ರಾಯಚೂರು: ಪತ್ನಿಗೆ ಕೈಕೊಟ್ಟು ಸುಂದರಿ ಹಿಂದೆ ಬಿದ್ದು 2ನೇ ಮದ್ವೆ; ಜೀವನಾಂಶ ಕೇಳಿದ್ದಕ್ಕೆ ಮೊದಲ ಹೆಂಡ್ತಿಗೆ ಮಚ್ಚಿನೇಟು!

ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಯಾಗಿದ್ದ ವ್ಯಕ್ತಿಯೋರ್ವ ಇದೀಗ ಮೊದಲ ಪತ್ನಿಗೆ ಮೇಲೆ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ನಡೆದಿದೆ.
ರಾಯಚೂರು: ಪತ್ನಿಗೆ ಕೈಕೊಟ್ಟು ಸುಂದರಿ ಹಿಂದೆ ಬಿದ್ದು 2ನೇ ಮದ್ವೆ; ಜೀವನಾಂಶ ಕೇಳಿದ್ದಕ್ಕೆ ಮೊದಲ ಹೆಂಡ್ತಿಗೆ ಮಚ್ಚಿನೇಟು!
Updated on

ರಾಯಚೂರು: ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಯಾಗಿದ್ದ ವ್ಯಕ್ತಿಯೋರ್ವ ಇದೀಗ ಮೊದಲ ಪತ್ನಿಗೆ ಮೇಲೆ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಬೈಕ್​ನಲ್ಲಿ ಬಂದ ತಿಮ್ಮಪ್ಪ ಪತ್ನಿ ಪದ್ಮಾವತಿ ಹಾಗೂ ನಾದಿನಿ ಭೂದೇವಿ ಮೇಲೆ ಮಚ್ಚಿನಿಂದ ಮನಬಂದಂತೆ ದಾಳಿ ಮಾಡಿದ್ದಾನೆ. ಈ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಜನ ಬೆಚ್ಚಿಬಿದ್ದಿದ್ದಾರೆ. ತಿಮ್ಮಪ್ಪ ಎರಡನೇ ಮದುವೆಯಾಗಿದ್ದ ಹೀಗಾಗಿ ಪದ್ಮಾವತಿ ಕೋರ್ಟ್​ ಮೊರೆ ಹೋಗಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಜೀವನಾಂಶ ನೀಡುವಂತೆ ಕೋರ್ಟ್ ಸಹ ತಿಮ್ಮಪ್ಪಗೆ ಸೂಚಿಸಿತ್ತು. ಆದರೆ ಜೀವನಾಂಶ ಕೊಡದಿದ್ದರಿಂದ ಜೈಲು ಸೇರಿದ್ದನು. ಅಲ್ಲದೆ ಜೈಲಿನಿಂದ ಹೊರ ಬಂದ ಬಳಿಕ ಪತ್ನಿಗೆ ಹಿಂಸೆ ಕೊಡಲಾರಂಭಿಸಿದ್ದಾನೆ. ಅಲ್ಲದೆ ಪತ್ನಿ ಮತ್ತು ನಾದಿನಿ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದರಿಂದ ಪದ್ಮಾವತಿಯ ಕೈ ಬೆರಳುಗಳು ತುಂಡಾಗಿವೆ. ಭೂದೇವಿಯ ಮುಂಗೈ ತುಂಡಾಗಿದ್ದು ಸದ್ಯ ರಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ಪತ್ನಿಗೆ ಕೈಕೊಟ್ಟು ಸುಂದರಿ ಹಿಂದೆ ಬಿದ್ದು 2ನೇ ಮದ್ವೆ; ಜೀವನಾಂಶ ಕೇಳಿದ್ದಕ್ಕೆ ಮೊದಲ ಹೆಂಡ್ತಿಗೆ ಮಚ್ಚಿನೇಟು!
ಯುಗಾದಿ ಹಬ್ಬದ ನಡುವೆ ಕಹಿ ಸುದ್ದಿ: ವಿಷ್ಣು ದೇವರ ವಿಗ್ರಹ ಧ್ವಂಸ; ಗೃಹ ಸಚಿವರ ಸ್ವಕ್ಷೇತ್ರದಲ್ಲೇ ಘಟನೆ, Video Viral!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com