ಬೆಂಗಳೂರು: ಗಿಳಿಶಾಸ್ತ್ರ ನಂಬಿ 35 ಲಕ್ಷ ಕಳೆದುಕೊಂಡ IT ಅಧಿಕಾರಿ; ಜ್ಯೋತಿಷಿ ಬಂಧನ

ನಂತರ ಕರೆ ಮಾಡಿ ಚಿನ್ನಾಭರಣ ಕೇಳಿದಾಗ, ಇದೇ ರೀತಿ ಪದೇ ಪದೇ ಚಿನ್ನಾಭರಣ ಕೇಳಿದರೆ, ನಿಮ್ಮ ಕುಟುಂಬದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾನೆ. ಬಳಿಕ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುಂಬಡ್ತಿ ಹಾಗೂ ಉತ್ತಮ ಸ್ಥಳಕ್ಕೆ ವರ್ಗಾವಣೆಗಾಗಿ ಗಿಳಿ ಶಾಸ್ತ್ರದ ಜ್ಯೋತಿಷಿ ಹೇಳಿಕೆ ಮಾತು ನಂಬಿ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಲಕ್ಷಾಂತರ ರೂ. ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಸಂತ್ರಸ್ತ ಅಧಿಕಾರಿ, ಭಾರತಿನಗರ ನಿವಾಸಿ ವೆಂಕಟ್‌ (ಹೆಸರು ಬದಲಿಸಲಾಗಿದೆ) ಅವರು ಸಹಾಯ ಮಾಡುವ ನೆಪದಲ್ಲಿ ಹಣ ಹಾಗೂ ಆಭರಣ ದೋಚಿ ಪರಾರಿಯಾಗಿರುವ ಗಿಣಿಶಾಸ್ತ್ರ ಹೇಳುವ ಶೇಖರ್‌ ಎಂಬುವವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಶೇಖರ್‌ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂತ್ರಸ್ತ ಅಧಿಕಾರಿ ಭಾರತಿ ನಗರದ ಶ್ರೀ ಸರ್ಕಲ್ ಬಳಿ ಜ್ಯೋತಿಷಿ ಶೇಖರ್ ನನ್ನು ಭೇಟಿಯಾದರು. ಶೇಖರ್ ವಿಧಿವಿಧಾನಗಳನ್ನು ಮಾಡಲು ಪ್ರಾರಂಭಿಸುತ್ತಿದ್ದಂತೆ, ಅಧಿಕಾರಿ ಅವರಿಗೆ 194 ಗ್ರಾಂ ಚಿನ್ನಾಭರಣಗಳು ಮತ್ತು ಸುಮಾರು 1.3 ಕೆಜಿ ಬೆಳ್ಳಿ ಮತ್ತು ಸ್ವಲ್ಪ ಹಣವನ್ನು ನೀಡಿದರು. ಶೇಖರ್ ಫೆಬ್ರವರಿ 20 ರಂದು ಆಚರಣೆಗಳಿಗೆ ಅಗತ್ಯವಾದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದರು ಮತ್ತು ಅವುಗಳನ್ನು ಒಂದು ದಿನದ ನಂತರ ಹಿಂತಿರುಗಿಸಲಾಗುತ್ತದೆ ಎಂದು ಹೇಳಿದ್ದಾನೆ.

ಮರುದಿನ ಆಭರಣಗಳನ್ನು ಹಿಂತಿರುಗಿಸದಿದ್ದಾಗ, ಅಧಿಕಾರಿ ಅವರನ್ನು ಪದೇ ಪದೇ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಶೇಖರ್ ಅಧಿಕಾರಿ ಮತ್ತು ಅವರ ಕುಟುಂಬಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದರು. ನಂತರ ಅವರು ನಾಪತ್ತೆಯಾದರು.

Representational image
ನೀನು ಅಲ್ಪಾಯುಷಿ: ಬೆಂಗಳೂರಿನ ಜ್ಯೋತಿಷಿ ಮಾತು ಕೇಳಿ ಕೆಟ್ಟ ಟೆಕ್ಕಿ; ನೇಣು ಬಿಗಿದುಕೊಂಡು ಆತ್ಮಹತ್ಯೆ!

ಒಂದು ದಿನದಲ್ಲಿ ಚಿನ್ನಾಭರಣಗಳನ್ನು ವಾಪಸ್ ನೀಡುವುದಾಗಿ ಹೇಳಿದ್ದ ಶೇಖರ್, ಇನ್ನೂ ಪೂಜೆ ಮುಗಿದಿಲ್ಲ ನಾಳೆ ನಾಡಿದ್ದು ಎಂದು ಸತಾಯಿಸುತ್ತಾ ಒಂದು ವಾರಗಳ ಕಾಲ ಪೂಜೆ ಮಾಡಬೇಕೆಂದು ಹೇಳಿದ್ದಾನೆ. ಆ ಬಳಿಕ ಆತನಿಗೆ ಕರೆ ಮಾಡಿ ಚಿನ್ನಾಭರಣ ವಾಪಸ್ ಕೊಡುವಂತೆ ಕೇಳಿದಾಗ, ಇಂದು ನಾಳೆ ಎಂದು ಸಬೂಬು ಹೇಳುತ್ತಾ ದಿನದೂಡಿದ್ದಾನೆ.

ನಂತರ ಕರೆ ಮಾಡಿ ಚಿನ್ನಾಭರಣ ಕೇಳಿದಾಗ, ಇದೇ ರೀತಿ ಪದೇ ಪದೇ ಚಿನ್ನಾಭರಣ ಕೇಳಿದರೆ, ನಿಮ್ಮ ಕುಟುಂಬದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾನೆ. ಬಳಿಕ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ.

ಐಟಿ ಅಧಿಕಾರಿ ದೂರು ನೀಡಿದ ನಂತರ, ಪೊಲೀಸರು ಶೇಖರ್ ನನ್ನು ತಮಿಳುನಾಡಿನಲ್ಲಿ ಪತ್ತೆಹಚ್ಚಿದರು. ಪೊಲೀಸರು ಈಗ ಅವರಿಂದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಶೇಖರ್ ವಿರುದ್ಧ ಕ್ರಿಮಿನಲ್ ನಂಬಿಕೆ ದ್ರೋಹ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com