ಮಕ್ಕಳ ಜಗಳ ಕೊಲೆಯಲ್ಲಿ ಅಂತ್ಯ: 8 ವರ್ಷದ ಬಾಲಕನ ಹತ್ಯೆಗೈದ ನೆರೆಮನೆಯ ಸೆಕ್ಯುರಿಟಿ ಗಾರ್ಡ್

ರಮಾನಂದ ಎಂಬ 8 ವರ್ಷದ ಬಾಲಕ ನೆರೆಮನೆಯ ಹೆಣ್ಣುಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅವರಿಗೆ ಹೊಡೆದಿದ್ದಾನೆ, ಇದು ಒಂದು ವಾರಕ್ಕೂ ಹೆಚ್ಚು ಕಾಲ ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು.
 Murdered boy and accused
ಕೊಲೆಯಾದ ಬಾಲಕ ಮತ್ತು ಮಾತೂರ್
Updated on

ಬೆಂಗಳೂರು: ಇಬ್ಬರು ಮಕ್ಕಳ ಆಟ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಹಾರ ಮೂಲದ ಆರೋಪಿ ಚಂದೇಶ್ವರ್ ಮಾತೂರ್ (36ವ) ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಡೆದ ಘಟನೆಯೇನು?

ರಮಾನಂದ ಎಂಬ 8 ವರ್ಷದ ಬಾಲಕ ನೆರೆಮನೆಯ ಹೆಣ್ಣುಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅವರಿಗೆ ಹೊಡೆದಿದ್ದಾನೆ, ಇದು ಒಂದು ವಾರಕ್ಕೂ ಹೆಚ್ಚು ಕಾಲ ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು. ಆರೋಪಿ ಸೆಕ್ಯುರಿಟಿ ಗಾರ್ಡ್ ಹುಡುಗನನ್ನು ಕೊಂದು, ಶವವನ್ನು ಗೋಣಿ ಚೀಲದಲ್ಲಿ ತುಂಬಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಯಸಂದ್ರ ಕೆರೆಯ ದಡದಲ್ಲಿ ಎಸೆದಿದ್ದಾನೆ.

ರಮಾನಂದ ಕುಟುಂಬವು ರಾಯಸಂದ್ರದ ದೊಡ್ಡಮರ ರಸ್ತೆಯಲ್ಲಿ ವಾಸಿಸುತ್ತಿದೆ. ಅವರ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು ತಾಯಿ ಅಪಾರ್ಟ್‌ಮೆಂಟ್‌ನಲ್ಲಿ ಮನೆಕೆಲಸ ಮಾಡುತ್ತಿದ್ದರು. ಪೋಷಕರು ಅವನನ್ನು ಶಾಲೆಗೆ ಸೇರಿಸಿರಲಿಲ್ಲ. ತಂದೆ ಮಾತೂರ್ ಆಗ್ನೇಯ ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದನು.

ಮಾತೂರ್ ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ರಮಾನಂದನ ಮನೆಯ ಎದುರಿನ ಮನೆಯಲ್ಲಿ ವಾಸಿಸುತ್ತಿದ್ದ. ಎರಡೂ ಕುಟುಂಬಗಳು ಬಿಹಾರ ಮೂಲದವರು. ರಮಾನಂದ ಆಟವಾಡುವಾಗ ಮಾತೂರ್‌ನ ಹೆಣ್ಣುಮಕ್ಕಳೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನು ಅವರಿಗೆ ಹೊಡೆಯುತ್ತಿದ್ದನಂತೆ.

ತನ್ನ ಮಕ್ಕಳಿಗೆ ಹೊಡೆಯಬೇಡ ಎಂದು ಮಾತೂರ್ ಬಾಲಕನಿಗೆ ಹಲವಾರು ಬಾರಿ ಎಚ್ಚರಿಸಿದ್ದನು. ಮಕ್ಕಳ ನಡುವೆ ಆಗಾಗ್ಗೆ ನಡೆಯುತ್ತಿದ್ದ ಜಗಳಗಳು ಅಂತಿಮವಾಗಿ ಕುಟುಂಬಗಳ ನಡುವೆ ಜಗಳಗಳಾಗಿ ಬೆಳೆದವು.

ಪೋಷಕರು ಇಬ್ಬರೂ ಹಗಲಿನಲ್ಲಿ ಕೆಲಸಕ್ಕೆ ಹೋಗಿದ್ದರಿಂದ, ಮಕ್ಕಳು ಮನೆಯಲ್ಲಿಯೇ ಇದ್ದರು, ಆಗಾಗ್ಗೆ ಒಟ್ಟಿಗೆ ಆಟವಾಡುತ್ತಿದ್ದರು ಮತ್ತು ಜಗಳವಾಡುತ್ತಿದ್ದರು, ಸಂಜೆ ಹಿಂತಿರುಗಿದಾಗ ಪೋಷಕರ ನಡುವೆ ಜಗಳಗಳಿಗೆ ಕಾರಣವಾಗುತ್ತಿತ್ತು.

 Murdered boy and accused
ಘನಘೋರ: ಗಂಡ ಹೆಂಡತಿ ಜಗಳ; ಇಬ್ಬರು ಮಕ್ಕಳು, ಪತ್ನಿ ಕೊಂದು ವ್ಯಕ್ತಿ ತಾನು ಆತ್ಮಹತ್ಯೆಗೆ ಶರಣು!

ಮೇ 6 ರಂದು, ಪಾನಮತ್ತನಾಗಿ ಬಂದಿದ್ದ ಮಾತೂರ್, ರಮಾನಂದನೊಂದಿಗೆ ಪ್ರೀತಿಯಿಂದ ಮಾತನಾಡಿ ಸಂಜೆ 6.40 ರ ಸುಮಾರಿಗೆ ಅವನನ್ನು ವಾಕಿಂಗ್ ಗೆಂದು ಕರೆದೊಯ್ದನು. ನಂತರ ರಾಯಸಂದ್ರ ಕೆರೆ ಬಳಿ ಹುಡುಗನನ್ನು ಕತ್ತು ಹಿಸುಕಿ, ಶವವನ್ನು ಗೋಣಿಚೀಲದಲ್ಲಿ ತುಂಬಿಸಿ, ಮನೆಗೆ ಹಿಂದಿರುಗುವ ಮೊದಲು ಕೆರೆಯ ಬಳಿ ಶವವನ್ನು ಎಸೆದು ಬಂದಿದ್ದನು.

ಬಾಲಕನ ಪೋಷಕರು ಎಷ್ಟು ಹುಡುಕಿದರೂ ಸಿಗಲಿಲ್ಲ. ಮರುದಿನ, ಕುಟುಂಬಗಳು ತೀವ್ರ ಜಗಳವಾಡಿದವು, ಸ್ಥಳೀಯ ನಿವಾಸಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಎರಡೂ ಕುಟುಂಬಗಳನ್ನು ವಿಚಾರಣೆಗೆ ಕರೆತಂದರು.

ರಮಾನಂದನ ಪೋಷಕರು ಮಾತೂರ್ ತಮ್ಮ ಮಗನನ್ನು ಅಪಹರಿಸಿದ್ದಾನೆ ಎಂದು ಶಂಕಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಾತೂರ್ ಹುಡುಗನೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ನಂತರ ಅವನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com