ಬೆಂಗಳೂರು: ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಶಂಕರಪುರಂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಗಳನ್ನು ಚಾಮರಾಜಪೇಟೆ ನಿವಾಸಿ ಶಶಾಂಕ್ (20) ಮತ್ತು ಆತನ ಸ್ನೇಹಿತ ಕೆ.ಜಿ.ನಗರದ ಚಂದನ್ (20) ಎಂದು ಗುರುತಿಸಲಾಗಿದೆ.
ಸಂತ್ರಸ್ತ ಯುವಕನನ್ನು ಹರ್ಷಿತ್ ಕುಮಾರ್ (20) ಎಂದು ಗುರ್ತಿಸಲಾಗಿದೆ. ಈತ ಬುಲ್ ಟೆಂಪಲ್ ರಸ್ತೆಯಲ್ಲಿರುವ ಉಮಾ ಥಿಯೇಟರ್ ಬಳಿ ತನ್ನ ತಂದೆಯೊಂದಿಗೆ ಅಲಂಕಾರಿಕ ಹೂವುಗಳನ್ನು ಮಾರಾಟ ಮಾಡುತ್ತಿದ್ದ.
ಹರ್ಷಿತ್ ಕುಮಾರ್ ತನ್ನ ಪ್ರಿಯತಮೆ ಜೊತೆಗೆ ಚಾಟ್ ಮಾಡುತ್ತಿದ್ದಾನೆ ಎಂದು ಶಂಕಿಸಿದ ಶಶಾಂಕ್, ಅವನ ಮೊಬೈಲ್ ಫೋನ್ ಪರಿಶೀಲಿಸಲು ಮುಂದಾಗಿದ್ದಾನೆ. ಈ ವೇಳೆ ಹರ್ಷಿತ್ ನಿರಾಕರಿಸಿದ್ದಾನೆ. ಬಳಿಕ ಶಶಾಂಕ್ ತನ್ನ ಪ್ರಿಯತಮೆಯ ಫೋನ್ ಪರಿಶೀಲಿಸಿದ್ದಾನೆ. ಈ ವೇಳೆ ಹರ್ಷಿತ್ ಜೊತೆಗೆ ಚಾಟ್ ಮಾಡಿರುವುದು ಪತ್ತೆಯಾಗಿದೆ.
ಬಳಿಕ ತನ್ನ ಮತ್ತೊಬ್ಬ ಸ್ನೇಹಿತ ಚಂದನ್ ಜೊತೆಗೆ ಸೇರಿ ಹರ್ಷಿತ್ ಮೇಲೆ ದಾಳಿ ಮಾಡಲು ಕುಮಾರ್ ಯೋಜನೆ ರೂಪಿಸಿದ್ದಾನೆ.
ಇದರಂತೆ ಏಪ್ರಿಲ್ 28 ರಂದು ರಾತ್ರಿ 8:30 ರ ಸುಮಾರಿಗೆ ಶಶಾಂಕ್ ಮತ್ತು ಚಂದನ್ ಇಬ್ಬರೂ ಹರ್ಷಿತ್ ಅಂಗಡಿಗೆ ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹರ್ಷಿತ್ ಬಲಗೈಗೆ ಗಾಯಗಳಾಗಿದ್ದು, ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾನೆ. ಘಟನೆ ಬಳಿಕ ಅಂಗಡಿ ಮುಂದೆ ಜನರು ಜಮಾಯಿಸುತ್ತಿದ್ದು, ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ತಕ್ಷಣ ಹರ್ಷಿತ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹರ್ಶಿತ್ ಪೋಷಕರು ಶಂಕರಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement