ಶಾಂತಿನಗರದಲ್ಲಿ 11 ಲಕ್ಷ ದರೋಡೆ

ಶಾಂತಿನಗರದಲ್ಲಿನ ಕರ್ನಾಟಕ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಿದ್ದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಶಾಂತಿನಗರದಲ್ಲಿನ ಕರ್ನಾಟಕ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಿದ್ದ ಖಾಸಗಿ ಏಜೆನ್ಸಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದ ಮೂವರು ದುಷ್ಕರ್ಮಿಗಳು, ಶನಿವಾರ ಸಂಜೆ 11 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ಎಸ್‌ಯುವಿ ವಾಹನದಲ್ಲಿ ಬಂದ ಬ್ಯಾಂಕ್‌ನ ಮೂವರು ಸಿಬ್ಬಂದಿ ಎಟಿಎಂಗೆ ತುಂಬಲು 2 ಬ್ಯಾಗ್ ಹಣ ತಂದಿದ್ದರು. ವಾಹನ ಚಾಲಕ ಹಾಗೂ ಭದ್ರತಾ ಸಿಬ್ಬಂದಿ ಸಹ ಇದ್ದರು. ಈ ವೇಳೆ ಚಾಲಕ ವಾಹನದಲ್ಲಿ ಕುಳಿತಿದ್ದರು.

ಇಬ್ಬರು ಸಿಬ್ಬಂದಿ 1 ಬ್ಯಾಗ್ ತೆಗೆದುಕೊಂಡು ಎಟಿಎಂ ಒಳಗೆ ಹೋಗಿದ್ದರು. ಈ ವೇಳೆ ಬಂದ ಮೂವರು ದುಷ್ಕರ್ಮಿಗಳು ವ್ಯಾನ್ ಸಮೀಪ ಬಂದು ಪರಿಸ್ಥಿತಿ ಗಮನಿಸಿದ್ದಾರೆ.

ನಂತರ ಅವರಲ್ಲಿ ಒಬ್ಬ ಚಾಲಕನ ಜತೆ ಮಾತನಾಡುತ ವ್ಯಾನ್ ಪಕ್ಕದಲ್ಲಿ ಹಣ ಬಿದ್ದಿದೆ. ಅದು ನಿಮ್ಮದೇ ಇರಬಹುದು ಎಂದು ತಿಳಿಸಿದ್ದಾನೆ. ಅದನ್ನು ಕಂಡ ಚಾಲಕ ಕೆಳಗಿಳಿದು ಹಣದ ನೋಟುಗಳನ್ನು ತೆಗೆದುಕೊಂಡಿದ್ದಾನೆ. ಈ ವೇಳೆ ವಾಹನದಲ್ಲಿದ್ದ ಒಂದು ಬ್ಯಾಗ್‌ನ್ನು ಆರೋಪಿಗಳು ಕದ್ದೊಯ್ದಿದ್ದಾರೆ.

ಸಹಾಯ ಕೇಳಿಲ್ಲ: ದುಷ್ಕರ್ಮಿಗಳು ಲಕ್ಷಾಂತರ ರುಪಾಯಿ ದೋಚಿ ಪರಾರಿಯಾಗಿದ್ದರೂ ಸಿಬ್ಬಂದಿಯಾಗಲೀ ಅಥವಾ ಚಾಲಕನಾಗಲಿ ಸಹಾಯಕ್ಕಾಗಿ ಕೂಗಿಕೊಂಡಿಲ್ಲ. ಈ ಬಗ್ಗೆ ಸ್ಥಳೀಯರಿಗೆ ತಿಳಿಸಿ, ಆರೋಪಿಗಳನ್ನು ಹಿಡಿಯುವ ಪ್ರಯತ್ನವನ್ನೂ ಮಾಡಿಲ್ಲ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಅವರ ಪ್ರತಿಕ್ರಿಯೆ ಶೂನ್ಯವಾಗಿದ್ದು, ಯಾವುದೇ ಘಟನೆ ನಡೆದಿಲ್ಲ ಎಂಬ ಭಾವ ಅವರಲ್ಲಿ ಕಂಡುಬರುತ್ತಿದೆ.

ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಗಮನಿಸಿದರೆ ಎಟಿಎಂಗೆ ಹಣ ಹಾಕಲು ಬಂದಿದ್ದವರದ್ದೇ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com