ಹಿಂದೂ ಧರ್ಮದಲ್ಲಿ ಸಮಾಜದ ಕೆಲ ಜಾತಿಗಳಿಗೆ 'ಘನತೆ, ಗೌರವ' ಸಿಕ್ಕಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಭಾರತದಲ್ಲಿ ಹುಟ್ಟಿರುವ ಎಲ್ಲ ಧರ್ಮಗಳು ಈ ಅಸಮಾನತೆಯ ವಿರುದ್ಧ ಹುಟ್ಟಿವೆ. ಈ ಜನರಿಗೆ (ಬಿಜೆಪಿ) ನಾಯಕರಿಗೆ ಅದು ಏನೆಂದು ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ.
Minister Priyank Kharge
ಸಚಿವ ಪ್ರಿಯಾಂಕ್ ಖರ್ಗೆ
Updated on

ಕಲಬುರಗಿ: ಹಿಂದೂ ಧರ್ಮದಲ್ಲಿ ಸಮಾಜದ ಕೆಲವು ಜಾತಿಗಳಿಗೆ 'ಘನತೆ, ಗೌರವ'ವನ್ನು ನೀಡದ ಕಾರಣದಿಂದಲೇ ಸಿಖ್, ಜೈನ, ಬೌದ್ಧ ಮತ್ತು ಲಿಂಗಾಯತ ಧರ್ಮಗಳು ಭಾರತದಲ್ಲಿ ಪ್ರತ್ಯೇಕ ಧರ್ಮವಾಗಿ ಹುಟ್ಟಿಕೊಂಡಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಹೇಳಿದ್ದಾರೆ.

ಹಿಂದೂ ಸಮಾಜದಲ್ಲಿನ ಅಸಮಾನತೆ ಮತ್ತು ಜಾತೀಯತೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಟೀಕಿಸಿ, ರಾಜ್ಯ ಸರ್ಕಾರವು ತನ್ನ ನೀತಿಗಳ ಮೂಲಕ ಧಾರ್ಮಿಕ ಮತಾಂತರವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಎಂಎಲ್‌ಸಿ ಸಿಟಿ ರವಿ ಅವರಿಗೆ ಸಚಿವರು ಪ್ರತಿಕ್ರಿಯಿಸಿದರು.

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, 'ವಿಜಯೇಂದ್ರ ಮತ್ತು ರವಿ ಅವರಿಗೆ ಭಾರತದ ಧರ್ಮದ ಇತಿಹಾಸದ ಬಗ್ಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ಸಿಖ್ ಧರ್ಮ, ಜೈನ ಧರ್ಮ, ಬೌದ್ಧ ಧರ್ಮ ಮತ್ತು ಲಿಂಗಾಯತ ಧರ್ಮಗಳು ಭಾರತದಲ್ಲಿ ಪ್ರತ್ಯೇಕ ಧರ್ಮವಾಗಿ ಹುಟ್ಟಿಕೊಂಡಿವೆ. ಹಿಂದೂ ಧರ್ಮದಲ್ಲಿ ಘನತೆ, ಗೌರವ ಇಲ್ಲದ ಕಾರಣಕ್ಕಾಗಿಯೇ ಈ ಧರ್ಮಗಳು ಭಾರತದಲ್ಲಿ ಹುಟ್ಟಿಕೊಂಡವು' ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಚಾತುರ್ವರ್ಣ ವ್ಯವಸ್ಥೆ ಎಂದರೇನು? ಅದು ಬೇರೆ ಯಾವುದೇ ಧರ್ಮದಲ್ಲಿದೆಯೇ? ಅದು ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಿಂದೂವಾಗಿ ಹುಟ್ಟುವುದು ನನ್ನ ಕೈಯಲ್ಲಿಲ್ಲ, ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ ಎಂಬ ಘೋಷಣೆಯನ್ನು ನೀಡಿದರು. ಏಕೆ? ವರ್ಣ ವ್ಯವಸ್ಥೆಯಿಂದಾಗಿ' ಎಂದರು.

Minister Priyank Kharge
Watch | ಬಿಜೆಪಿ ನಾಯಕರು ತಮ್ಮ ಮಕ್ಕಳ ಕೈಗೆ ಲಾಂಗು ಮಚ್ಚು ಕೊಟ್ಟು ಬೀದಿಗೆ ಬಿಡುವರೇ?

'ಜನರಿಗೆ ಘನತೆ, ಗೌರವ ಸಿಕ್ಕಿರಲಿಲ್ಲ. ವಿವಿಧ ಜಾತಿಗಳು ತಾವು ಈ ವ್ಯವಸ್ಥೆಯಿಂದ ಹೊರಗುಳಿದಿರುವುದಾಗಿ ಭಾವಿಸಿದ್ದವು. ಭಾರತದಲ್ಲಿ ಹುಟ್ಟಿರುವ ಎಲ್ಲ ಧರ್ಮಗಳು ಈ ಅಸಮಾನತೆಯ ವಿರುದ್ಧ ಹುಟ್ಟಿವೆ. ಈ ಜನರಿಗೆ (ಬಿಜೆಪಿ) ನಾಯಕರಿಗೆ ಅದು ಏನೆಂದು ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

ಶನಿವಾರ ಮೈಸೂರಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಬೇರೆ ಧರ್ಮಕ್ಕೆ ಏಕೆ ಮತಾಂತರ ಆಗುತ್ತಿದ್ದರು. ಇಲ್ಲಿನ ವ್ಯವಸ್ಥೆಯಿಂದಾಗಿಯೇ ಕೆಲವರು ಧಾರ್ಮಿಕ ಮತಾಂತರಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

'ಹಿಂದೂ ಸಮಾಜದಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳಿದ್ದರೆ, ಮತಾಂತರ ಏಕೆ ಆಗುತ್ತಿತ್ತು? ಅಸ್ಪೃಶ್ಯತೆ ಏಕೆ ಬಂತು?. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿ ಅಸಮಾನತೆಗಳ ಬಗ್ಗೆ ಕೇಳಿದಾಗ, 'ಎಲ್ಲಿ ಅಸಮಾನತೆ ಇದೆಯೋ - ಅದು ಮುಸ್ಲಿಮರಾಗಿರಲಿ ಅಥವಾ ಕ್ರಿಶ್ಚಿಯನ್ನರಾಗಿರಲಿ, ನಾವು ಅಥವಾ ಬಿಜೆಪಿ ಜನರನ್ನು ಮತಾಂತರಗೊಳ್ಳುವಂತೆ ಕೇಳಿಲ್ಲ. ಜನರೇ ಮತಾಂತರಗೊಂಡಿದ್ದಾರೆ. ಅದು ಅವರ ಹಕ್ಕು' ಎಂದಿದ್ದರು.

ಇತ್ತೀಚೆಗೆ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಮುಂಬರುವ ಜಾತಿಗಣತಿಯಲ್ಲಿ ಧರ್ಮದ ಅಂಕಣದಲ್ಲಿ ಸಮುದಾಯಕ್ಕೆ ಸೇರಿದ ಜನರು ಹಿಂದೂ ಎಂದು ಬರೆಯದೆ ವೀರಶೈವ-ಲಿಂಗಾಯತರು ಎಂದು ಬರೆಯಬೇಕೆಂದು ನಿರ್ಧರಿಸಲಾಗಿದೆ ಎಂದು ಗಮನಸೆಳೆದ ಖರ್ಗೆ, 'ಅವರು (ವಿಜಯೇಂದ್ರ) ಅದರ ಬಗ್ಗೆ ಏನು ಹೇಳುತ್ತಾರೆ? ಅವರು ಅದನ್ನು ಸಮರ್ಥಿಸಿಕೊಂಡು, ನಮ್ಮೊಂದಿಗೆ ಮಾತನಾಡಬಹುದೇ?' ಎಂದು ಪ್ರಶ್ನಿಸಿದರು. ಬಿಜೆಪಿಯ ಹಿರಿಯ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರರಾಗಿರುವ ವಿಜಯೇಂದ್ರ ಲಿಂಗಾಯತರು.

Minister Priyank Kharge
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಯಾಕೆ ಮತಾಂತರ ಆಗ್ತಿದ್ರು?: ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ದ ಬಿಜೆಪಿ ಕಿಡಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com