ರಾಜ್ಯದಾದ್ಯಂತ ಹೋಟೆಲ್‌, ಮೆಸ್‌, ಬೇಕರಿ ಮೇಲೆ FDA ದಾಳಿ; ಚಹಾ ಪುಡಿ, ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ ಪತ್ತೆ!

ಆಹಾರ ತಯಾರಿಕೆಯಲ್ಲಿ ಕಲಬೆರಕೆ ಮಸಾಲೆಗಳನ್ನು ಬಳಸಲಾಗುತ್ತಿರುವುದು ಮತ್ತು ಬೆಲ್ಲ, ಎಣ್ಣೆ, ಪನೀರ್, ಖೋಯಾ ಮತ್ತು ಚಹಾ ಪುಡಿಯಂತಹ ವಸ್ತುಗಳಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಇರುವುದು ತಪಾಸಣೆ ವೇಳೆ ಕಂಡುಬಂದಿದೆ ಎಂದು ಎಫ್‌ಡಿಎ ಅಧಿಕಾರಿಗಳು ಟಿಎನ್‌ಐಇಗೆ ತಿಳಿಸಿದ್ದಾರೆ.
ಚಹಾ ಪುಡಿ
ಚಹಾ ಪುಡಿ
Updated on

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ಇಡ್ಲಿ ಮತ್ತು ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿದ ನಂತರ, ಆಹಾರದ ಗುಣಮಟ್ಟದ ಕುರಿತು ಇಲಾಖೆಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಇದರ ಪರಿಣಾಮವಾಗಿ, ರಾಜ್ಯದಾದ್ಯಂತ ಹೋಟೆಲ್‌ಗಳು, ಮೆಸ್‌ಗಳು ಮತ್ತು ಬೇಕರಿಗಳಲ್ಲಿ ಎಫ್‌ಡಿಎ ತಪಾಸಣೆಗಳನ್ನು ಪ್ರಾರಂಭಿಸಿದೆ.

ಆಹಾರ ತಯಾರಿಕೆಯಲ್ಲಿ ಕಲಬೆರಕೆ ಮಸಾಲೆಗಳನ್ನು ಬಳಸಲಾಗುತ್ತಿರುವುದು ಮತ್ತು ಬೆಲ್ಲ, ಎಣ್ಣೆ, ಪನೀರ್, ಖೋಯಾ ಮತ್ತು ಚಹಾ ಪುಡಿಯಂತಹ ವಸ್ತುಗಳಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಇರುವುದು ತಪಾಸಣೆ ವೇಳೆ ಕಂಡುಬಂದಿದೆ ಎಂದು ಎಫ್‌ಡಿಎ ಅಧಿಕಾರಿಗಳು ಟಿಎನ್‌ಐಇಗೆ ತಿಳಿಸಿದ್ದಾರೆ.

ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ವಿಷಾಹಾರ ಸೇವನೆ ಪ್ರಕರಣದ ನಂತರ, ವಿಶೇಷವಾಗಿ ಕಾಲೇಜುಗಳು ಮತ್ತು ಕಚೇರಿಗಳ ಬಳಿ ಲಭ್ಯವಾಗುವ ಆಹಾರ ಪದಾರ್ಥಗಳ ತಪಾಸಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಇಬ್ಬರು ಖಾಸಗಿ ಶಾಲಾ ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, ಇತರರು ಅಸ್ವಸ್ಥರಾದರು ಎಂದು FDA ಮೂಲಗಳು ತಿಳಿಸಿವೆ.

ಚಹಾ ಪುಡಿ ಸೇರಿದಂತೆ ಹಲವಾರು ವಸ್ತುಗಳು ಕಲಬೆರಕೆಯಾಗಿರುವುದು ಕಂಡುಬಂದಿದ್ದು, ಕಡಿಮೆ ದರ್ಜೆಯ ಚಹಾ ಮತ್ತು ಈ ಹಿಂದೆ ತಯಾರಿಸಿದ ಚಹಾ ಪುಡಿಯನ್ನೇ ಒಣಗಿಸಲಾಗುತ್ತದೆ ಮತ್ತು ಕೃತಕ ಬಣ್ಣ ಬಳಸಿ ಅವುಗಳನ್ನೇ ಬಳಸಲಾಗುತ್ತಿದೆ. 'ಹೆಚ್ಚಿನ ಅಂಗಡಿಗಳು ಕುದಿಸಿದ ಚಹಾ ಪುಡಿಯನ್ನು ಇತರ ತ್ಯಾಜ್ಯದೊಂದಿಗೆ ಬೆರೆಸುವುದಿಲ್ಲ. ಬದಲಿಗೆ, ಅದನ್ನು ಒಣಗಿಸಿ ಮರುಬಳಕೆ ಮಾಡುತ್ತವೆ' ಎಂದು ಅಧಿಕಾರಿ ಹೇಳಿದರು.

ಚಹಾ ಪುಡಿ
ಯುಗಾದಿಗೂ ಮುನ್ನ ಶಾಕ್: ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಕವರ್ ಬಳಕೆಗೆ FDA ನಿಷೇಧ; ಕಲಬೆರಕೆ ಬೆಲ್ಲ ಪತ್ತೆ!

ಇದಲ್ಲದೆ, ಅನೇಕ ಆಹಾರ ಪದಾರ್ಥಗಳನ್ನು ಕಲಬೆರಕೆ ಮಸಾಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಹೆಚ್ಚಿನ ಬೇಡಿಕೆಯಿರುವ ಮತ್ತು ಪುಡಿ ರೂಪದಲ್ಲಿರುವ ಅರಿಶಿನ, ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿಗಳು ಸಾಮಾನ್ಯವಾಗಿ ಕಲಬೆರಕೆಯಾಗಿರುತ್ತವೆ. ಅರಿಶಿನವನ್ನು ಹೆಚ್ಚಾಗಿ ಮೆಟಾನಿಲ್ ಹಳದಿ, ಸಂಶ್ಲೇಷಿತ ಬಣ್ಣ ಅಥವಾ ಸೀಸದ ಕ್ರೋಮೇಟ್‌ನೊಂದಿಗೆ ಬೆರೆಸಿ ಬಣ್ಣ ಹೆಚ್ಚಿಸಲಾಗುತ್ತಿದೆ. ಇವೆರಡೂ ಹಾನಿಕಾರಕವಾಗಿವೆ. ಅದೇ ರೀತಿ, ಮೆಣಸಿನ ಪುಡಿಯನ್ನು ಸುಡಾನ್ ರೆಡ್‌ನಂತಹ ಕೃತಕ ಬಣ್ಣಗಳೊಂದಿಗೆ ಕಲಬೆರಕೆ ಮಾಡಲಾಗುತ್ತದೆ. ಇದು ಕ್ಯಾನ್ಸರ್ ಕಾರಕ ಎಂದು ತಿಳಿದುಬಂದಿದೆ ಎಂದು ಇಲಾಖೆಯ ಅಧಿಕಾರಿ ಹೇಳಿದರು.

ಕಲಬೆರಕೆ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕಾಲಾನಂತರದಲ್ಲಿ ಅವು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಅಧಿಕಾರಿ ಎಚ್ಚರಿಸಿದ್ದಾರೆ.

'ಮೆಟಾನಿಲ್ ಹಳದಿ, ಸೀಸದ ಕ್ರೋಮೇಟ್ ಮತ್ತು ಸುಡಾನ್ ಕೆಂಪು ಮುಂತಾದ ಹಾನಿಕಾರಕ ರಾಸಾಯನಿಕಗಳನ್ನು ಬೆರೆಸಿರುವ ಮಸಾಲೆಗಳು ಜೀರ್ಣಕಾರಿ ಸಮಸ್ಯೆಗಳು, ಯಕೃತ್ತು ಮತ್ತು ಮೂತ್ರಪಿಂಡದ ಹಾನಿ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಂತಹ ಕಲಬೆರಕೆ ಪದಾರ್ಥಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ನರವೈಜ್ಞಾನಿಕ ಅಸ್ವಸ್ಥತೆಗಳು, ಉಸಿರಾಟದ ತೊಂದರೆಗಳು ಮತ್ತು ಅಂಗಗಳ ಕಾರ್ಯವು ದುರ್ಬಲಗೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ, ಅವು ಜಠರಗರುಳಿನ ಅಸ್ವಸ್ಥತೆ ಮತ್ತು ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಅವರು ವಿವರಿಸಿದರು.

ಚಹಾ ಪುಡಿ
'ಆಹಾರ ಪದಾರ್ಥಗಳ ಕಲಬೆರಕೆ' ಪತ್ತೆ ಕಿಟ್: ದೇಶದಲ್ಲೇ ಮೊದಲು; ಫುಡ್ ಟೆಸ್ಟಿಂಗ್ ಕೇಂದ್ರಕ್ಕೆ ಚಾಲನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com