West Asia crisis- ಬಳ್ಳಾರಿಯ ಅಂಜೂರ ಬೆಳೆಯುವ ರೈತರಿಗೂ ತಟ್ಟಿದ ಇರಾನ್ ಯುದ್ಧದ ಬಿಸಿ

ರಫ್ತು ಸಂಪೂರ್ಣ ನಿಂತಿರುವುದರಿಂದ ನಮ್ಮ ಉತ್ಪನ್ನಕ್ಕೆ ಖರೀದಿದಾರರೇ ಇಲ್ಲ. ಈ ಹಣ್ಣುಗಳು ಬೇಗ ಹಾಳಾಗುವುದರಿಂದ ರಫ್ತು ನಿಂತುಹೋದರೆ ನಮಗೆ ಸಂಪೂರ್ಣ ನಷ್ಟವಾಗುತ್ತದೆ ಎಂದು ಕುರುಗೋಡು ರೈತರೊಬ್ಬರು ಹೇಳುತ್ತಾರೆ.
Farmers in Kurugodu and Siruguppa taluks are among the worst affected
ಅಂಜೂರ ಹಣ್ಣುಗಳನ್ನು ಪ್ಯಾಕ್ ಮಾಡುತ್ತಿರುವುದು
Updated on

ಕುರುಗೋಡು (ಬಳ್ಳಾರಿ ಜಿಲ್ಲೆ): ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಳ್ಳಾರಿ ಜಿಲ್ಲೆಯ ಅಂಜೂರ ಬೆಳೆಯುವ ರೈತರಿಗೆ ಭಾರೀ ಹೊಡೆತ ನೀಡಿದ್ದು, ಲಾಭದಾಯಕವಾಗಿರಬೇಕಿದ್ದ ಹಂಗಾಮಿನಲ್ಲಿ ರೈತರು ಮತ್ತು ವ್ಯಾಪಾರಿಗಳು ದೊಡ್ಡ ನಷ್ಟದ ಭೀತಿಯಲ್ಲಿ ಸಿಲುಕಿದ್ದಾರೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಮತ್ತು ಸಿರುಗುಪ್ಪ ತಾಲೂಕುಗಳಲ್ಲಿ ರೈತರು ಸುಮಾರು ಶೇಕಡಾ 80ರಷ್ಟು ಅಂಜೂರ ಬೆಳೆ ಪ್ರದೇಶವನ್ನು ಹೊಂದಿದ್ದು, ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುಮಾರು 1,100 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿರುವ ಅಂಜೂರ ಬೆಳೆ ಈ ವರ್ಷ ಉತ್ತಮ ಫಸಲು ಕಂಡಿತ್ತು. ರೈತರು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉತ್ತಮ ಬೆಲೆ ನಿರೀಕ್ಷಿಸಿದ್ದರು.

ಆದರೆ, ಇರಾನ್, ಇರಾಕ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಪ್ರಮುಖ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಅಕಸ್ಮಿಕವಾಗಿ ನಿಂತುಹೋಗಿರುವುದರಿಂದ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ದೇಶಗಳು ಬಳ್ಳಾರಿಯ ಅಂಜೂರಗಳ ಪ್ರಮುಖ ಖರೀದಿದಾರರಾಗಿದ್ದು, ಈಗ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ರಫ್ತು ಸಂಪೂರ್ಣವಾಗಿ ನಿಂತುಹೋಗಿದೆ.

Farmers in Kurugodu and Siruguppa taluks are among the worst affected
ಅಮೆರಿಕದ ಮತ್ತೊಂದು F-15 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್; 4ನೇ ಯುದ್ಧ ವಿಮಾನ ಪತನ!

ರಫ್ತು ಸಂಪೂರ್ಣ ನಿಂತಿರುವುದರಿಂದ ನಮ್ಮ ಉತ್ಪನ್ನಕ್ಕೆ ಖರೀದಿದಾರರೇ ಇಲ್ಲ. ಈ ಹಣ್ಣುಗಳು ಬೇಗ ಹಾಳಾಗುವುದರಿಂದ ರಫ್ತು ನಿಂತುಹೋದರೆ ನಮಗೆ ಸಂಪೂರ್ಣ ನಷ್ಟವಾಗುತ್ತದೆ ಎಂದು ಕುರುಗೋಡು ರೈತರೊಬ್ಬರು ಹೇಳುತ್ತಾರೆ.

ಬಹುತೇಕ ರೈತರು ನೀರಾವರಿ, ರಸಗೊಬ್ಬರ ಮತ್ತು ಕಾರ್ಮಿಕರ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದು, ರಫ್ತು ಮಾರಾಟದ ಮೂಲಕ ವೆಚ್ಚವನ್ನು ಮರಳಿ ಪಡೆಯಲು ನಿರೀಕ್ಷಿಸಿದ್ದರು. ಸಾಮಾನ್ಯವಾಗಿ, ಒಂದು ಕ್ವಿಂಟಾಲ್‌ಗೆ 8 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿಗಳವರೆಗೆ ಬೆಲೆ ಸಿಗುತ್ತದೆ; ತಾಜಾ ಮತ್ತು ಒಣ ಅಂಜೂರಗಳಿಗೆ ಬೇರೆ ಬೇರೆ ಬೆಲೆಗಳಿವೆ.

ಈ ಸಂಕಷ್ಟವು ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳ ಮೇಲೂ ಪರಿಣಾಮ ಬೀರಿದೆ. ರಫ್ತು ಮಾರ್ಗಗಳಿಲ್ಲದ ಕಾರಣ ಖರೀದಿ ಮತ್ತು ಮಾರಾಟ ನಿರ್ವಹಿಸಲು ಅವರು ಕಷ್ಟಪಡುತ್ತಿದ್ದಾರೆ, ಇದರಿಂದ ರೈತರ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ.

Farmers in Kurugodu and Siruguppa taluks are among the worst affected
West Asia war effect: ಷೇರು ಮಾರುಕಟ್ಟೆಯಲ್ಲಿ 'ರಕ್ತಪಾತ': ಸೆನ್ಸೆಕ್ಸ್ 1,555 ಅಂಕ ಕುಸಿತ, ನಿಮಿಷಗಳಲ್ಲಿ ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ ನಷ್ಟ..!

ಸ್ಥಳೀಯ ಮಾರುಕಟ್ಟೆಗಳು ಏಕಾಏಕಿ ಹೆಚ್ಚಿದ ಸರಬರಾಜನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಪರಿಣಾಮವಾಗಿ ಬೆಲೆಗಳು ತೀವ್ರವಾಗಿ ಕುಸಿದಿವೆ. ಪರ್ಯಾಯ ಮಾರುಕಟ್ಟೆಗಳನ್ನು ಹುಡುಕದಿದ್ದರೆ ಬೆಳೆದ ಬಹುಪಾಲು ಹಾಳಾಗುವ ಭೀತಿ ರೈತರಿಗೆ ಇದೆ.

ಕೃಷಿ ತಜ್ಞರು ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದರ ಸ್ಥಿರೀಕರಣ, ಖರೀದಿ ಸಹಾಯ ಮತ್ತು ಹೊಸ ದೇಶೀಯ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ಹುಡುಕುವುದು ಸೇರಿದಂತೆ ಪರ್ಯಾಯ ಪರಿಹಾರಗಳನ್ನು ಹುಡುಕಬೇಕು. ಸಮಯಕ್ಕೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಈ ಪ್ರದೇಶದ ನೂರಾರು ರೈತ ಕುಟುಂಬಗಳ ಜೀವನೋಪಾಯಕ್ಕೆ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com