ನವದೆಹಲಿ: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಮಾಜಿ ಪತಿ ಸಜೀವ್ ಖನ್ನ ರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. .ಕೊಲ್ಕತ್ತದಲ್ಲಿ ಸಜೀವ್ ಖನ್ನರನ್ನು ಬಂಧಿಸಿರುವ ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದು, ನಾಳೆ ಮುಂಬೈ ಕರೆತರುವ ಸಾಧ್ಯತೆ..ಗುರುವಾರ ಸಜೀವ್ ಖನ್ನರನ್ನು ಕೊಲ್ಕತ್ತಾ ಕೋರ್ಟ್ ಮುಂದೆ ಹಾಜರುಪಡಿಸಲಿದ್ದು, ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ..ತಮ್ಮ ಮಗಳಾದ ಶೀನಾ ಬೋರಾ ಕೊಲೆ ಮಾಡಿಸಿದ ಆರೋಪದ ಮೇಲೆ ಇಂದ್ರಾಣಿ ಮುಖರ್ಜಿಯನ್ನು ನಿನ್ನೆ ಪೊಲೀಸರು ಬಂಧಿಸಿದ್ದು, ಆಗಸ್ಟ್ 31ರವರೆಗೆ ಥಾರ್ ಜೈಲ್ ನಲ್ಲಿರಬೇಕಿದೆ. .Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos