ಬೆಂಗಳೂರಿನ ಹೊರವಲಯದಲ್ಲಿ ಹಗಲು ದರೋಡೆ; ಸಿನಿಮಾ ಸ್ಟೈಲ್​​ನಲ್ಲಿ 23 ಲಕ್ಷ ರೂ. ದೋಚಿ ಪರಾರಿ!

ಆನೇಕಲ್‌ನ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಮಾರಾಟ ಮಾಡಿದ ನಂತರ, ದಂಪತಿಗಳು ಕಾರಿನಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ, ಕಾರಿನ ಒಂದು ಟೈರ್‌ನಲ್ಲಿ ಗಾಳಿ ಇಲ್ಲದಿರುವುದು ಕಂಡುಬಂದಿದೆ.
Miscreants flee with Rs 23 lakh from Tamil Nadu couple after diversion trick in Bengaluru outskirts
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಬಂದಿದ್ದ ತಮಿಳುನಾಡಿನ ದಂಪತಿಗಳ ಗಮನವನ್ನು ಸಿನಿಮಾ ಸ್ಟೈಲ್​​ನಲ್ಲಿ ಬೇರೆಡೆಗೆ ತಿರುಗಿಸಿ, ಸುಮಾರು 23 ಲಕ್ಷ ರೂಪಾಯಿ ನಗದು ಮತ್ತು ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹೊಸೂರು ರಸ್ತೆಯ ಗುಡ್ಡಹಟ್ಟಿ ಗೇಟ್‌ನಲ್ಲಿ ಈ ಘಟನೆ ನಡೆದಿದೆ.

ಆನೇಕಲ್‌ನ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಮಾರಾಟ ಮಾಡಿದ ನಂತರ, ದಂಪತಿಗಳು ಕಾರಿನಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ, ಕಾರಿನ ಒಂದು ಟೈರ್‌ನಲ್ಲಿ ಗಾಳಿ ಇಲ್ಲದಿರುವುದು ಕಂಡುಬಂದಿದೆ. ಈ ವೇಳೆ ಅಪರಿಚಿತನೊಬ್ಬ ಪಂಕ್ಚರ್ ಅಂಗಡಿ ತೋರಿಸುವುದಾಗಿ ಹೇಳಿ ಅವರನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದಾರೆ.

Miscreants flee with Rs 23 lakh from Tamil Nadu couple after diversion trick in Bengaluru outskirts
ಬೆಂಗಳೂರು: ಬಂಗಾಳಿ ವಲಸೆ ಕಾರ್ಮಿಕರಿಗೆ ಪೊಲೀಸರಿಂದ ಕಿರುಕುಳ, ಸುಲಿಗೆ ಆರೋಪ

ತಮಿಳುನಾಡಿನ ಕಡಲೂರಿನ ಎನ್. ಕೃಷ್ಣ ಮೋಹನ್ (65) ಎಂಬುವವರು ತಮ್ಮ ಕಾರನ್ನು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ, ಅವರ ಪತ್ನಿ ಪೆಟ್ರೋಲ್ ಬಂಕ್‌ನಲ್ಲಿದ್ದಾಗ ಸುತ್ತಮುತ್ತಲಲ್ಲಿ ಪಂಕ್ಚರ್ ಅಂಗಡಿಗಳಿವೆಯೇ ಎಂದು ವಿಚಾರಿಸಲು ಅಪರಿಚಿತರೊಂದಿಗೆ ಹೋಗಿದ್ದರು. ಈ ವೇಳೆ ಕಾರಿನ ಮುಂಭಾಗದ ವಿಂಡ್‌ಶೀಲ್ಡ್ ಅನ್ನು ಒಡೆದ ದುಷ್ಕರ್ಮಿಗಳು, ನಗದು, ಚಿನ್ನದ ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.

ಈ ಸಂಬಂಧ ಮೋಹನ್ ಅವರು ಪೊಲೀಸರಿಗೆ ದೂರು ನೀಡಿದ್ದು, "ಆರೋಪಿಯು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ದೂರುದಾರರನ್ನು ಹಿಂಬಾಲಿಸುತ್ತಿದ್ದನೆಂದು ನಮಗೆ ಅನುಮಾನವಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com