ಕರ್ನಾಟಕದ 60 ವಸತಿ ಶಾಲೆಗಳಲ್ಲಿ ಇನ್ನೊವೇಶನ್ ಪ್ರಯೋಗಾಲಯ ಸ್ಥಾಪನೆ: ಸಚಿವ ಎನ್ ಎಸ್ ಬೋಸರಾಜು

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಜವಹರಲಾಲ ನೆಹರೂ ತಾರಾಲಯದಲ್ಲಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
Young researchers Keerat Kaur, Reshma J V, Lakshmi G and S Yamini were felicitated at the National Science Day programme organised by the department of science
ಬೆಂಗಳೂರಿನ ಜವಹರಲಾಲ್ ನೆಹರೂ ತಾರಾಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣಾ ಕಾರ್ಯಕ್ರಮದಲ್ಲಿ ಯುವ ಸಂಶೋಧಕರಾದ ಕೀರತ್ ಕೌರ್, ರೇಷ್ಮಾ ಜೆ.ವಿ., ಲಕ್ಷ್ಮಿ ಜಿ. ಮತ್ತು ಎಸ್. ಯಾಮಿನಿ ಅವರನ್ನು ಸನ್ಮಾನಿಸಲಾಯಿತು.
Updated on

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ವಿಜ್ಞಾನ ಅಭ್ಯಾಸವನ್ನು ಉತ್ತೇಜಿಸಿ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ರಾಜ್ಯ ಸರ್ಕಾರವು 60 ಕ್ಕೂ ಹೆಚ್ಚು ವಸತಿ ಶಾಲೆಗಳಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನೊವೇಶನ್ ಲ್ಯಾಬ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಜವಹರಲಾಲ ನೆಹರೂ ತಾರಾಲಯದಲ್ಲಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಆರಿಸಲು ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ನೆಹರು ಸ್ಟ್ರೀಮ್ ಲ್ಯಾಬ್‌ಗಳು ಹಾಗೂ ಇನೋವೇಷನ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

Young researchers Keerat Kaur, Reshma J V, Lakshmi G and S Yamini were felicitated at the National Science Day programme organised by the department of science
ಇಟಲಿಯಲ್ಲಿ ನಡೆದ ಭೂ ವಿಜ್ಞಾನ ಒಲಂಪಿಯಾಡ್‌ನಲ್ಲಿ ಮಿಂಚಿದ ಭಾರತೀಯ ವಿದ್ಯಾರ್ಥಿಗಳು!

ಕಲ್ಯಾಣ ಕರ್ನಾಟಕ ಪ್ರದೇಶದ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ಅಭಿವೃದ್ಧಿ ನಿಗಮ(KKRDB) ಸಹಯೋಗದಲ್ಲಿ ನೆಹರು ಸ್ಟ್ರೀಮ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತಿದೆ. 2025–26ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ 6 ಕೋಟಿ ರೂಪಾಯಿಯಡಿ 60 ವಸತಿ ಶಾಲೆಗಳಲ್ಲಿ ಇನೋವೇಷನ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

ಈ ಯೋಜನೆಯು ವಿಶೇಷವಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಗ್ರಾಮೀಣ ವಿದ್ಯಾರ್ಥಿಗಳಿಗೆ ನವೀನತೆ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ಪರಿಚಯ ನೀಡುವ ಉದ್ದೇಶ ಹೊಂದಿದೆ ಎಂದರು.

ನಾಲ್ವರು ವಿದ್ಯಾರ್ಥಿನಿಯರಿಗೆ ಸನ್ಮಾನ

‘Women in Science: Catalysing Viksit Bharat’ ಎಂಬ ವಿಷಯದಡಿ ಹಸಿರು ರಸಾಯನಶಾಸ್ತ್ರ ಸಂಶೋಧನೆಗಾಗಿ ನಾಲ್ವರು ಪ್ರೌಢಶಾಲಾ ವಿದ್ಯಾರ್ಥಿನಿಯರಾದ ರೇಷ್ಮಾ ಜೆ.ವಿ. (ಹೊಸಹಳ್ಳಿ, ಎಚ್.ಡಿ.ಕೋಟೆ), ಲಕ್ಷ್ಮಿ ಜಿ. (ಕಗ್ಗಲಿಪುರ ಗ್ರಾಮ), ಕಿರತ್ ಕೌರ್ (ಬೀದರ್) ಮತ್ತು ಎಸ್. ಯಾಮಿನಿ (ಹೊಸಡೊಡ್ಡಿ ಗ್ರಾಮ) ಅವರನ್ನು ಸನ್ಮಾನಿಸಲಾಯಿತು.

Young researchers Keerat Kaur, Reshma J V, Lakshmi G and S Yamini were felicitated at the National Science Day programme organised by the department of science
ನೆಹರು ಸ್ಟ್ರೀಮ್ ಲ್ಯಾಬ್ ಸ್ಥಾಪನೆಗೆ ರಾಜ್ಯ ಸರ್ಕಾರ ಚಿಂತನೆ, ಬಿಜೆಪಿ ಕೆರಳುವುದು ಖಚಿತ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com