

ಬೆಂಗಳೂರು : ನಗರದ ಯಲಹಂಕದಲ್ಲಿ ವಾಸವಿದ್ದ ಜ್ಯೋತಿಷಿ ಒಬ್ಬರನ್ನು ಪೂಜೆ ಮಾಡಿಸುವ ನೆಪದಲ್ಲಿ ಸಂಪರ್ಕಿಸಿ ಕಿಡ್ನಾಪ್ ಮಾಡಿ, ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ : ಸಂಪಿಗೆಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮೊಹಮ್ಮದ್ ತಾರಿಕ್ ಹುಸೇನ್ ಹಲ್ಲೆಗೊಳಗಾದ ಜ್ಯೋತಿಷಿ. ಕೆಲ ದಿನಗಳ ಹಿಂದೆ ಆರಿಫ್ ಎಂಬಾತ ತಾರಿಕ್ ಹುಸೇನ್ ಅವರನ್ನು ಸಂಪರ್ಕಿಸಿ ತಮ್ಮ ಮನೆಗೆ ಬಂದು ಶಾಂತಿ ಪೂಜೆ ಮಾಡಿಸಬೇಕೆಂದು ಹೇಳಿಕೊಂಡಿದ್ದ.
ಆದರೆ ಪೂಜೆಯಿಂದ ಯಾವುದೇ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಹತಾಶೆಗೊಂಡ ಗ್ಯಾಂಗ್, ಶುಲ್ಕವಾಗಿ ಪಾವತಿಸಿದ ಹಣವನ್ನು ವಸೂಲಿ ಮಾಡಲು ಆತನನ್ನು ಅಪಹರಿಸಿ ದರೋಡೆ ಮಾಡಿದೆ. ಬಂಧಿತ ಆರೋಪಿಗಳನ್ನು ತುಮಕೂರಿನ ಮೂಲದ ಆರಿಫ್ ಮತ್ತು ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಮತ್ತು ಆರ್ಟಿ ನಗರದ ಕದೀರ್ ಎಂದು ಗುರುತಿಸಲಾಗಿದೆ.
ಆರೋಪಿಗಳು ತಾರಿಕ್ ಹುಸೇನ್ ಅವರನ್ನು ತುಮಕೂರು ಹೊರವಲಯಕ್ಕೆ ಕರೆದೊಯ್ದು ಕಾರಿನಿಂದ ಇಳಿಸಿದ್ದಾರೆ. ಅಲ್ಲಿ ಮೊದಲೇ ಕಾಯುತ್ತಿದ್ದ ಮೂವರು ಸೇರಿ, ಈ ಹಿಂದೆ ಶಾಂತಿ ಮಾಡುತ್ತೇನೆ ಎಂದು ಹಣ ಪಡೆದಿದ್ದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಹಣ ಇಲ್ಲ ಎಂದಾಗ ಲಾಂಗ್ ಹಾಗೂ ಮಚ್ಚು ತೋರಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಮತ್ತೆ ಕಾರಿನಲ್ಲಿ ಕೂರಿಸಿಕೊಂಡು ಮೊಬೈಲ್ ಪಾಸ್ವರ್ಡ್ ಮತ್ತು ಯುಪಿಐ ಪಿನ್ ಪಡೆದು, ಅವರ ಬ್ಯಾಂಕ್ ಖಾತೆಯಲ್ಲಿ ₹5 ಲಕ್ಷಕ್ಕೂ ಹೆಚ್ಚು ಹಣ ಇರುವುದನ್ನು ಗಮನಿಸಿ ಮೊದಲು ₹13 ಸಾವಿರವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಯಲಹಂಕದಲ್ಲಿ ವಾಸಿಸುವ 'ಬಾಬಾ' ಮೊಹಮ್ಮದ್ ತಾರಿಕ್ ಹುಸೇನ್ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಅಪಹರಣವನ್ನು ನಿಖರವಾಗಿ ಯೋಜಿಸಿದ್ದರು.
ಆ ಗ್ಯಾಂಗ್ ರಾತ್ರಿಯಿಡೀ ಬಾಬಾ ಅವರನ್ನು ಬಂಧನದಲ್ಲಿಟ್ಟುಕೊಂಡಿದ್ದು, ಮತ್ತಷ್ಟು ಹಿಂಸೆ ನೀಡಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಂತ್ರಸ್ತೆ ನಂತರ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.