ಬೆಂಗಳೂರು: BMTC ಬಸ್ ನಲ್ಲಿ ಮೊಬೈಲ್ ದೋಚುತ್ತಿದ್ದ ಆರು ಖದೀಮರ ಬಂಧನ

ಆರೋಪಿಗಳನ್ನು ಆಂಧ್ರ ಪ್ರದೇಶದ ನಾಗನೂರಿ ಕುಮಾರ್ (20), ಸಾಗರ್ ಸಣ್ಣಕ್ಕಿ (32), ಶಿವಕುಮಾರ್ (30), ಗುಡ್ಡು ಸಾಬ್ (36), ಹಾಲಪ್ಪ (29) ಮತ್ತು ಶಿವಶಂಕರ್ (20) ಎಂದು ಗುರುತಿಸಲಾಗಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರು ಖದೀಮರ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದು, ಅವರಿಂದ ₹25 ಲಕ್ಷ ಮೌಲ್ಯದ 70 ಮೊಬೈಲ್ ಫೋನ್‌ಗಳು, ಕಾರು ಮತ್ತು ಬೈಕ್ ವೊಂದನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಆಂಧ್ರ ಪ್ರದೇಶದ ನಾಗನೂರಿ ಕುಮಾರ್ (20), ಸಾಗರ್ ಸಣ್ಣಕ್ಕಿ (32), ಶಿವಕುಮಾರ್ (30), ಗುಡ್ಡು ಸಾಬ್ (36), ಹಾಲಪ್ಪ (29) ಮತ್ತು ಶಿವಶಂಕರ್ (20) ಎಂದು ಗುರುತಿಸಲಾಗಿದೆ.

ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತುತ್ತಿದ್ದ ಈ ಗ್ಯಾಂಗ್, ಬಸ್ ಹತ್ತುವ ಸಮಯದಲ್ಲಿ ತಳ್ಳಾಡಿಕೊಂಡು ಪ್ರಯಾಣಿಕರ ಜೇಬಿನಲ್ಲಿದ್ದ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದರು.

ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿಯ ಪ್ರಗತಿನಗರದ ನಿವಾಸಿಯೊಬ್ಬರು ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ.

Casual Images
ರೈಲಿನಲ್ಲಿ ಕಳ್ಳತನ: ಬೆಂಗಳೂರಿನಲ್ಲಿ ವಾಹನ ವ್ಯಾಪಾರಿ ಬಂಧನ, 81 ಗ್ರಾಂ ಚಿನ್ನ ವಶ

ಈ ಗ್ಯಾಂಗ್ ಕದ್ದ ಮೊಬೈಲ್ ಗಳನ್ನು ಆಂಧ್ರ ಪ್ರದೇಶ ಹಾಗೂ ಬೆಂಗಳೂರಿನ ಕೆಲವು ಕಡೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಇನ್ನೂ ಕೆಲವು ಮೊಬೈಲ್ ಗಳ ಬಿಡಿ ಭಾಗಗಳನ್ನು ಬೇರ್ಪಡಿಸಿ ಮಾರಾಟ ಮಾಡಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com