ಚಾಮರಾಜನಗರ: 'ನಿನ್ನ ಜೊತೆ ಹೊರಗೆ ಹೋಗಲು ನಾಚಿಕೆ ಆಗುತ್ತೆ'; ಬೋಳುತಲೆ ಬಗ್ಗೆ ಪತ್ನಿ ಗೇಲಿ, ಮನನೊಂದು ಪತಿ ನೇಣಿಗೆ ಶರಣು!

ಬೋಳು ತಲೆ ಎಂದು ಪದೇ ಪದೇ ಗೇಲಿ ಮಾಡುತ್ತಿದ್ದರಿಂದ ಮನನೊಂದ ಪತಿಯೊಬ್ಬ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ: 'ನಿನ್ನ ಜೊತೆ ಹೊರಗೆ ಹೋಗಲು ನಾಚಿಕೆ ಆಗುತ್ತೆ'; ಬೋಳುತಲೆ ಬಗ್ಗೆ ಪತ್ನಿ ಗೇಲಿ, ಮನನೊಂದು ಪತಿ ನೇಣಿಗೆ ಶರಣು!
Updated on

ಚಾಮರಾಜನಗರ: ಬೋಳು ತಲೆ ಎಂದು ಪದೇ ಪದೇ ಗೇಲಿ ಮಾಡುತ್ತಿದ್ದರಿಂದ ಮನನೊಂದ ಪತಿಯೊಬ್ಬ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ನಡೆದಿದೆ.

ಮೃತನನ್ನು 32 ವರ್ಷದ ಪರಶಿವಮೂರ್ತಿ ಎಂದು ಗುರುತಿಸಲಾಗಿದೆ. ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಗೇಲಿ ಮಾಡುತ್ತಿದ್ದಳು. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಕಳೆದ ಎರಡು ವರ್ಷದ ಹಿಂದೆ ಮಮತಾಳನ್ನು ಪರಶಿವಮೂರ್ತಿ ವರಿಸಿದ್ದರು.

ಲಾರಿ ಚಾಲಕನಾಗಿದ್ದ ಪರಶಿವಮೂರ್ತಿಗೆ ಮದುವೆ ಬಳಿಕ ಕೂದಲು ಸಂಪೂರ್ಣ ಉದುರಿತ್ತು. ಹೀಗಾಗಿ ಮಮತಾ ನಿನ್ನ ಜೊತೆ ಹೊರಗಡೆ ಹೋಗಲು ನನೆಗೆ ನಾಚಿಕೆಯಾಗುತ್ತೆ ಎಂದು ಗೇಲಿ ಮಾಡುತ್ತಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲದೆ ಸುಳ್ಳು ವರದಕ್ಷಿಣೆ ಕಿರುಕುಳ ಪ್ರಕರಣ ಸಹ ಮಮತಾ ದಾಖಲಿಸಿದ್ದು, ಪರಶಿವಮೂರ್ತಿಯನ್ನ ಜೈಲಿಗೂ ಕಳುಹಿಸಿದ್ದಳು. ಇಷ್ಟೇ ಅಲ್ಲದೆ ಮದುವೆಯಾಗಿದ್ದರೂ ತಾಳಿ ಇಲ್ಲದ ಫೋಟೋಗಳನ್ನು ಮಮತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಳು.

ಇದೇ ವಿಚಾರಕ್ಕೆ ಮನೆಯಲ್ಲಿ ಪದೇಪದೆ ಜಗಳ ಆಗುತ್ತಿತ್ತು. ಇದರಿಂದ ಬೇಸರಗೊಂಡಿದ್ದ ಪರಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಪೊಲೀಸರು ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದ್ದಾರೆ.

ಚಾಮರಾಜನಗರ: 'ನಿನ್ನ ಜೊತೆ ಹೊರಗೆ ಹೋಗಲು ನಾಚಿಕೆ ಆಗುತ್ತೆ'; ಬೋಳುತಲೆ ಬಗ್ಗೆ ಪತ್ನಿ ಗೇಲಿ, ಮನನೊಂದು ಪತಿ ನೇಣಿಗೆ ಶರಣು!
ರಾಮನಗರ: ಪ್ರತಿಷ್ಠಿತ ಕಾರ್ಖಾನೆ ಶೌಚಾಲಯದಲ್ಲಿ ಪಾಕ್ ಪರ ಬರಹ; ಕಿಡಿಗೇಡಿಗಳಿಗಾಗಿ ಪೊಲೀಸರ ಹುಡುಕಾಟ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com