ಬೆಂಗಳೂರು: ಕಳೆದುಹೋಗಿದ್ದ ತನ್ನ SUV ಹುಡುಕುತ್ತಿದ್ದ ರಾಜಸ್ಥಾನದ ವ್ಯಕ್ತಿ ಮೇಲೆ ಹಲ್ಲೆ, ದರೋಡೆ; ಓರ್ವನ ಬಂಧನ

ದೂರಿನ ಆಧಾರದ ಮೇಲೆ, ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಉದ್ಯಮಿ ಮಂಗಿಲಾಲ್ ಚೌಧರಿ (40) ಎಂಬುವವರನ್ನು ಬಂಧಿಸಲಾಗಿದೆ. ಇತರ ಇಬ್ಬರು ಶಂಕಿತರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.
representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಾಣೆಯಾಗಿದ್ದ ತನ್ನ ಎಸ್‌ಯುವಿಯನ್ನು ಮರಳಿ ಪಡೆಯಲು ಬೆಂಗಳೂರಿಗೆ ಪ್ರಯಾಣಿಸಿದ್ದ ರಾಜಸ್ಥಾನದ 32 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಜೋಧ್‌ಪುರ ನಿವಾಸಿ ಚಂದ್ರ ಪ್ರಕಾಶ್, ಒಂದು ವರ್ಷದ ಹಿಂದೆ ತನ್ನ ಸ್ನೇಹಿತ ಮಹೇಂದ್ರ ಗುಜ್ಜರ್‌ ಎಂಬಾತನಿಗೆ ತನ್ನ ಎಸ್‌ಯುವಿಯನ್ನು ನೀಡಿದ್ದ. ಆತ ಕೆಲವು ವಾರಗಳಲ್ಲಿ ಅದನ್ನು ಹಿಂತಿರುಗಿಸುವ ಭರವಸೆ ಮೇಲೆ ವಾಹನವನ್ನು ಪಡೆದುಕೊಂಡಿದ್ದ ಎಂದು ಅವರು ಹೇಳಿದರು.

ವಾಹನ ಹಿಂತಿರುಗಿಸದಿದ್ದಾಗ, ಚಂದ್ರ ಪ್ರಕಾಶ್ ಕಳೆದ ವರ್ಷ ಜೋಧ್‌ಪುರದ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.

ಪೊಲೀಸರ ಪ್ರಕಾರ, ನಂತರ ಪ್ರಕಾಶ್ ತನ್ನ ವಾಹನ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿದ್ದು, ಅದನ್ನು ಬೆಂಗಳೂರಿನಲ್ಲಿ ಓಡಿಸಲಾಗುತ್ತಿದೆ ಎಂಬುದು ತಿಳಿದುಬಂದಿದೆ.

ಫೆಬ್ರುವರಿ 23 ರಂದು, ಅವರು ಮತ್ತೊಂದು ಕೀಲಿಯೊಂದಿಗೆ ನಗರಕ್ಕೆ ಬಂದಿದ್ದಾರೆ. ಪೂರ್ವ ಬೆಂಗಳೂರಿನ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಎಸ್‌ಯುವಿಯನ್ನು ಪತ್ತೆ ಮಾಡಿ, ತೆಗೆದುಕೊಂಡು ಹೋಗಿದ್ದಾರೆ.

ರಾತ್ರಿ 11.10ರ ಸುಮಾರಿಗೆ, ಅವರು ಬೊಮ್ಮನಹಳ್ಳಿ ವೃತ್ತದ ಬಳಿ ಬಂದಾಗ, ದ್ವಿಚಕ್ರ ವಾಹನದಲ್ಲಿ ಬಂದ ಮೂವರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ವಾಗ್ವಾದ ನಡೆದು, ಮೂವರು ಸೇರಿ ಕಬ್ಬಿಣದ ರಾಡ್ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

representational image
ಬೆಂಗಳೂರು: ಸ್ಕೂಟರ್ ಕಳ್ಳತನ ತನಿಖೆಯಲ್ಲಿ ಬಯಲಾಯ್ತು ಅಂತರರಾಜ್ಯ SUV ಕಳ್ಳತನ ಜಾಲ!

ಆರೋಪಿಗಳು ಅವರ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳನ್ನು ದೋಚಿ, ಎಸ್‌ಯುವಿಯೊಂದಿಗೆ ಪರಾರಿಯಾಗಿದ್ದಾರೆ. ಪ್ರಕಾಶ್ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಅವರ ದೂರಿನ ಆಧಾರದ ಮೇಲೆ, ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಉದ್ಯಮಿ ಮಂಗಿಲಾಲ್ ಚೌಧರಿ (40) ಎಂಬುವವರನ್ನು ಬಂಧಿಸಲಾಗಿದೆ. ಇತರ ಇಬ್ಬರು ಶಂಕಿತರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮಂಗಿಲಾಲ್ ಚೌಧರಿಯನ್ನು ವಿಚಾರಣೆ ನಡೆಸಿದಾಗ, ತನಗೆ ತಿಳಿದಿರುವ ವ್ಯಕ್ತಿಯೊಬ್ಬರಿಗೆ ಸ್ನೇಹಪರವಾಗಿ (ಅನೌಪಚಾರಿಕ) ಸಾಲ ನೀಡಿದ್ದೇನೆ. ಆ ವ್ಯಕ್ತಿ ಹಣ ಮರುಪಾವತಿಸಲು ವಿಫಲನಾದನು ಮತ್ತು ಸಾಲಕ್ಕೆ ಭದ್ರತೆಯಾಗಿ, ನನಗೆ SUV ನೀಡಿದನು ಎಂದು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗುಜ್ಜರ್ ಮೇಲೆ ತನಗೆ ಪರಿಚಿತ ವ್ಯಕ್ತಿಗಳಿಂದ ಹಣವನ್ನು ಸಾಲವಾಗಿ ಪಡೆದು ನಂತರ ವಾಹನವನ್ನು ಚೌಧರಿಯ ಸ್ನೇಹಿತರೊಬ್ಬರಿಗೆ ನೀಡಿದ್ದ. ಬಳಿಕ ಆ ಸ್ನೇಹಿತ ವಾಹನವನ್ನು ಗುಜ್ಜರ್‌ಗೆ ಹಿಂತಿರುಗಿಸಿದ್ದ. ಸದ್ಯ ಎಸ್‌ಯುವಿ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com