ಕೇರಳದಲ್ಲಿ ದೋಣಿ ದುರಂತ: 8 ಸಾವು

ಪ್ರಯಾಣಿಕರ ದೋಣಿಗೆ ಮೀನುಗಾರರ ದೋಣಿ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರ ದೋಣಿಯಲ್ಲಿದ್ದ 8 ಮಂದಿ ಮೃತಪಟ್ಟಿದ್ದಾರೆ.
ದೋಣಿ ದುರಂತ(ಸಾಂದರ್ಭಿಕ ಚಿತ್ರ)
ದೋಣಿ ದುರಂತ(ಸಾಂದರ್ಭಿಕ ಚಿತ್ರ)
ಕೊಚ್ಚಿ(ಕೇರಳ): ಪ್ರಯಾಣಿಕರ ದೋಣಿಗೆ ಮೀನುಗಾರರ ದೋಣಿ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರ ದೋಣಿಯಲ್ಲಿದ್ದ 8 ಮಂದಿ ಮೃತಪಟ್ಟಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ಕೊಚ್ಚಿಯಿಂದ ವ್ಯಾಪೆನ್ ತಲುಪಿಸುವ ಪ್ರಯಾಣಿಕರ ದೋಣಿಯಲ್ಲಿ ಸುಮಾರು 35 ಜನರು ಪ್ರಯಾಣಿಸುತ್ತಿದ್ದು, ಈ ವೇಳೆ ಪ್ರಯಾಣಿಕರ ದೋಣಿಗೆ ಮೀನುಗಾರರ ದೋಣಿ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ಇಬ್ಬರು ಪುರುಷರಾಗಿದ್ದಾರೆ.
ಇನ್ನುಳಿದಂತೆ 22 ಮಂದಿಯನ್ನು ಸದ್ಯ ರಕ್ಷಣೆ ಮಾಡಿದ್ದು, ಅವರನ್ನು ಕೊಚ್ಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಗೌತಮ್ ಆಸ್ಪತ್ರೆಗೆ ಇಬ್ಬರು ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಓರ್ವನನ್ನು ರವಾನಿಸಲಾಗಿದೆ ಎಂದು ತಿಳಿಸಿದು ಬಂದಿದೆ. 
ಇದೇ ಮೊದಲ ಬಾರಿಗೆ ಕೊಚ್ಚಿನ್ ಪೋರ್ಟ್ ನಲ್ಲಿ ದೋಣಿ ದುರಂತ ಸಂಭವಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com