social_icon

ಗ್ಯಾಜೆಟ್ ಗೀಳಿಗೆ ಹಳ್ಳಿಗಳೂ ಹೊರತಲ್ಲ: ಗ್ರಾಮೀಣ ಪ್ರದೇಶಗಳಲ್ಲಿ ಫೋನ್‌ಗೆ ವ್ಯಸನಿಗಳಾದ ಮಕ್ಕಳಿಗೆ ವೈದ್ಯರಿಂದ ಸಲಹೆ

ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅನುಕೂಲಕ್ಕೆ ಸಮನಾಗಿ ಹೊಸ ಹೊಸ ಸಮಸ್ಯೆಗಳೂ ಆರಂಭವಾಗುತ್ತಿದ್ದು, ನಗರ ಪ್ರದೇಶಗಳಂತೆಯೇ ಗ್ರಾಮೀಣ ಭಾಗದ ಮಕ್ಕಳೂ ಕೂಡ ಗ್ಯಾಜೆಟ್ ಗೀಳಿಗೆ ತುತ್ತಾಗುತ್ತಿದ್ದಾರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

Published: 29th March 2023 08:42 AM  |   Last Updated: 31st March 2023 02:25 PM   |  A+A-


Digital addiction

ಮೊಬೈಲ್ ಮತ್ತು ತಂತ್ರಜ್ಞಾನಕ್ಕೆ ವ್ಯಸನ

Posted By : Srinivasamurthy VN
Source : The New Indian Express

ಬೆಂಗಳೂರು: ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅನುಕೂಲಕ್ಕೆ ಸಮನಾಗಿ ಹೊಸ ಹೊಸ ಸಮಸ್ಯೆಗಳೂ ಆರಂಭವಾಗುತ್ತಿದ್ದು, ನಗರ ಪ್ರದೇಶಗಳಂತೆಯೇ ಗ್ರಾಮೀಣ ಭಾಗದ ಮಕ್ಕಳೂ ಕೂಡ ಗ್ಯಾಜೆಟ್ ಗೀಳಿಗೆ ತುತ್ತಾಗುತ್ತಿದ್ದಾರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

ಗ್ರಾಮೀಣ ಜನಸಂಖ್ಯೆಯು ತಂತ್ರಜ್ಞಾನಕ್ಕೆ ಸಮಾನವಾಗಿ ವ್ಯಸನಿಯಾಗಳಾಗುತ್ತಿದ್ದು, ಡಿಜಿಟಲ್ ಚಟ ಹಳ್ಳಿಗಳಲ್ಲಿ ಹೊಸ ನಿಷೇಧಕ್ಕೆ ಕಾರಣವಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಫೋನ್‌ಗೆ ವ್ಯಸನಿಗಳಾಗಿರುವ ಮಕ್ಕಳಿಗೆ ವೈದ್ಯರು ಸಲಹೆ ನೀಡಲು ಮುಂದಾಗಿದ್ದಾರೆ. 

ದಣಿವು, ನಿದ್ದೆಯ ಕೊರತೆ, ತಲೆನೋವು, ಕಣ್ಣು ಕೆಂಪಗಾಗಿಸುವುದರ ಜೊತೆಗೆ ಸಿಡುಕುತನ, ಕುಟುಂಬಸ್ಥರೊಂದಿಗೆ ಜಗಳವಾಡುವುದು ನಗರವಾಸಿಗಳಷ್ಟೇ ಅಲ್ಲ. ಹಳ್ಳಿಗಳ ತುಲನಾತ್ಮಕವಾಗಿ ಶಾಂತ ಪರಿಸರದಲ್ಲಿ ವಾಸಿಸುವವರೂ ಸಹ ಡಿಜಿಟಲ್ ಚಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಜನರು ಮೊಬೈಲ್ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ವ್ಯಸನಿಯಾಗುತ್ತಿದ್ದಾರೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.  ನಗರ ಪ್ರದೇಶದ ಜನರಂತೆ ಗ್ರಾಮೀಣ ಭಾಗದಲ್ಲೂ ಕೌನ್ಸೆಲಿಂಗ್‌ನ ಅಗತ್ಯವಿದೆ. ತಂತ್ರಜ್ಞಾನದ ವ್ಯಸನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಮಧ್ಯಸ್ಥಿಕೆಯನ್ನು ಒದಗಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಹಿಳೆಯರಲ್ಲಿ ಪೌಷ್ಟಿಕತೆ: ಕುಟುಂಬಕ್ಕೆ ಆಧಾರಸ್ತಂಭವಾದ ಮಹಿಳೆಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ ಗೊತ್ತಾ?

ಚಿಕ್ಕಬಳ್ಳಾಪುರದ ಮಾನಸ ಗ್ರೂಪ್ ಆಫ್ ಹಾಸ್ಪಿಟಲ್ಸ್ ವೈದ್ಯಕೀಯ ನಿರ್ದೇಶಕ ಡಾ.ಎಚ್.ಎಸ್.ಶಶಿಧರ್ ಅವರು ಈ ಬಗ್ಗೆ ಮಾತನಾಡಿ, 'ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಟೆಕ್ ಗ್ಯಾಜೆಟ್‌ಗಳಿಗೆ ವ್ಯಸನಿಯಾಗಿರುವವರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹಳ್ಳಿಗಳಲ್ಲಿನ ಟೀ ಸ್ಟಾಲ್‌ಗಳ ಬಳಿ ಕುಳಿತು, ಮೊಬೈಲ್‌ಗಳನ್ನು ಥಂಬ್ ಮಾಡುವ ಜನರು ಆಟವಾಡುವ ಅಥವಾ ಇತರ ದೈಹಿಕ ಚಟುವಟಿಕೆಗಳನ್ನು ಮಾಡುವವರಿಗಿಂತ ಹೆಚ್ಚು ಸಾಮಾನ್ಯ ದೃಶ್ಯವಾಗಿದೆ. ವೈದ್ಯರೊಂದಿಗೆ ಸಮಾಲೋಚನೆಯ ಸಮಯದಲ್ಲಿ, ತಮ್ಮ ಮಗು ಪರದೆಯ ಮೇಲೆ ಏನನ್ನಾದರೂ ನೋಡದೆ ತಿನ್ನಲು ನಿರಾಕರಿಸುತ್ತದೆ ಎಂಬುದು ಪೋಷಕರ ಸಾಮಾನ್ಯ ದೂರು. ಮಗು ಅಚಲವಾಗಿದ್ದು, ಕೈಯಲ್ಲಿ ಫೋನ್ ನೀಡದ ಹೊರತು ಅವರ ಮಾತು ಕೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಡಾ ಶಶಿಧರ್ ಅವರು ಇತ್ತೀಚೆಗೆ ಪ್ರಾರಂಭಿಸಿದ ಡಿಜಿಟಲ್ ಡಿಟಾಕ್ಸ್ ಕೇಂದ್ರಗಳು, ಮಕ್ಕಳು ಮತ್ತು ಪೋಷಕರಿಗೆ ಉಚಿತ ಸಮಾಲೋಚನೆಯನ್ನು ಒದಗಿಸಲು ಸ್ಥಾಪಿಸಲಾದ ಮೊದಲ ರೀತಿಯ ಗ್ರಾಮೀಣ ಕೇಂದ್ರಗಳಾಗಿವೆ. 

ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸೈನ್ಸಸ್ (ನಿಮ್ಹಾನ್ಸ್) ನ ಪಿಎಚ್‌ಡಿ ವಿದ್ವಾಂಸರಾದ ಪ್ರಾಂಜಲಿ ಚಕ್ರವರ್ತಿ ಠಾಕೂರ್ ಅವರು, ''ಕೋವಿಡ್ ಸಾಂಕ್ರಾಮಿಕ ನಂತರ, ತಂತ್ರಜ್ಞಾನದ ವ್ಯಸನವು ಗಂಭೀರ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಿಮ್ಹಾನ್ಸ್ ಈ ಸಮಸ್ಯೆಯನ್ನು ಪರಿಹರಿಸಲು 2014 ರಲ್ಲಿ 'ಸರ್ವಿಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ (SHUT) ಕ್ಲಿನಿಕ್‌ಗಳನ್ನು ಪ್ರಾರಂಭಿಸಿತ್ತು ಮತ್ತು ಇತ್ತೀಚೆಗೆ ದಿನಚರಿಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಸಮತೋಲನಗೊಳಿಸಲು ಜನರಿಗೆ ಸಲಹೆ ನೀಡಲು ಡಿಟಾಕ್ಸ್ ಸಹಾಯವಾಣಿಯನ್ನು ಪ್ರಾರಂಭಿಸಿತು. ಅನೇಕ ಪೋಷಕರು ಈ ಸಹಾಯವಾಣಿಗೆ ಕರೆ ಮಾಡುತ್ತಾರೆ. ತಮ್ಮ ಮಕ್ಕಳು ಏಕೆ ಟೆಕ್ ಗ್ಯಾಜೆಟ್‌ಗಳಿಗೆ ವ್ಯಸನಿಯಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯವನ್ನು ಕೋರುತ್ತಾರೆ ಮತ್ತು ಅವರಿಗೆ ಸಹಾಯ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಠಾಕೂರ್ ಹೇಳಿದರು.

ಇದನ್ನೂ ಓದಿ: ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ರಿವರ್ಸ್ ವಾಕಿಂಗ್ ಮಾಡಿ

ಕರ್ನಾಟಕದ ಗ್ರಾಮೀಣ ಪ್ರದೇಶದ ಜನರಿಗೆ ಸಹಾಯ ಮಾಡಲು, ಡಾ ಶಶಿಧರ್ ಅವರು ದೇವನಹಳ್ಳಿ, ಯಲಹಂಕ, ದೊಡ್ಡಬಳ್ಳಾಪುರ ಮತ್ತು ಇತರ ಜಿಲ್ಲೆಗಳಲ್ಲಿ ಇನ್ನೂ ಹತ್ತು ಕೇಂದ್ರಗಳನ್ನು ತೆರೆಯಲು ಯೋಜಿಸಿದ್ದಾರೆ.
 


Stay up to date on all the latest ಜೀವನಶೈಲಿ news
Poll
Railways Minister Ashwini Vaishnaw waves at a goods train as train services resume

ಒಡಿಶಾದಲ್ಲಿ ಭೀಕರ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕೇ?


Result
ಹೌದು
ಬೇಡ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp