81, ಕೊಪ್ಪಳದಲ್ಲಿ ಶೇ 56.45, ಮಂಡ್ಯದಲ್ಲಿ ಶೇ 58.39, ಮೈಸೂರಿನಲ್ಲಿ ಶೇ 52.45, ರಾಯಚೂರಿನಲ್ಲಿ ಶೇ 52.73, ಶಿವಮೊಗ್ಗದಲ್ಲಿ ಶೇ 56.10, ತುಮಕೂರಿನಲ್ಲಿ ಶೇ 58.45, ಉಡುಪಿಯಲ್ಲಿ ಶೇ 60.29, ಉತ್ತರ ಕನ್ನಡದಲ್ಲಿ ಶೇ 54.94, ವಿಜಯನಗರ ಜಿಲ್ಲೆಯಲ್ಲಿ ಶೇ 56.29 ಮತ್ತು ಯಾದಗಿರಿಯಲ್ಲಿ ಶೇ 46.61ರಷ್ಟು ಮತದಾನವಾಗಿದೆ.


Stay up to date on all the latest ರಾಜ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp