ಬೆಂಗಳೂರು: ಮಳೆ, ಗಾಳಿಯಿಂದ ಬೀಳುವ ಮರ ತೆರವಿಗೆ 28 ತಂಡ ರಚಿಸಿದ BBMP

ಎಂಟು ಸದಸ್ಯರು ಮತ್ತು ತೆರವು ವಾಹನ ಒಳಗೊಂಡಿರುವ 'ಮರಗಳ ವ್ಯವಸ್ಥಿತ ನಿರ್ವಹಣಾ ತಂಡ' ಮಳೆಗಾಲದಲ್ಲಿ ದುರ್ಬಲಗೊಳ್ಳಬಹುದಾದ ಹಳೆಯ ಮರಗಳು ಮತ್ತು ದುರ್ಬಲವಾದ ರೆಂಬೆ-ಕೊಂಬೆಗಳನ್ನು ಗುರುತಿಸುವ ಕಾರ್ಯ ಮಾಡುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಳೆ ಮತ್ತು ಗಾಳಿಯಿಂದ ಬಿದ್ದ ಮರಗಳನ್ನು ತ್ವರಿತವಾಗಿ ನಿರ್ವಹಿಸಲು ಮತ್ತು ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 28 ತಂಡಗಳನ್ನು ರಚಿಸಿದೆ.

ಎಂಟು ಸದಸ್ಯರು ಮತ್ತು ತೆರವು ವಾಹನ ಒಳಗೊಂಡಿರುವ 'ಮರಗಳ ವ್ಯವಸ್ಥಿತ ನಿರ್ವಹಣಾ ತಂಡ' ಮಳೆಗಾಲದಲ್ಲಿ ದುರ್ಬಲಗೊಳ್ಳಬಹುದಾದ ಹಳೆಯ ಮರಗಳು ಮತ್ತು ದುರ್ಬಲವಾದ ರೆಂಬೆ-ಕೊಂಬೆಗಳನ್ನು ಗುರುತಿಸುವ ಕಾರ್ಯ ಮಾಡುತ್ತದೆ.

ಮಳೆಗಾಲದಲ್ಲಿ ಗಾಳಿ ಹೆಚ್ಚಾಗಿ ನಗರದ ಹಲವೆಡೆ ಮರಗಳು, ರೆಂಬೆ ಕೊಂಬೆಗಳು ಬೀಳುವುದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನಗಳು ಸೇರಿದಂತೆ ಆಸ್ತಿಪಾಸ್ತಿಗೆ ಹಾನಿಯಾಗುತ್ತಿದೆ. ಹೀಗಾಗಿ ಮರಗಳ ವ್ಯವಸ್ಥಿತ ನಿರ್ವಹಣೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಬೆಂಗಳೂರು ಮಳೆ: ಧರೆಗುರುಳಿದ ಮರ, ಆಟೋ ರಿಕ್ಷಾ ಚಾಲಕನ ಬಲಿ!

ಈ ತಂಡಗಳು ಮಳೆ-ಗಾಳಿಯಿಂದ ಬಿದ್ದ ಮರಗಳನ್ನು ತೆರವುಗೊಳಿಸುವುದರ ಜೊತೆಗೆ ತಮ್ಮ ನಿಯೋಜಿತ ಪ್ರದೇಶಗಳಲ್ಲಿ Sahaaya ಆ್ಯಪ್ ಮತ್ತು BBMP ಸಹಾಯವಾಣಿಗಳ ಮೂಲಕ ಸಲ್ಲಿಸಲಾದ ಮರಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com