'ಪುರಾವೆ ಎಲ್ಲಿದೆ?': ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಅಬಕಾರಿ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕರು, ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರ ರಾಜೀನಾಮೆಯನ್ನು ಕೋರುವ ಮೊದಲು ಅವರ ಬಳಿಯಿರುವ ದೃಢವಾದ ಪುರಾವೆಗಳನ್ನು ತೋರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ವಿರೋಧ ಪಕ್ಷವು ಯಾವುದೇ ಪುರಾವೆಗಳನ್ನು ನೀಡದೆ 'ವಿಧಾನಸೌಧದಲ್ಲಿ ಆಟವಾಡುತ್ತಿದೆ'. ತಮ್ಮ ವಿರುದ್ಧ ಸಾಕ್ಷ್ಯಗಳನ್ನು ಒದಗಿಸುವಂತೆ ವಿರೋಧ ಪಕ್ಷಗಳಿಗೆ ತಿಮ್ಮಾಪುರ ಅವರೇ ಸವಾಲು ಹಾಕಿದ್ದಾರೆ. ಒಂದೇ ಒಂದು ಪುರಾವೆ ನೀಡಿದರೂ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ ಎಂದು ತಿಮ್ಮಾಪುರ ಅವರನ್ನು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಳೆದ ಹತ್ತು ದಿನಗಳಿಂದಲೂ ಅವರು (ಬಿಜೆಪಿ) ಈ ವಿಷಯವನ್ನು ವಿಧಾನ ಪರಿಷತ್ತಿನಲ್ಲಿ ಎತ್ತಿದ್ದಾರೆ. ವಿಧಾನಸಭೆಯಲ್ಲಿಯೂ ಈ ವಿಷಯವನ್ನು ಎತ್ತಿದ್ದಾರೆ. ಆದರೆ, ಇಲ್ಲಿಯವರೆಗೆ, ಭ್ರಷ್ಟಾಚಾರ ಯಾವಾಗ ಮತ್ತು ಹೇಗೆ ನಡೆಯಿತು ಎಂದು ಹೇಳಲು ಅವರಿಗೆ ಸಾಧ್ಯವಾಗಿಲ್ಲ. ಅವರು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರ ರಾಜೀನಾಮೆಯನ್ನು ಕೋರುತ್ತಿದ್ದಾರೆ. ಈ ಸಂಬಂಧ ಒಂದು ಸಣ್ಣ ಸಾಕ್ಷ್ಯ ನೀಡಿದರೂ ಅವರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗ, ಬಿಜೆಪಿಯವರು ತಮ್ಮಲ್ಲಿರುವ ಯಾವುದೇ ಪುರಾವೆಗಳನ್ನು ನೀಡಲು ಸ್ವತಂತ್ರರು. ಅವರು ಲೋಕಾಯುಧಕ್ಕೆ ಹೋಗಿ ತಮ್ಮಲ್ಲಿರುವ ಪುರಾವೆಗಳನ್ನು ನೀಡಲು ಕೂಡ ಸ್ವತಂತ್ರರು. ಆದರೆ, ಅವರು ಗ್ಯಾಲರಿಯಲ್ಲಿ ಆಟವಾಡುತ್ತಿದ್ದಾರೆ' ಎಂದು ತಿಳಿಸಿದರು.

'ಅವರು ಮಾತನಾಡುತ್ತಿರುವ ವಿಚಾರಕ್ಕೆ ಪುರಾವೆಗಳು ಎಲ್ಲಿವೆ. ಕಾಂಗ್ರೆಸ್ ಯಾವುದೇ ವಿಷಯಗಳನ್ನು ಎತ್ತಿದಾಗ, ಅದು ಯಾವಾಗಲೂ ಸೂಕ್ತ ಪುರಾವೆಗಳೊಂದಿಗೆ ಮಾತನಾಡುತ್ತದೆ' ಎಂದು ಖರ್ಗೆ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

Priyank Kharge
ಯಾವ ತಪ್ಪೂ ಮಾಡಿಲ್ಲ, ರಾಜೀನಾಮೆ ಪ್ರಶ್ನೆಯೇ ಇಲ್ಲ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ

'ಅವರು ಮಾತನಾಡುತ್ತಿರುವ ಪುರಾವೆಗಳು ಎಲ್ಲಿವೆ? ಅಪರಾಧ ಎಲ್ಲಿ ನಡೆದಿದೆ? ಈ ಬಗ್ಗೆ ಅವರು ಯಾವುದೇ ಸಾಕ್ಷ್ಯ ನೀಡಿಲ್ಲ. ಒಬ್ಬ ಅಧಿಕಾರಿ ನಾವು ಹಣ ಪಾವತಿಸಬೇಕು ಎಂದು ಹೇಳಿಕೊಂಡ ಮಾತ್ರಕ್ಕೆ ಸಚಿವರು ರಾಜೀನಾಮೆ ನೀಡಬೇಕು ಎಂದು ಅರ್ಥವಲ್ಲ. ಪ್ರತಿದಿನ ಇಂತಹ ಆರೋಪಗಳು ಬಿಜೆಪಿ ಆಡಳಿತದಲ್ಲಿ ಬಂದಿದ್ದವು. ಆ ಸಮಸ್ಯೆಗಳನ್ನು ಎತ್ತಿದಾಗ, ನಾವು ಅವರಿಗೆ ಸೂಕ್ತ ಪುರಾವೆ ನೀಡಿದ್ದೇವೆ ಎಂದು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ. ನಾವು ಅದನ್ನು ತನಿಖಾ ಸಂಸ್ಥೆಗಳಿಗೆ ನೀಡಿದ್ದೇವೆ. ಹಗರಣಕ್ಕಾಗಿ ಎಡಿಜಿಪಿ ಶ್ರೇಣಿಯ ಅಧಿಕಾರಿ ಬಂಧಿಸಿದಾಗ, ಅವರಲ್ಲಿ ಯಾರೂ ರಾಜೀನಾಮೆ ನೀಡಲಿಲ್ಲ ಎಂಬುದನ್ನು ಅವರು ಮರೆತಿದ್ದಾರೆ. ಪಿಎಸ್ಐ ಹಗರಣ ನಡೆದಾಗ ಗೃಹ ಸಚಿವರು ರಾಜೀನಾಮೆ ನೀಡಲಿಲ್ಲ. ಆದ್ದರಿಂದ, ಪುರಾವೆಗಳನ್ನು ಮುಂದಿಟ್ಟು ಮಾತನಾಡಿ. ನಾವು ಚರ್ಚಿಸಲು ಸಿದ್ಧರಿದ್ದೇವೆ. ಈ ಬಗ್ಗೆ ತಿಮ್ಮಾಪುರ ಕೂಡ ತುಂಬಾ ಸ್ಪಷ್ಟವಾಗಿದ್ದಾರೆ' ಎಂದು ಅವರು ಹೇಳಿದರು.

ಅಕ್ರಮಗಳು ಮತ್ತು ಆರ್ಥಿಕ ದುರುಪಯೋಗದ ಗಣನೀಯ ಪುರಾವೆಗಳ ಹೊರತಾಗಿಯೂ ಸರ್ಕಾರ ಸಚಿವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ವಿಧಾನಸೌಧದೊಳಗೆ ಅಹೋರಾತ್ರಿ ಧರಣಿ ನಡೆಸಿದರು. ವಿಪಕ್ಷ ನಾಯಕ ಆರ್ ಅಶೋಕ ಮತ್ತು ಪಕ್ಷದ ಶಾಸಕರು ವಿಧಾನಸಭೆ ಆವರಣದಲ್ಲಿ ರಾತ್ರಿಯಿಡೀ ಕಳೆದರು.

ಅಬಕಾರಿ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕರು, ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com