'In Quest of Guru' ಪುಸ್ತಕ ಬಿಡುಗಡೆ ಮಾಡಿದ ಡಾ.ನಿರ್ಮಲಾನಂದ ಶ್ರೀ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಶ್ರೀಗಳು 'ಇನ್ ಕ್ವೆಸ್ಟ್ ಆಫ್ ಗುರು' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಮಾಡಿದ ಡಾ.ನಿರ್ಮಲಾನಂದ ಶ್ರೀ
ಪುಸ್ತಕ ಬಿಡುಗಡೆ ಮಾಡಿದ ಡಾ.ನಿರ್ಮಲಾನಂದ ಶ್ರೀ

ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಶ್ರೀಗಳು 'ಇನ್ ಕ್ವೆಸ್ಟ್ ಆಫ್ ಗುರು' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.

ಥಿಂಕರ್ಸ್ ಫೋರಂ-ಕರ್ನಾಟಕ ಮಿಥಿಕ್ ಸೊಸೈಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿವರ್ತನಾಶೀಲ ಆಧುನಿಕ ಸನಾತನ ಧರ್ಮ ಪುಸ್ತಕ 'ಇನ್ ಕ್ವೆಸ್ಟ್ ಆಫ್ ಗುರು'ವನ್ನು ನಿರ್ಮಲಾನಂದ ಶ್ರೀಗಳು ಬಿಡುಗಡೆ ಮಾಡಿದರು. ಭಾರತದ ಅತ್ಯಂತ ಹಳೆಯ ಪ್ರಕಾಶಕರಾದ ಮೋತಿಲಾಲ್ ಬನಾರಸಿದಾಸ್ ಪಬ್ಲಿಷಿಂಗ್ ಹೌಸ್ (MLBD) ಈ ಪುಸ್ತಕವನ್ನು ಪ್ರಕಟಿಸಿದೆ.

ಹಲವಾರು ವರ್ಷಗಳ ಹಿಂದೆ ಭಾರತಕ್ಕೆ ಆಗಮಿಸಿದ ಅಮೆರಿಕಾ ಮೂಲದ ಸಿನಿಮಾಟೋಗ್ರಾಫರ್ ಆನಂದ ಮ್ಯಾಥ್ಯೂಸ್ ಬರೆದ ಪುಸ್ತಕ ಇದಾಗಿದ್ದು, ಪುಸ್ತಕವು ವೈಯಕ್ತಿಕ ಮತ್ತು ಆಧ್ಯಾತ್ಮಿಕ ಪರಿವರ್ತನೆಯನ್ನು ಬಯಸುವವರಿಗೆ ನೆರವಾಗಲಿದೆ ಎಂದು ಶ್ರೀಗಳು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿದ ಡಾ.ನಿರ್ಮಲಾನಂದ ಶ್ರೀ
ಪುಸ್ತಕ ಬಿಡುಗಡೆ: ಸಾವಣ್ಣ ಪ್ರಕಾಶನದಿಂದ 'ಸಿರಿವಂತಿಕೆಗೆ ಸರಳ ಸೂತ್ರಗಳು' ಸೇರಿ 5 ಪುಸ್ತಕ ಲೋಕಾರ್ಪಣೆ

'ಅಮೆರಿಕ ಮೂಲದ ಲೇಖಕರೊಬ್ಬರು ಭಾರತಕ್ಕೆ ಬಂದು ಸನಾತನ ಧರ್ಮದ ಮೂಲವನ್ನು ಅರ್ಥಮಾಡಿಕೊಂಡಿದ್ದಾರೆ. ಅದನ್ನು ‘ಇನ್ ಕ್ವೆಸ್ಟ್ ಆಫ್ ಗುರು’ ಪುಸ್ತಕದ ರೂಪದಲ್ಲಿ ವ್ಯಕ್ತಪಡಿಸಿದ್ದು, ಇದು ಭಾರತೀಯರಾದ ನಮ್ಮನ್ನು ನಾವೇ ಕೇಳಿಕೊಳ್ಳಲು ಪ್ರೇರೇಪಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಭಾರತದ ಮೌಲ್ಯಗಳ ಮೂಲಕ ಜಾಗತಿಕ ಶಾಂತಿಯನ್ನು ಬೆಳೆಸಲು ನಾವು ಏನು ಮಾಡುತ್ತಿದ್ದೇವೆ?

ಮಾನವೀಯತೆಯ ಕಲ್ಯಾಣಕ್ಕಾಗಿ ಸನಾತನ ಧರ್ಮದ ಬೋಧನೆಗಳನ್ನು ಹಂಚಿಕೊಳ್ಳುವ ಜವಾಬ್ದಾರಿ ನಮಗಿಲ್ಲವೇ? ಆನಂದ ಮ್ಯಾಥ್ಯೂಸ್ ಅವರು ಭಾರತದ ಆಧ್ಯಾತ್ಮಿಕತೆಯ ಭಾಗವಾಗಿದ್ದಾರೆ ಮತ್ತು ವಿಶ್ವಾದ್ಯಂತ ಆಧ್ಯಾತ್ಮಿಕ ಅನ್ವೇಷಕರಿಗೆ ಸರಳೀಕೃತ ವೈದಿಕ ಮಾರ್ಗದರ್ಶನವನ್ನು ಪುಸ್ತಕದ ಮೂಲಕ ಒದಗಿಸಿದ್ದಾರೆ ಎಂದರು.

ತಮ್ಮ ಗುರು, ಆಧ್ಯಾತ್ಮಿಕವಾದಿ ಡಿವೈನ್ ಕರ್ನಲ್ - ಅಶೋಕ್ ಕಿಣಿ ಯವರೊಂದಿಗೆ ಬರೆದ ಪುಸ್ತಕ 'ಇನ್ ಕ್ವೆಸ್ಟ್ ಆಫ್ ಗುರು' ಕೇವಲ ಪುಸ್ತಕವಲ್ಲ; ಇದು ಜಾಗತಿಕ ಯುವಕರು ಮತ್ತು ಆಧ್ಯಾತ್ಮಿಕ ಅನ್ವೇಷಕರು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಧುನಿಕ ಪದಗಳಲ್ಲಿ ಪ್ರಸ್ತುತಪಡಿಸಲಾದ ಆಧ್ಯಾತ್ಮಿಕ ರೂಪಾಂತರ ಸಾಧನವಾಗಿದೆ ಎಂದು ಪುಸ್ತಕ ಲೇಖಕ ಆನಂದ್ ಹೇಳಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್-ವ್ಯಾಸ ಯೋಗ ವಿಶ್ವವಿದ್ಯಾನಿಲಯದ ಪದ್ಮಶ್ರೀ ಡಾ ಎಚ್ ಆರ್ ನಾಗೇಂದ್ರ ಗುರು ಜಿ, ಮೇಜರ್ ಜನರಲ್ ಡಾ. ಜಿಡಿ ಬಕ್ಷಿ , ನ್ಯಾಯಮೂರ್ತಿ ಪಿ ಕೃಷ್ಣ ಭಟ್, ಲೆಫ್ಟಿನೆಂಟ್ ಜನರಲ್ ಎ ನಟರಾಜನ್ ಮಾಜಿ ಅಡ್ಜಟಂಟ್ ಭಾರತೀಯ ಸೇನೆ, ಮತ್ತು ಭಾರತೀಯ ಸೇನೆಯ ಮಾಜಿ ಮಿಲಿಟರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಪಿಜಿ ಕಾಮತ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com