ಬೆಂಗಳೂರು: ಮದುವೆಯಾಗಿ ಮಕ್ಕಳಿದ್ದರೂ ಹೊಟೇಲ್ ರೂಂನಲ್ಲಿ ಸಿಕ್ಕಿಬ್ಬಿದ್ದ ಜೋಡಿ, ರಾತ್ರೋರಾತ್ರಿ ಮತ್ತೆ ಪರಾರಿ!

ವಿವಾಹಿತ ಮಹಿಳೆ ಮತ್ತೊಬ್ಬ ವಿವಾಹಿತ ಪುರುಷನ ಜೊತೆ ಓಡಿ ಹೋಗಿದ್ದು ನನ್ನ ಪತಿಯನ್ನು ಹುಡುಕಿಕೊಂಡುವಂತೆ ಪತ್ನಿ ಹಾಗೂ ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಪರಾರಿಯಾಗಿರುವ ಜೋಡಿ
ಪರಾರಿಯಾಗಿರುವ ಜೋಡಿ

ಬೆಂಗಳೂರು: ವಿವಾಹಿತ ಮಹಿಳೆ ಮತ್ತೊಬ್ಬ ವಿವಾಹಿತ ಪುರುಷನ ಜೊತೆ ಓಡಿ ಹೋಗಿದ್ದು ನನ್ನ ಪತಿಯನ್ನು ಹುಡುಕಿಕೊಂಡುವಂತೆ ಪತ್ನಿ ಹಾಗೂ ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಪುಟ್ಟೇನಹಳ್ಳಿಯ ಇಲಿಯಾಸ್ ನಗರದಲ್ಲಿ ಘಟನೆ ನಡೆದಿದೆ. ಸುಮೈಯಾ ಬಾನು ಮತ್ತು ವಸೀಂ 7 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಆದರೆ ವಸೀಂ ಇತ್ತೀಚೆಗೆ ದಿಲ್ ಷಾದ್ ಎಂಬಾಕೆಯ ಮೇಲೆ ಪ್ರೇಮಾಂಕುರವಾಗಿದೆ. ಅದರಂತೆ ಈ ಜೋಡಿ ಆಗಾಗೇ ಭೇಟಿಯಾಗುತ್ತಿದ್ದರು.

ಇನ್ನು ಪತಿ ವಸೀಂ ನಡುವಳಿಕೆ ಮೇಲೆ ಅನುಮಾನಗೊಂಡ ಸುಮೈಯಾ ಬಾನು ಪತಿಯನ್ನು ಹಿಂಬಾಲಿಸಿದ್ದಾಳೆ. ವಸೀಂ ದಿಲ್ ಷಾದ್ ಜೊತೆ ಹೋಟೆಲ್ ನಲ್ಲಿ ತಂಗಿದ್ದಾಗ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಅಲ್ಲದೆ ತನ್ನ ಪತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ದಿಲ್ ಷಾದ್ ಳನ್ನು ಹಿಡಿದು ಥಳಿಸಿದ್ದರು. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಇದೀಗ ವಸೀಂ ಹಾಗೂ ದಿಲ್ ಷಾದ್ ಜೋಡಿ ರಾತ್ರೋರಾತ್ರಿ ಪರಾರಿಯಾಗಿದ್ದು ಪತಿಯನ್ನು ಹುಡುಕಿಕೊಂಡುವಂತೆ ಸುಮೈದಾ ಬಾನು ಹಾಗೂ ಪತ್ನಿಯನ್ನು ಹುಡುಕಿಕೊಂಡುವಂತೆ ದಿಲ್ ಷಾದ್ ಪತಿ ನಯೀಂ ಠಾಣೆಗೆ ದೂರು ನೀಡಿದ್ದು ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com