ಟಿ.ಜೆ.ಎಸ್. ಜಾರ್ಜ್ 'ಬೆಂಗಳೂರು' ಕೃತಿಗೆ ಕನ್ನಡ ರೂಪ: ಪ್ರಸಿದ್ಧ ಕೃತಿ 'Askew: A Short Biography of Bangalore' ಬಿಡುಗಡೆ

ಬೆಂಗಳೂರು ನಗರದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣವನ್ನು ಈ ಕೃತಿ ಜೀವಂತವಾಗಿ ಕಟ್ಟಿಕೊಡುತ್ತದೆ. ಐತಿಹಾಸಿಕ ಹೋಟೆಲ್‌ಗಳು, ಹಳೆಯ ಬಡಾವಣೆಗಳು, ಸಾಹಿತ್ಯ ವಲಯಗಳು, ರಂಗಭೂಮಿ ತಂಡಗಳು, ಕಲಾವಿದರು, ಉದ್ಯಮಿಗಳು ಹಾಗೂ ಸಾರ್ವಜನಿಕ ಬುದ್ಧಿಜೀವಿಗಳ ಬದುಕು ಮತ್ತು ಕೊಡುಗೆಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.
A Short Biography of Bangalore, authored by noted journalist and writer Late TJS George, being released in Bengaluru on Sunday
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸೇರಿ ಗಣ್ಯರು ಉಪಸ್ಥಿತರಿರುವುದು.
Updated on

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ಲೇಖಕ ಟಿ.ಜೆ.ಎಸ್. ಜಾರ್ಜ್ ಅವರ ಬೆಂಗಳೂರು ಕುರಿತ ಪ್ರಸಿದ್ಧ ಕೃತಿ Askew: A Short Biography of Bangalore ("ಆಸ್ಕೆವ್: ಎ ಶಾರ್ಟ್ ಬಯಾಗ್ರಫಿ ಆಫ್ ಬೆಂಗಳೂರು") ಪುಸ್ತಕದ ಕನ್ನಡ ಅನುವಾದವನ್ನು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ನಗರದಲ್ಲಿ ಉತ್ತಮ ನಗರ ಯೋಜನೆ, ಸಮನ್ವಯಿತ ಆಡಳಿತ ಹಾಗೂ ಸುಸ್ಥಿರ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದರು.

ಪ್ರೊ. ಕೆ.ಇ. ರಾಧಾಕೃಷ್ಣ ಅನುವಾದಿಸಿರುವ Orey Korey – Dodda Bengalurina Sanna Aathmakathe (ಒರೆ ಕೊರೆ – ದೊಡ್ಡ ಬೆಂಗಳೂರಿನ ಸಣ್ಣ ಆತ್ಮಕಥೆ) ಕೃತಿಯನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿಂದಿನ ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ, ನಗರದ ಭವಿಷ್ಯವನ್ನು ರೂಪಿಸುತ್ತಿರುವ ಸವಾಲುಗಳ ಬಗ್ಗೆಯೂ ಚರ್ಚೆ ನಡೆಯಿತು.

ಕೃತಿ ಬಿಡುಗಡೆ ಬಳಿಕ ಮಾತನಾಡಿದ ಪ್ರೊ. ರಾಧಾಕೃಷ್ಣ ಅವರು, ಈ ಪುಸ್ತಕವು ಬೆಂಗಳೂರನ್ನು ರೂಪಿಸಿದ ಜನರು, ಸಂಸ್ಥೆಗಳು ಹಾಗೂ ಸಾಂಸ್ಕೃತಿಕ ನೆಲೆಗಳನ್ನು ದಾಖಲಿಸುವ ಮೂಲಕ ನಗರದ ಜೀವಂತ ನೆನಪುಗಳನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

ಬೆಂಗಳೂರಿನ ಭೌತಿಕ ಬೆಳವಣಿಗೆಯನ್ನು ದಾಖಲಿಸುವ ಹಲವು ಪುಸ್ತಕಗಳಿದ್ದರೂ, ಜಾರ್ಜ್ ಅವರ ಕೃತಿ ರಸ್ತೆ ಮತ್ತು ಕಟ್ಟಡಗಳ ಮಿತಿಯನ್ನು ಮೀರಿ, ನಗರಕ್ಕೆ ತನ್ನದೇ ಆದ ವ್ಯಕ್ತಿತ್ವ ಮತ್ತು ಆತ್ಮವನ್ನು ನೀಡಿದ ವ್ಯಕ್ತಿಗಳ ಕಥೆಗಳನ್ನು ಹೇಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

A Short Biography of Bangalore, authored by noted journalist and writer Late TJS George, being released in Bengaluru on Sunday
ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಬೆಂಗಳೂರು ನಗರದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣವನ್ನು ಈ ಕೃತಿ ಜೀವಂತವಾಗಿ ಕಟ್ಟಿಕೊಡುತ್ತದೆ. ಐತಿಹಾಸಿಕ ಹೋಟೆಲ್‌ಗಳು, ಹಳೆಯ ಬಡಾವಣೆಗಳು, ಸಾಹಿತ್ಯ ವಲಯಗಳು, ರಂಗಭೂಮಿ ತಂಡಗಳು, ಕಲಾವಿದರು, ಉದ್ಯಮಿಗಳು ಹಾಗೂ ಸಾರ್ವಜನಿಕ ಬುದ್ಧಿಜೀವಿಗಳ ಬದುಕು ಮತ್ತು ಕೊಡುಗೆಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.

ಮಲ್ಲೇಶ್ವರಂ ಮತ್ತು ಜಯನಗರದಂತಹ ಪ್ರದೇಶಗಳ ವೈಶಿಷ್ಟ್ಯವನ್ನು ಜಾರ್ಜ್ ತಮ್ಮ ಬರಹದಲ್ಲಿ ಜೀವಂತವಾಗಿ ಚಿತ್ರಿಸಿದ್ದು, ಬೆಳೆಯುತ್ತಿರುವ ನಗರೀಕರಣದ ನಡುವೆ ನಿಧಾನವಾಗಿ ಮರೆಯಾಗುತ್ತಿರುವ ಹಳೆಯ ಬೆಂಗಳೂರಿನ ನೆನಪುಗಳನ್ನು ಉಳಿಸುವ ಕೆಲಸ ಈ ಕೃತಿ ಮಾಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಾಸ್ತುಶಿಲ್ಪಿ ಹಾಗೂ ನಗರ ನೀತಿ ತಜ್ಞ ನರೇಶ್ ನರಸಿಂಹನ್, ಬೆಂಗಳೂರು ಅಭಿವೃದ್ಧಿಯಲ್ಲಿ ಮೇಲ್ಸೇತುವೆಗಳು ಮತ್ತು ರಸ್ತೆ ವಿಸ್ತರಣೆಗಿಂತ ಸಾರ್ವಜನಿಕ ಸಾರಿಗೆ, ಪಾದಚಾರಿ ಸ್ನೇಹಿ ವ್ಯವಸ್ಥೆ ಹಾಗೂ ಸಮನ್ವಯಿತ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

“ಬೆಂಗಳೂರು ತನ್ನದೇ ಯಶಸ್ಸಿನ ಬಲಿಪಶುವಾಗಿದೆ” ಎಂದು ಹೇಳಿದ ಅವರು, ಖಾಸಗಿ ವಾಹನಗಳಿಗೆ ಅನುಕೂಲವಾಗುವ ಯೋಜನೆಗಳ ಬದಲು ಬಸ್‌ಗಳು, ಉಪನಗರ ರೈಲು ಹಾಗೂ ಮೆಟ್ರೋ ಸಂಪರ್ಕ ವ್ಯವಸ್ಥೆಗಳಿಗೆ ಹೆಚ್ಚಿನ ಹೂಡಿಕೆ ಮಾಡಬೇಕೆಂದು ಸಲಹೆ ನೀಡಿದರು.

ನಗರದ ವಿವಿಧ ನಾಗರಿಕ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಅಗತ್ಯವಿದೆ ಎಂದು ಒತ್ತಿ ಹೇಳಿದ ನರಸಿಂಹನ್, 2037ರಲ್ಲಿ ಬೆಂಗಳೂರಿನ 500ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಗರದ ದೀರ್ಘಕಾಲೀನ ಅಭಿವೃದ್ಧಿ ದೃಷ್ಟಿಕೋನವನ್ನು ಈಗಲೇ ರೂಪಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಟಿ.ಜೆ.ಎಸ್. ಜಾರ್ಜ್ ಅವರ ಮೊಮ್ಮಗಳು ಟಿಯಾ ಅನಸೂಯಾ, ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com