ಬೆಂಗಳೂರು: ಜಾತಿ ಗಣತಿ ವೇಳೆ ಕರ್ತವ್ಯ ಲೋಪ; ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಮೂವರು ಅಧಿಕಾರಿಗಳ ಅಮಾನತು

ಅಮಾನತುಗೊಂಡಿರುವ ಅಧಿಕಾರಿಗಳಾದ ರಮೇಶ್, ಪೆದ್ದರಾಜು ಮತ್ತು ಸಿ ಸೆಂಥಿಲ್ ಕುಮಾರ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಕಂದಾಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
Representative Image
ಅಮಾನತು (ಸಾಂಕೇತಿಕ ಚಿತ್ರ)
Updated on

ಬೆಂಗಳೂರು: ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಸುವಾಗ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಬೆಂಗಳೂರು ನಾಗರಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡಿರುವ ಅಧಿಕಾರಿಗಳಾದ ರಮೇಶ್, ಪೆದ್ದರಾಜು ಮತ್ತು ಸಿ ಸೆಂಥಿಲ್ ಕುಮಾರ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಕಂದಾಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬಿಬಿಎಂಪಿ ವಲಯ ಆಯುಕ್ತ (ಪೂರ್ವ ವಲಯ) ಸ್ನೇಹಲ್ ಆರ್ ಜುಲೈ 2 ರಂದು ಹೊರಡಿಸಿದ ಅಮಾನತು ಆದೇಶದ ಪ್ರಕಾರ, ಕಂದಾಯ ನಿರೀಕ್ಷಕ ರಮೇಶ್ ಮತ್ತು ತೆರಿಗೆ ಸಂಗ್ರಾಹಕ ಪೆದ್ದರಾಜು ಅವರು ತಮ್ಮ ಅಡಿಯಲ್ಲಿ ಕೆಲಸ ಮಾಡುವ ಗಣತಿದಾರರು ಮನೆಯ ನಿವಾಸಿಗಳನ್ನು ಸಂಪರ್ಕಿಸಿ ಸಮೀಕ್ಷೆ ಪೂರ್ಣಗೊಳಿಸಿದ ನಂತರ ಅಂತಹ ಮನೆಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಮುಗಿದ ನಂತರ, ಅವರು ಮೊಬೈಲ್ ಅಪ್ಲಿಕೇಶನ್ ಮೂಲಕ ಡೇಟಾವನ್ನು ಅಪ್‌ಲೋಡ್ ಮಾಡಬೇಕಾಗಿತ್ತು.

ಆದರೆ, ಗಣತಿದಾರರು ಮತ್ತು ಸಿಬ್ಬಂದಿ HRBR ಲೇಔಟ್‌ನಲ್ಲಿ ಆಯಾ ಮನೆಗಳ ಮಾಲೀಕರು ಮತ್ತು ನಿವಾಸಿಗಳನ್ನು ಸಂಪರ್ಕಿಸಿ ಜಾತಿ ಗಣತಿ ನಡೆಸದೆಯೇ ಸ್ಟಿಕ್ಕರ್‌ಗಳನ್ನು ಸ್ವೇಚ್ಛೆಯಿಂದ ಅಂಟಿಸುತ್ತಿರುವುದು ಕಂಡುಬಂದಿದೆ. ಈ ಮೂವರು ಅಧಿಕಾರಿಗಳು ಇದನ್ನು ಗಮನಿಸಲು ವಿಫಲರಾಗಿದ್ದಾರೆ ಮತ್ತು ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅಧಿಕಾರಿಗಳ ಕಡೆಯಿಂದ ಕರ್ತವ್ಯ ಲೋಪ ಕಂಡುಬಂದ ಕಾರಣ, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

Representative Image
ಪರಿಶಿಷ್ಟ ಜಾತಿ ಸಮೀಕ್ಷೆ: ಸಮೀಕ್ಷಾ ತಂಡ ನಿಮ್ಮ ಮನೆ ತಲುಪಿರುವುದನ್ನು ಮಾತ್ರ ಸ್ಟಿಕ್ಕರ್ ಸೂಚಿಸುತ್ತದೆ: BBMP ಸ್ಪಷ್ಟನೆ

ಅದೇ ರೀತಿ, ರಾಜರಾಜೇಶ್ವರಿ ನಗರದ ಬಿಬಿಎಂಪಿ ವಲಯದಲ್ಲಿ ಕೆಲಸ ಮಾಡುತ್ತಿರುವ ತೆರಿಗೆ ಸಂಗ್ರಹಕಾರ ಸೆಂಥಿಲ್ ಕುಮಾರ್ ಕೂಡ ನಿರ್ಲಕ್ಷ್ಯ ತೋರಿದ್ದು, ಅವರನ್ನು ಸಹ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಾತಿ ಗಣತಿ ಸರಿಯಾಗಿ ನಡೆಯುತ್ತಿಲ್ಲ ಎಂದು ಜನರು ಭಾವಿಸಿದರೆ, ಅಂತಹವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದರಲ್ಲಿ ಏನಾದರೂ ಸಮಸ್ಯೆ ಇದೆಯೇ? ನಾವು ಆನ್‌ಲೈನ್‌ನಲ್ಲಿ ಗಣತಿ ಮಾಡುತ್ತೇವೆ, ಮನೆ ಮನೆಗೆ ತೆರಳಿಯೂ ಗಣತಿ ಮಾಡುತ್ತೇವೆ ಮತ್ತು ಶಿಬಿರಗಳಲ್ಲಿಯೂ ಮಾಡುತ್ತೇವೆ. ನೀವು ಮೂರು ವಿಧಾನಗಳಲ್ಲಿ ನೀವು ಯಾವುದನ್ನಾದರೂ ಆಯ್ದುಕೊಂಡು ನಿಮ್ಮ ಜಾತಿಯ ಬಗ್ಗೆ ಮಾಹಿತಿ ನೀಡಬೇಕು. ಇದು ಪರಿಶಿಷ್ಟ ಜಾತಿಗೆ ಮಾತ್ರ ಸಂಬಂಧಿಸಿದೆ' ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com