
ಬೆಂಗಳೂರು: ನಗರದ ಹಾಲನಾಯಕನಹಳ್ಳಿ ಮತ್ತು ಸರ್ಜಾಪುರ ರಸ್ತೆಯ ನಿವಾಸಿಗಳು ತಮ್ಮ ಪ್ರದೇಶದಲ್ಲಿ ಹದಗೆಟ್ಟ ರಸ್ತೆಗಳಿಂದ ಜರ್ಜರಿತವಾಗಿದ್ದರು. ಆದರೆ ಬುಧವಾರ ಈ ನಿವಾಸಿಗಳು ಖುಷಿ ಪಡುವಂತಾಯಿತು.. ಸುಮಾರು ಆರು ವರ್ಷಗಳಿಂದ ಪಟ್ಟುಬಿಡದೆ ಪಟ್ಟ ಶ್ರಮದಿಂದಾಗಿ 3 ಕಿಮೀ ರಸ್ತೆಯಲ್ಲಿದ್ದ 250 ಗುಂಡಿಗಳನ್ನು ಮೂರು ದಿನಗಳಲ್ಲಿ ತುಂಬಲಾಯಿತು.
ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂದು ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ ರೂ. ಹಣ ಖರ್ಚು ಮಾಡಿದ್ದಾರೆ. ದೊಡ್ಡಕನಹಳ್ಳಿ-ಚಿಕ್ಕನಾಯಕನಹಳ್ಳಿ ಮುಖ್ಯರಸ್ತೆ ಎಂದು ಕರೆಯಲ್ಪಡುವ ಈ ರಸ್ತೆಯು ವೈಟ್ಫೀಲ್ಡ್/ಬೆಳ್ಳಂದೂರಿನಿಂದ ಗಟಹಳ್ಳಿ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಹೊರವರ್ತುಲ ರಸ್ತೆಯನ್ನು ಹಾದುಹೋಗುವ ಶಾರ್ಟ್ ಕಟ್ ಆಗಿದೆ. ಇದು ಮಹದೇವಪುರ ವಲಯದ ಅಡಿಯಲ್ಲಿ ಬರುತ್ತದೆ, ಎಲ್ಲಾ BBMP ವಲಯಗಳಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದಾರೆ. ಸ್ಥಳೀಯ ಸ್ವಯಂಸೇವಕ ಗುಂಪು, ಸಿಟಿಜನ್ಸ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ತಂಡ ಸುಮಾರು 8,000 ಕುಟುಂಬಗಳ ಪರವಾಗಿ ರಸ್ತೆಯ ಬೇಡಿಕೆಯನ್ನು ಮುಂದಿಟ್ಟಿತು. ದಿ ನ್ಯೂ ಇಂಡಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸಿಟಿಜನ್ ಮೂವ್ಮೆಂಟ್ ಸ್ವಯಂಸೇವಕ ಆರಿಫ್ ಮುದ್ಗಲ್, ಆರು ವರ್ಷಗಳ ಹಿಂದೆ ರಸ್ತೆಯನ್ನು ಹಾಕಲಾಯಿತು. ಅನೇಕ ಐಟಿ ವೃತ್ತಿಪರರು ಇಲ್ಲಿ ಮನೆಗಳನ್ನು ಖರೀದಿಸಿದ್ದಾರೆ. ಕೆಲವು ವರ್ಷಗಳಿಂದ ನಮಗೆ ಸಹಾಯ ಮಾಡಬೇಕೆಂದು ನಾವು ಪ್ರತಿಯೊಬ್ಬರ ಬಾಗಿಲು ಬಡಿಯುತ್ತಿದ್ದೇವೆ. ಅರವಿಂದ ಲಿಂಬಾವಳಿ ಅವರು ಮಹದೇವಪುರ ಶಾಸಕರಾಗಿದ್ದಾಗ ಭೇಟಿಯಾಗಿದ್ದೆವು ಮತ್ತು ಇತ್ತೀಚೆಗೆ ಅವರ ಪತ್ನಿ ಮಂಜುಳಾ ಎಸ್ ಲಿಂಬಾವಳಿ ಅವರು ನಮಗೆ ಹಣ ಮೀಸಲಿಟ್ಟಿಲ್ಲ ಎಂದು ಹೇಳಿದರು. ನಾವು ವಿಧಾನಸೌಧದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಚೇರಿಗೆ ಭೇಟಿ ನೀಡಿದ್ದೇವು, ಆದರೆ ಅವರನ್ನು ಭೇಟಿಯಾಗದ ಹಿನ್ನೆಲೆಯಲ್ಲಿ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದೇವೆ. ಈ ಹಿಂದೆಯೂ ಈ ಗುಂಪು ನಿವಾಸಿಗಳಿಂದ ಹಣ ಸಂಗ್ರಹಿಸಿ ರಸ್ತೆ ಗುಂಡಿಗಳಿಗೆ ವೆಟ್ ಮಿಕ್ಸ್ ಹಾಕಿ ತುಂಬಿಸಿತ್ತು.
ಈ ಬಾರಿ ರಸ್ತೆ ಸರಿಯಾಗದಿದ್ದರೆ ನಮ್ಮಲ್ಲಿ ಯಾರೂ ಆಸ್ತಿ ತೆರಿಗೆ ಪಾವತಿಸುವುದಿಲ್ಲ ಎಂದು ಪಂಚಾಯಿತಿಗೆ ಹೇಳುತ್ತಿದ್ದೇವೆ. ನಾವು ಈ ವಿಷಯದ ಬಗ್ಗೆ ದೊಡ್ಡ ಪ್ರತಿಭಟನೆಗಳನ್ನು ಮಾಡಲು ಯೋಜಿಸುತ್ತಿದ್ದೇವೆ ಎಂದು ನಾವು ಒತ್ತಿ ಹೇಳುತ್ತಲೇ ಇದ್ದೇವೆ ಎಂದು ಅವರು ಹೇಳಿದರು. ಕೊನೆಗೆ ಪಿಡಬ್ಲ್ಯುಡಿ ಇಲಾಖೆ ವ್ಯಾಪ್ತಿಗೆ ಬಂದ ಮೇಲೆ ರಸ್ತೆ ಸರಿಪಡಿಸಲು ಪಂಚಾಯಿತಿ ಸದಸ್ಯರು ನಿರ್ಧರಿಸಿದರು. ಸತತ ಎರಡು ದಿನಗಳ ಕಾಲ ನಡೆದ ಕಾಮಗಾರಿ ಡಿಸೆಂಬರ್ 12 ರಂದು ಪೂರ್ಣಗೊಂಡಿತು. ಹಾಲನಾಯಕನಹಳ್ಳಿ ಪಂಚಾಯಿತಿ ಅಧ್ಯಕ್ಷೆ ಸವಿತಾ ರೆಡ್ಡಿ, ಅವರ ಪತಿ ವಿ ಬಾಬು ರೆಡ್ಡಿ ಮಾತನಾಡಿ, “ನಾವು ಒಟ್ಟು 5 ಲಕ್ಷ ರೂ.ಗಳನ್ನು ವೆಟ್ ಮಿಕ್ಸ್ ಮತ್ತು ಸಿಮೆಂಟ್ನಿಂದ ತುಂಬಿಸಿ, ಟ್ರ್ಯಾಕ್ಟರ್ಗಳನ್ನು ಬಾಡಿಗೆಗೆ ಪಡೆದು ಕೂಲಿ ಕಾರ್ಮಿಕರಿಗೆ ಪಾವತಿಸಿದ್ದೇವೆ. ನಮ್ಮ ಕುಟುಂಬವು ಹೆಚ್ಚಿನ ಪಾಲನ್ನು ನೀಡಿತು ಮತ್ತು ಇತರ ಪಂಚಾಯತ್ ಸದಸ್ಯರೂ ಕೊಡುಗೆ ನೀಡಿದರು. ಖಾಸಗಿ ಬಿಲ್ಡರ್ ಆದ ಆದರ್ಶ್ ಬಿಲ್ಡರ್ಸ್ ಸಾರ್ವಜನಿಕ ಹಿತದೃಷ್ಟಿಯಿಂದ ಉಚಿತವಾಗಿ ಡಾಂಬರೀಕರಣ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement