Namma Metro: ಟ್ರ್ಯಾಕ್‌ಗಳಿಂದ ಪ್ರಯಾಣಿಕರ ದೂರವಿರಿಸಲು ಮೆಟ್ರೋ ಮಾಸ್ಟರ್ ಪ್ಲಾನ್, ಹ್ಯಾಂಡ್ ರೇಲಿಂಗ್‌ಗಳ ಅಳವಡಿಕೆ

ಇತ್ತೀಚೆಗೆ ಟ್ರಾಕ್ ಮೇಲೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬರು ಹಳಿ ಮೇಲೆ ಹಾರಿದ ಘಟನೆ ಹಿನ್ನಲೆಯಲ್ಲಿ ಪ್ರಯಾಣಿಕರನ್ನು ಟ್ರಾಕ್ ಗಳಿಂದ ದೂರವಿರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹ್ಯಾಂಡ್ ರೇಲಿಂಗ್‌ಗಳ ಅಳವಡಿಕೆಯಲ್ಲಿ ತೊಡಗಿದೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ
Updated on

ಬೆಂಗಳೂರು: ಇತ್ತೀಚೆಗೆ ಟ್ರಾಕ್ ಮೇಲೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬರು ಹಳಿ ಮೇಲೆ ಹಾರಿದ ಘಟನೆ ಹಿನ್ನಲೆಯಲ್ಲಿ ಪ್ರಯಾಣಿಕರನ್ನು ಟ್ರಾಕ್ ಗಳಿಂದ ದೂರವಿರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹ್ಯಾಂಡ್ ರೇಲಿಂಗ್‌ಗಳ ಅಳವಡಿಕೆಯಲ್ಲಿ ತೊಡಗಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತನ್ನ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳ ಉದ್ದಕ್ಕೂ ಸ್ಟೀಲ್ ಹ್ಯಾಂಡ್ ರೇಲಿಂಗ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ. ಈ ಹಿಂದೆ ಪ್ರಯಾಣಿಕರು ಹಳಿಗಳಿಗೆ ಪ್ರವೇಶಿಸಿದ್ದ ಇತ್ತೀಚಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಕ್ರಮವಾಗಿದೆ ಎಂದು ಹೇಳಲಾಗಿದೆ. ಪ್ರಯಾಣಿಕರು ಹಳಿಗಳ ಮೇಲೆ ಬರುವುದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿ ಪೀಕ್ ಅವರ್‌ಗಳಲ್ಲಿ ರೈಲು ಸೇವೆಗಳಲ್ಲಿ ಅಡಚಣೆಗೆ ಕಾರಣವಾಗುತ್ತದೆ ಎಂದು ಬಿಎಂಆರ್ ಸಿಎಲ್ ಈ ಕ್ರಮಕ್ಕೆ ಮುಂದಾಗಿದೆ.

ಭದ್ರತಾ ತಪಾಸಣೆಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಮಾಡುವುದರ ಹೊರತಾಗಿಯೂ ಹಂತ-I ಗಾಗಿ ಪ್ಲಾಟ್‌ಫಾರ್ಮ್ ಗೇಟ್‌ಗಳ ಸ್ಥಾಪನೆಯನ್ನು ಸಹ BMRCL ಪರಿಗಣಿಸುತ್ತಿದೆ. ಹಂತ-2ರ ಸುರಂಗ ಕಾರಿಡಾರ್‌ಗಾಗಿ ಪ್ಲಾಟ್‌ಫಾರ್ಮ್ ರೀಲಿಂಗ್ ಅಳವಡಿಕೆಗಾಗಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ BMRCL ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಅವರು, 'ಜನನಿಬಿಡ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳ ಉದ್ದಕ್ಕೂ ಜನರು ಹಳಿಗಳಿಗೆ ಪ್ರವೇಶಿಸುವುದನ್ನು ತಡೆಯಲು ನಾವು ಸ್ಟೀಲ್ ಹ್ಯಾಂಡ್ ರೇಲಿಂಗ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದ್ದೇವೆ. ಅವುಗಳನ್ನು ಪ್ಲಾಟ್‌ಫಾರ್ಮ್‌ಗಳ ಅಂಚಿನಲ್ಲಿ ಇರಿಸಲಾಗುವುದು. ರೈಲುಗಳ ಬಾಗಿಲು ತೆರೆಯುವ ಸ್ಥಳಗಳಲ್ಲಿ ಯಾವುದೇ ರೇಲಿಂಗ್‌ಗಳಿಲ್ಲ ಎಂದು ಹೇಳಿದರು.

ಅಂತೆಯೇ BMRCL ಭವಿಷ್ಯದಲ್ಲಿ ಹಂತ-1 ರ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಗೇಟ್‌ಗಳನ್ನು ಹೊಂದಲು ಸಹ ನೋಡುತ್ತಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುಮೋದನೆ ಪಡೆದು ನಂತರ ಟೆಂಡರ್ ಕರೆಯಬೇಕು. ಇದಕ್ಕೆ ಸಮಯ ಹಿಡಿಯುತ್ತದೆ. ಹಂತ-2 ರ ಸುರಂಗ ಕಾರಿಡಾರ್ (ರೀಚ್ -6) ಗಾಗಿ ಪ್ಲಾಟ್‌ಫಾರ್ಮ್ ಬಾಗಿಲುಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ. ಈ ಗುಲಾಬಿ ಮಾರ್ಗವು ನಾಗವಾರದಿಂದ ಕಾಳೇನ ಅಗ್ರಹಾರದವರೆಗೆ ಸಾಗುತ್ತದೆ ಮತ್ತು 13.89-ಕಿಮೀ ಭೂಗತ ಕಾರಿಡಾರ್ ಅನ್ನು ಹೊಂದಿದೆ ಎಂದರು.

ಭದ್ರತಾ ತಪಾಸಣೆ ಹೆಚ್ಚಳ
ಭದ್ರತಾ ತಪಾಸಣೆಯನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು. ಫ್ರಿಸ್ಕಿಂಗ್ ಮತ್ತು ಸ್ಕ್ಯಾನಿಂಗ್ ಅನ್ನು ಸುಧಾರಿಸಲಾಗುವುದು ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಶುಕ್ರವಾರ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಮೀಪಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭದಲ್ಲಿ ಗಾಯಗೊಂಡಿದ್ದ ಎಸ್ ಸರೋನ್ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com