ಜನರ ಬೆಂಬಲವನ್ನು ಹಗುರವಾಗಿ ಪರಿಗಣಿಸದಿರಿ: ಸರ್ಕಾರಕ್ಕೆ 'ಎದ್ದೇಳು ಕರ್ನಾಟಕ' ಎಚ್ಚರಿಕೆ

120 ಕ್ಕೂ ಹೆಚ್ಚು ನಾಗರಿಕ ಸಮಾಜ ಸಂಘಟನೆಗಳ ಸಮೂಹವಾದ ಎದ್ದೇಳು ಕರ್ನಾಟಕವು ಬುಧವಾರ ಹೇಳಿಕೆಯನ್ನು ಬಿಡುಗಡೆ ಮಾಡಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕಾರ್ಯಕ್ಷಮತೆಯನ್ನು ಟೀಕಿಸಿರುವ ರಾಜ್ಯದ ಪ್ರಮುಖ ನಾಗರಿಕರ ಒಕ್ಕೂಟವಾದ ಎದ್ದೇಳು ಕರ್ನಾಟಕ, ಜನರ ಬೆಂಬಲವನ್ನು ಹಗುರವಾಗಿ ಪರಿಗಣಿಸದಂತೆ ಎಚ್ಚರಿಕೆ ನೀಡಿದೆ.

120 ಕ್ಕೂ ಹೆಚ್ಚು ನಾಗರಿಕ ಸಮಾಜ ಸಂಘಟನೆಗಳ ಸಮೂಹವಾದ ಎದ್ದೇಳು ಕರ್ನಾಟಕವು ಬುಧವಾರ ಹೇಳಿಕೆಯನ್ನು ಬಿಡುಗಡೆ ಮಾಡಿತು. ಈ ವೇಳೆ ಕಾಂಗ್ರೆಸ್ ತನ್ನ ಕಣ್ಣು ಮತ್ತು ಕಿವಿಗಳನ್ನು ತೆರೆಯಬೇಕೆಂದು ಎಚ್ಚರಿಕೆ ನೀಡಿದೆ.

ಬಿಜೆಪಿಯ ಕೋಮುವಾದಿ ವಾಕ್ಚಾತುರ್ಯ ಮತ್ತು ಆಡಳಿತ ವೈಫಲ್ಯಗಳಿಂದ ನಿರಾಶೆಗೊಂಡು ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಬಿಜೆಪಿಯ ದುರಾಡಳಿತವು ಎಲ್ಲಾ ಮಿತಿಗಳನ್ನು ಮೀರಿದಾಗ, ಎದ್ದೇಳು ಕರ್ನಾಟಕವು ನಾಗರಿಕ ಪ್ರತಿಕ್ರಿಯೆಯಾಗಿ ಹೊರಹೊಮ್ಮಿತು. ನಾಗರಿಕರ ಚಳುವಳಿಗಳ ಸಾಮೂಹಿಕ ಪ್ರಯತ್ನವೇ ಬಿಜೆಪಿಯ ಸೋಲಿಗೆ ಕಾರಣವಾಯಿತು. ಈ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಗಳಿಸಲು ಸಹಾಯ ಮಾಡಿತು.

ಕಾಂಗ್ರೆಸ್‌ನಿಂದ ಕ್ರಾಂತಿಕಾರಿ ಬದಲಾವಣೆಯನ್ನು ನಾವು ನಿರೀಕ್ಷಿಸದಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಡಿಯಲ್ಲಿ ಉತ್ತಮ ಆಡಳಿತವನ್ನು ನಿರೀಕ್ಷಿಸಿದ್ದೇವೆ. ದುರದೃಷ್ಟವಶಾತ್, ಇದುವರೆಗಿನ ಸರ್ಕಾರದ ಕಾರ್ಯಕ್ಷಮತೆ ನಿರಾಶಾದಾಯಕವಾಗಿದೆ. ಕಾಂಗ್ರೆಸ್ ಸರ್ಕಾರವು "ಜನವಿರೋಧಿ ನೀತಿಗಳನ್ನು" ಮುಂದುವರೆಸಿದೆ. ಸಾರ್ವಜನಿಕರು ಬೇಸತ್ತು ಹೋಗುತ್ತಿದ್ದಾರೆ. ಸರ್ಕಾರ ಜನರ ಕಷ್ಟಗಳನ್ನು ನಿವಾರಿಸುವ ಬದಲು, ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದೆ. ಹೀಗಾಗಿ ಈ ಸಂದರ್ಭದಲ್ಲಿ, ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡುವುದು ಮತ್ತು ಜನರ ಹಿತದೃಷ್ಟಿಯಿಂದ ಸರ್ಕಾರವನ್ನು ಟೀಕಿಸುವುದು ನಮ್ಮ ಪ್ರಜಾಪ್ರಭುತ್ವದ ಕರ್ತವ್ಯವಾಗಿದೆ ಎಂದು ಒಕ್ಕೂಟ ಹೇಳಿದೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಎದ್ದೇಳು ಕರ್ನಾಟಕದ ಬೆಂಬಲವು ಪ್ರಮುಖ ಪಾತ್ರ ವಹಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಹಲಾಲ್, ಹಿಜಾಬ್ ಮತ್ತು ಇತರ ಕೋಮುವಾದಿ ವಿಷಯಗಳ ಮೇಲೆ ಬಿಜೆಪಿಯ ಪ್ರಚಾರ ಎದುರಿಸಲು ಒಕ್ಕೂಟದ ಅನೇಕರು ನಮ್ಮನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದರು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಸಂಗ್ರಹ ಚಿತ್ರ
ಕಾಂಗ್ರೆಸ್ ನಾಯಕರೇ ಟಾರ್ಗೆಟ್ ಯಾಕೆ? BJP ನಾಯಕರೆಲ್ಲಾ ಪ್ರಾಮಾಣಿಕರೇ?: ED ಗೆ ಸಿದ್ದರಾಮಯ್ಯ ಪ್ರಶ್ನೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com