AI, Geospatial ತಂತ್ರಜ್ಞಾನ ಬಳಕೆ ಹೆಚ್ಚಿಸಲು ಇ-ಆಡಳಿತ ಕ್ರಮ, ನಾಗರಿಕರಿಗೆ ಅನುಕೂಲ

K-GIS 2.0 ಕಾರ್ಯಕ್ರಮದಲ್ಲಿ ತಮ್ಮ ಮಾದರಿಗಳನ್ನು ಪ್ರದರ್ಶಿಸಿವೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನವೀನತಾ ಮಾದರಿ ಸ್ಪರ್ಧೆ, ತಾಂತ್ರಿಕ ಹಾಗೂ ಪ್ಯಾನೆಲ್ ಚರ್ಚೆಗಳು ಭೂಮಿಯನ್ನು ನಿರ್ವಹಿಸಲು ತಂತ್ರಜ್ಞಾನಗಳು ಎಂಬ ವಿಷಯದಡಿ ನಡೆದವು.
Karnataka E-Governance
ಕರ್ನಾಟಕ ಇ-ಆಡಳಿತ
Updated on

ಬೆಂಗಳೂರು: ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ ತನ್ನ ಕಾರ್ಯಚಟುವಟಿಕೆಗಳನ್ನು ಸುಧಾರಿಸಲು ಹಾಗೂ ನಾಗರಿಕರಿಗೆ ನೆರವಾಗಲು ತಂತ್ರಜ್ಞಾನವನ್ನು ಸಾಧ್ಯವಾದಷ್ಟು ಅಳವಡಿಸಿಕೊಳ್ಳಲು ಮುಂದಾಗಿದೆ.

ಇಲಾಖೆಯು ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಂಡ್ ಅಪ್ಲಿಕೇಶನ್ ಸೆಂಟರ್ (KSRSAC), ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಜಿಯೋ-ಟೆಕ್ನಾಲಜಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಸಹಾಯವನ್ನು ಪಡೆಯಲಿದೆ.

K-GIS 2.0 ಕಾರ್ಯಕ್ರಮದಲ್ಲಿ ತಮ್ಮ ಮಾದರಿಗಳನ್ನು ಪ್ರದರ್ಶಿಸಿವೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನವೀನತಾ ಮಾದರಿ ಸ್ಪರ್ಧೆ, ತಾಂತ್ರಿಕ ಹಾಗೂ ಪ್ಯಾನೆಲ್ ಚರ್ಚೆಗಳು ಭೂಮಿಯನ್ನು ನಿರ್ವಹಿಸಲು ತಂತ್ರಜ್ಞಾನಗಳು ಎಂಬ ವಿಷಯದಡಿ ನಡೆದವು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (E-Governance) ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಸರ್ಕಾರದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಲ್ಲಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಬಳಕೆಯನ್ನು ವಿಸ್ತರಿಸಬೇಕಾಗಿದೆ ಎಂದು ಹೇಳಿದರು. ಇಂಧನ, ಅರಣ್ಯ, ಕೆರೆಗಳು ಹಾಗೂ ಸಣ್ಣ ಮತ್ತು ದೊಡ್ಡ ನೀರಾವರಿ ಕ್ಷೇತ್ರಗಳಲ್ಲಿ ಹೆಚ್ಚಿನ ಗಮನ ಕೊಡಬೇಕು ಎಂದು ಅವರು ಹೇಳಿದರು.

Karnataka E-Governance
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಗುಡ್ ನ್ಯೂಸ್: ಒಂದೇ ಕ್ಲಿಕ್‌ನಲ್ಲಿ 'ಇ-ಖಾತಾ' ಡೌನ್‌ಲೋಡ್!

ನೀರಾವರಿ ಪಂಪ್‌ಸೆಟ್‌ಗಳು (IP) ಮತ್ತು ವಿದ್ಯುತ್ ಪೂರೈಕೆಯ ಉದಾಹರಣೆ ನೀಡಿದ ಪಂಕಜ್ ಕುಮಾರ್ ಪಾಂಡೆ, ವಿಶೇಷ ಐಪಿ ಫೀಡರ್‌ಗಳನ್ನು ನಿರ್ದಿಷ್ಟ ಬೆಳೆಗಳಿಗೆ ಸಂಪರ್ಕಿಸಬಹುದು ಎಂದರು. KSRSAC ಡೇಟಾವನ್ನು ಬಳಸಿಕೊಂಡು ಪ್ರದೇಶಗಳನ್ನು ಮ್ಯಾಪ್ ಮಾಡಿ, ಬೆಳೆ ಕೊಯ್ಲಿಗೆ ಅಗತ್ಯವಾದ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಸಮಯಕ್ಕೆ ಸರಿಯಾಗಿ ಒದಗಿಸಬಹುದು ಎಂದು ಹೇಳಿದರು.

ಇದರಿಂದ ರೈತರಿಗೆ ಬೆಳೆ ನಷ್ಟವಾಗುವುದನ್ನು ತಪ್ಪಿಸಬಹುದು ಹಾಗೂ ವಿದ್ಯುತ್ ಬಳಕೆಯನ್ನು ಸಮರ್ಪಕವಾಗಿ ಬಳಸಬಹುದು. ಡೇಟಾ ಆಧಾರಿತ ಯೋಜನೆ ಮತ್ತು ಮಾನಿಟರಿಂಗ್ ವ್ಯವಸ್ಥೆಗಳ ಮೂಲಕ ತಾಂತ್ರಿಕ ಮತ್ತು ವಾಣಿಜ್ಯ (AT&C) ನಷ್ಟಗಳನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.

Karnataka E-Governance
ಸುರಂಗ ರಸ್ತೆ ಯೋಜನೆ: ತಂತ್ರಜ್ಞಾನ ಅರಿಯಲು ವಿಶಾಖಪಟ್ಟಣಂ ತೆರಳಿದ BBMP ಎಂಜಿನಿಯರ್‌ಗಳು; ಶೀಘ್ರದಲ್ಲೇ ಕಾಶ್ಮೀರಕ್ಕೂ ಭೇಟಿ

ಪಂಕಜ್ ಕುಮಾರ್ ಪಾಂಡೆ ಅವರು ಜಿಯೋಸ್ಪೇಷಿಯಲ್ ಉಪಕರಣಗಳನ್ನು ವಿದ್ಯುತ್ ಪ್ರಸರಣ ಜಾಲಗಳಲ್ಲಿ ಹಾಗೂ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಬಳಕೆ ನಿರ್ವಹಣೆಯಲ್ಲಿ ಸಮರ್ಪಕವಾಗಿ ಸಂಯೋಜಿಸಿದರೆ ರಾಜ್ಯ ಸರ್ಕಾರಕ್ಕೆ 5 ಸಾವಿರ ಕೋಟಿ ರೂಪಾಯಿಗಳವರೆಗೆ ಉಳಿತಾಯ ಸಾಧ್ಯವಿದೆ ಎಂದು ಹೇಳಿದರು.

ಪಂಪ್‌ಸೆಟ್‌ಗಳನ್ನು ಬಳಸುವಾಗ ಭೂಗರ್ಭ ಜಲಮಟ್ಟವನ್ನು ಪರಿಶೀಲಿಸುವುದಕ್ಕೂ ಆದ್ಯತೆ ನೀಡಬೇಕು. ಸೌರ ಪ್ಯಾನೆಲ್‌ಗಳ ಅಳವಡಿಕೆ ಮತ್ತು ವಿದ್ಯುತ್ ಪೂರೈಕೆಯ ಸರಿಯಾದ ವ್ಯವಸ್ಥೆ ಕೂಡ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ನಾಸಾ ಮತ್ತು ಖಾಸಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಉಪಗ್ರಹ ಚಿತ್ರಣ ಡೇಟಾವನ್ನು ಬಳಸಿಕೊಳ್ಳಲು ಇಲಾಖೆ ಸಿದ್ಧವಿದ್ದರೂ, ಸ್ಥಳೀಯ ತಂತ್ರಜ್ಞಾನವನ್ನು ಸುಧಾರಿಸಿ ಬಳಸುವುದರ ಮೇಲೆ ಒತ್ತಡವಿದೆ. ಅದು ಕಡಿಮೆ ವೆಚ್ಚದ ಮತ್ತು ವಿಶ್ವಾಸಾರ್ಹವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೂಲಸೌಕರ್ಯ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಮ್ಯಾಪಿಂಗ್ ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳ ಪರಿವರ್ತನಾ ಪಾತ್ರದ ಕುರಿತು ಚರ್ಚೆಗಳು ನಡೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com