ಈಜಿಪುರ ಮೇಲ್ಸೇತುವೆ ಕಾಮಗಾರಿ ವೇಗವಾಗಿ ಸಾಗುತ್ತಿದೆ, ಶೇ.50 ರಷ್ಟು ಕೆಲಸ ಪೂರ್ಣ: ಸಚಿವ ರಾಮಲಿಂಗಾ ರೆಡ್ಡಿ

726 ಕಾಂಕ್ರೀಟ್ ಸ್ಲ್ಯಾಬ್‌ಗಳ ಪೈಕಿ 291 ಸ್ಲ್ಯಾಬ್‌ಗಳನ್ನು ನಿರ್ಮಿಸಲಾಗಿದ್ದು, ಇನ್ನೂ 220 ಸ್ಲ್ಯಾಬ್‌ಗಳು ಸಿದ್ಧವಾಗಿವೆ. ಅವುಗಳನ್ನು ಸರಿಪಡಿಸಲಾಗುತ್ತಿದೆ.
ಈಜಿಪುರ ಮೇಲ್ಸೇತುವೆ
ಈಜಿಪುರ ಮೇಲ್ಸೇತುವೆ
Updated on

ಬೆಂಗಳೂರು: 2.5 ಕಿಲೋಮೀಟರ್ ಉದ್ದದ ಈಜಿಪುರ ಮೇಲ್ಸೇತುವೆ ಕಾಮಗಾರಿ ಕಾರ್ಯ ವೇಗ ಪಡೆದುಕೊಂಡಿದ್ದು, ಈಗಾಗಲೇ ಯೋಜನೆಯ ಶೇ.50ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿಯವರು ಹೇಳಿದ್ದಾರೆ.

726 ಕಾಂಕ್ರೀಟ್ ಸ್ಲ್ಯಾಬ್‌ಗಳ ಪೈಕಿ 291 ಸ್ಲ್ಯಾಬ್‌ಗಳನ್ನು ನಿರ್ಮಿಸಲಾಗಿದ್ದು, ಇನ್ನೂ 220 ಸ್ಲ್ಯಾಬ್‌ಗಳು ಸಿದ್ಧವಾಗಿವೆ. ಅವುಗಳನ್ನು ಸರಿಪಡಿಸಲಾಗುತ್ತಿದೆ. ಯೋಜನೆ ಪೂರ್ಣಗೊಳ್ಳಬೇಕು ಎಂಬ ಕಟ್ಟುನಿಟ್ಟಿನ ನಿರ್ದೇಶನಗಳನ್ನು ಕಂಪನಿ ಪಾಲಿಸುತ್ತಿದ್ದು, ಬಿಬಿಎಂಪಿ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಯೋಜನೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ಯೋಜನೆ ಕುರಿತು ಮಾತನಾಡಿರುವ ರಾಘವೇಂದ್ರ ಪ್ರಸಾದ್ ಅವರು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಚಂದ್ರಶೇಖರ್, ಸಂದೇಶ್ ಶೆಟ್ಟಿ ಮತ್ತು ರಂಜಿತ್ ಮತ್ತು ಗುಣಮಟ್ಟ ಮತ್ತು ನಿಯಂತ್ರಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಹೊಸ ತಂಡವು ಯೋಜನೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಕಾಮಗಾರಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಾಮಗಾರಿ ಪ್ರಗತಿಯನ್ನು ಪತ್ತೆಹಚ್ಚಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೂರ್ವನಿರ್ಮಿತ ಸ್ಲ್ಯಾಬ್‌ಗಳನ್ನು ಎತ್ತುವುದು ಮತ್ತು ನಿರ್ಮಿಸುವುದರ ಜೊತೆಗೆ ಎಂಜಿನಿಯರ್‌ಗಳು ಫ್ಲೈಓವರ್‌ನೊಂದಿಗೆ ಏಕಕಾಲದಲ್ಲಿ ಮಾಡಲಾಗುತ್ತಿರುವ ಮೀಡಿಯನ್ ಡಾಂಬರು ಮತ್ತು ಪಾದಚಾರಿ ಕಾಮಗಾರಿ ಕೆಲಸವನ್ನೂ ಸಹ ಕೈಗೆತ್ತಿಕೊಂಡಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಈಜಿಪುರ ಮೇಲ್ಸೇತುವೆ
ಬೆಂಗಳೂರು: ಡಿಸೆಂಬರ್ ವೇಳೆಗೆ ಈಜಿಪುರ ಮೇಲ್ಸೇತುವೆ ಯೋಜನೆ ಕಾಮಗಾರಿ ಪೂರ್ಣ!

ಈಗಾಗಲೇ ಯೋಜನೆಗಿದ್ದ ಭೂಸ್ವಾಧೀನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIOA) ಯೋಜನೆಗೆ ಅಗತ್ಯವಿರುವ ಭೂಮಿಯನ್ನು ನೀಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ.

ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆಯಿಂದ ಸರ್ಜಾಪುರದವರೆಗೆ 5,999 ಚದರ ಮೀಟರ್ ವಿಸ್ತೀರ್ಣದ ಭೂಮಿಯನ್ನು ಪಿಯರ್‌ಗಳು ಮತ್ತು ಕಂಬಗಳನ್ನು ನಿರ್ಮಿಸಲು ಸ್ವಾಧೀನಪಡಿಸಿಕೊಳ್ಳಲಾಗುವುದು. ಅದೇ ರೀತಿ, ಕೇಂದ್ರೀಯ ಸದನದ ಬಲಭಾಗದಲ್ಲಿರುವ IIOA ನಲ್ಲಿ 917 ಚದರ ಮೀಟರ್ ವಿಸ್ತೀರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಆಸ್ಪತ್ರೆ ಅಧಿಕಾರಿಗಳು ಪರಿಹಾರವನ್ನು ಕೇಳಿದ್ದಾರೆ. ಅದೇ ರೀತಿ, ಮಡಿವಾಳದಲ್ಲಿ ಎಡ ತಿರುವು ಬದಿಯಲ್ಲಿ 623 ಚದರ ಮೀಟರ್ ವಿಸ್ತೀರ್ಣದ ನಾಲ್ಕು ಆಸ್ತಿಗಳನ್ನು ಮತ್ತು ಈಜಿಪುರ ಬಳಿ 986.28 ಚದರ ಮೀಟರ್ ಅಳತೆಯ 32 ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಭೂಸ್ವಾಧೀನ ಸ್ವಾಧೀನ ಪ್ರಕ್ರಿಯೆ ಮುಗಿದ ನಂತರ ಕೆಲಸ ಸುಗಮವಾಗಿ ನಡೆಯಲಿದ್ದು, ಡಿಸೆಂಬರ್ ವೇಳೆಗೆ ಯೋಜನೆ ಸಿದ್ಧವಾಗಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com