
ಬೆಂಗಳೂರು: ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ 2010ರಲ್ಲಿ ಗರ್ಭಿಣಿ ಮಹಿಳೆ ಹಾಗೂ ಆಕೆಯ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿದ ಘಟನೆ ನಡೆದು 15 ವರ್ಷ ಕಳೆದರೂ ಸಾಕ್ಷ್ಯಧಾರ ಕೊರತೆಯಿಂದ ಇನ್ನೂ ವಿಚಾರಣೆ ಹಂತದಲ್ಲಿಯೇ ಇದೆ. ಕಾರಣ ಮೃತ ಮಹಿಳೆಯ ಶವಪರೀಕ್ಷೆ ನಡೆಸಿದ ವೈದ್ಯರು 2019 ರಲ್ಲಿ ಅಪಘಾತಕ್ಕೆ ಒಳಗಾದ ನಂತರ ಸ್ಮರಣಶಕ್ತಿಯನ್ನು ಕಳೆದುಕೊಂಡಿದ್ದು, ಇನ್ನೂ ಸಾಕ್ಷ್ಯ ನೀಡುವ ಸ್ಥಿತಿಯಲ್ಲಿಲ್ಲ. ನಗರದ ಮೂವರು ವೈದ್ಯರು ಸೇರಿದಂತೆ ಏಳು ಆರೋಪಿಗಳ ವಿರುದ್ಧ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ಗೆ ಈ ಸಾಕ್ಷ್ಯ ಮಹತ್ವದ್ದಾಗಿದೆ.
ಏನಿದು ಪ್ರಕರಣ: ಮೃತ ಗರ್ಭಿಣಿ ಕಪಾಲಿ ಪಟ್ನೆ ಅವರನ್ನು ಏಪ್ರಿಲ್ 16, 2010 ರಂದು ಸಂತೋಷ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಆಪರೇಷನ್ ಗಾಗಿ ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಆಪರೇಷನ್ ಥಿಯೇಟರ್ಗೆ (OT) ಸ್ಥಳಾಂತರಿಸಲಾಗಿತ್ತು. ಅಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಪಾಟ್ನೆ 3 ರಿಂದ 4 ಅಡಿ ಎತ್ತರದ ಆಪರೇಷನ್ ಟೇಬಲ್ ಮೇಲಿಂದ ಬಿದ್ದ ಪಾಟ್ನೆ ಅವರಿಗೆ ಎಡಭಾಗದ ಸ್ಯಾಕ್ರೊಲಿಯಾಕ್ ಜಾಯಿಂಟ್ (left sacroiliac joint)ಮುರಿತವಾಗಿದೆ.
ವೈದ್ಯರು ಸಕಾಲದಲ್ಲಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸದ ಕಾರಣ, ಪಾಟ್ನೆ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂಬ ಆರೋಪವಿದೆ.ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. 348 ದಿನಗಳವರೆಗೆ ಪ್ರಾಸಿಕ್ಯೂಷನ್ ವಿಚಾರಣೆಯನ್ನು ತಡೆಗೆ ಪ್ರಯತ್ನಿಸಿದ್ದರಿಂದ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ.
51ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಯಶವಂತ್ ಕುಮಾರ್ ಅವರು ಇತ್ತೀಚೆಗೆ ನೀಡಿದ ಆದೇಶದ ಪ್ರಕಾರ, ಎರಡನೇ ಪ್ರಾಸಿಕ್ಯೂಷನ್ ಸಾಕ್ಷಿ ಆಗಿರುವ ಗಾಯಾಳು ವೈದ್ಯರನ್ನು ಸೆಪ್ಟೆಂಬರ್ 2019 ರಂದು ಭಾಗಶಃ ಪರೀಕ್ಷಿಸಲಾಗಿತ್ತು. ವಿಶೇಷ ಸರ್ಕಾರಿ ಅಭಿಯೋಜಕರ ಕೋರಿಕೆಯ ಮೇರೆಗೆ ಅವರ ಮುಂದಿನ ಪರೀಕ್ಷೆಯನ್ನು ಮುಂದೂಡಲಾಯಿತು. ನಂತರ ಕೋವಿಡ್ನಿಂದಾಗಿ ಪ್ರಕರಣ ಅಕ್ಟೋಬರ್ 2020 ಕ್ಕೆ ಪದೇ ಪದೇ ಮುಂದೂಡಲಾಯಿತು. ನವೆಂಬರ್ 2020 ರಲ್ಲಿ ವೈದ್ಯರಿಗೆ ಸಮನ್ಸ್ ನೀಡಿದ ನಂತರ, ಡಿಸೆಂಬರ್ 1,2020 ರಂದು ದಾಖಲೆಗಳನ್ನು ನೀಡುವಂತೆ ಬೌರಿಂಗ್ ಆಸ್ಪತ್ರೆಗೆ ನಿರ್ದೇಶಿಸಿದ ನಂತರ ಆ ವೈದ್ಯರು ಅಪಘಾತಕ್ಕೆ ಒಳಗಾಗಿದ್ದಾರೆ ಮತ್ತು ಎರಡು ತಿಂಗಳ ಬೆಡ್ ರೆಸ್ಟ್ಗೆ ಸಲಹೆ ನೀಡಲಾಗಿದೆ ಎಂದು ಎಸ್ಪಿಪಿ ನ್ಯಾಯಾಲಯಕ್ಕೆ ತಿಳಿಸಿದರು.
ಏಪ್ರಿಲ್ 10, 2023 ರಂದು, ಎಸ್ಪಿಪಿಯ ಕೋರಿಕೆಯ ಮೇರೆಗೆ ನ್ಯಾಯಾಲಯ ಪುಲಿಕೇಶಿನಗರ ಪೊಲೀಸರಿಗೆ ಮಹಜರು ನಡೆಸಲು ಅವರ ಮನೆಯಲ್ಲಿ ವೈದ್ಯರ ಸಂಬಂಧಿಕರ ಹೇಳಿಕೆಗಳನ್ನು ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರಾಗಲು ಮತ್ತು ಸಾಕ್ಷ್ಯವನ್ನು ನೀಡಬಹುದೇ ಎಂದು ತಿಳಿಯಲು ನಿರ್ದೇಶಿಸಿತು. ಆದರೆ ಅವರು ಗಾಯದಿಂದಾಗಿ ಸ್ಮರಣಶಕ್ತಿ ಕಳೆದುಕೊಂಡಿದ್ದಾರೆ ಮತ್ತು ಅವರು ಸಾಕ್ಷ್ಯವನ್ನು ನೀಡುವ ಸ್ಥಿತಿಯಲ್ಲಿಲ್ಲ ಎಂಬ ವರದಿಯೊಂದಿಗೆ ಮರಳಿದರು. ನಿಮ್ಹಾನ್ಸ್ನಲ್ಲಿ ವೈದ್ಯರ ವಿವರವಾದ ವೈದ್ಯಕೀಯ ಪರೀಕ್ಷೆಯನ್ನು ಕೋರಿ ಎಸ್ಪಿಪಿ ಮತ್ತೆ ಮೆಮೊ ಸಲ್ಲಿಸಿದೆ.
ಆಗಸ್ಟ್ 21, 2023 ರಂದು ವೈದ್ಯರು ಅಲ್ಟ್ರಾ ಸೆನ್ಸಾರ್ನಿಂದ ಬಳಲುತ್ತಿದ್ದು, ಅವರನ್ನು ನಿಮ್ಹಾನ್ಸ್ಗೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ಪುಲಿಕೇಶಿನಗರ ಇನ್ಸ್ ಪೆಕ್ಟರ್ ವರದಿಯನ್ನು ಸಲ್ಲಿಸಿದರು. ನಂತರ ಗಾಯಾಳು ವೈದ್ಯರ ಮನೆಗೆ ಭೇಟಿ ನೀಡಿದ ನಿಮ್ಹಾನ್ಸ್ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿ ವೈದ್ಯರಿಗೆ ನರ ದೌರ್ಬಲ್ಯ, ಕಿರಿಕಿರಿ, ನಡುಕ , ಕರುಳು ಮತ್ತು ಮೂತ್ರಕೋಶ ನಿಯಂತ್ರಣದಲ್ಲಿ ತೊಂದರೆ ಇದೆ ಎಂದು ವರದಿ ಸಲ್ಲಿಸಿದರು.
ವೈದ್ಯರ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲ: ಆಕ್ಷೇಪ : ಮತ್ತೆ, ವೈದ್ಯರ ಆರೋಗ್ಯ ಸ್ಥಿರವಾಗಿಲ್ಲ ಮತ್ತು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಲು ನಿರಾಕರಿಸುತ್ತಿದ್ದಾರೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ವೈದ್ಯರ ಸ್ಥಿತಿಯು ತೀವ್ರವಾಗಿ ಸುಧಾರಿಸಿದ್ದು, ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸುವಂತೆ ನ್ಯಾಯಾಲಯವು ನಿಮ್ಹಾನ್ಸ್ಗೆ ನಿರ್ದೇಶಿಸಬಹುದು ಎಂದು SPP ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿಗಳು, ವೈದ್ಯರ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲ. ಪ್ರಕರಣವನ್ನು ಮತ್ತಷ್ಟು ಎಳೆಯಲು ಮಾತ್ರ ಮೆಮೊ ಸಲ್ಲಿಸಲಾಗಿದೆ. ಜನವರಿ 17, 2023 ರಿಂದ ಡಿಸೆಂಬರ್ 4, 2023 ರವರೆಗೆ 348 ದಿನಗಳವರೆಗೆ, ಪ್ರಾಸಿಕ್ಯೂಷನ್ ವಿಚಾರಣೆ ತಡೆಗೆ ಪ್ರಯತ್ನಿಸಿದ್ದರಿಂದ ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ. ಅಪಘಾತದ ಸಮಯದಲ್ಲಿ ವೈದ್ಯರು ಕುಡಿದಿದ್ದರು ಎಂದು ಡಿಸ್ಚಾರ್ಜ್ ಸಾರಾಂಶವು ತೋರಿಸಿದೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 21ಕ್ಕೆ ವಿಚಾರಣೆ ಮುಂದೂಡಿಕೆ: ವೈದ್ಯರ ವೈದ್ಯಕೀಯ ಪರೀಕ್ಷೆ ನಡೆಸಿ ವರದಿಯನ್ನು ನೀಡುವಂತೆ ಮಾರ್ಚ್ 25, 2025 ರಂದು ನ್ಯಾಯಾಲಯವು ನಿಮ್ಹಾನ್ಸ್ ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಿತ್ತು. ವೈದ್ಯರನ್ನು ನಿಮ್ಹಾನ್ಸ್ಗೆ ಕರೆದೊಯ್ಯಲು ವ್ಯವಸ್ಥೆ ಮಾಡುವಂತೆ ಪುಲಿಕೇಶಿನಗರ ಪೊಲೀಸರಿಗೆ ಸೂಚಿಸಲಾಗಿತ್ತು. ಆದರೆ ವೈದ್ಯರು ಸಹಕರಿಸಿಲ್ಲ ಎಂದು ಪೊಲೀಸರು ಏಪ್ರಿಲ್ 15ರಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ವಿಚಾರಣೆಯನ್ನು ಮತ್ತೆ ಏಪ್ರಿಲ್ 21ಕ್ಕೆ ಮುಂದೂಡಲಾಗಿದೆ.
Advertisement