ಚೆನ್ನೈನ ಶ್ವಾನಗಳಿಗೆ ಬೆಂಗಳೂರಲ್ಲಿ ಆಶ್ರಯ!

ಮಳೆಯಿಂದ ತತ್ತರಿಸಿರುವ ತಮಿಳುನಾಡಲ್ಲಿ ಜನರನ್ನೇ ರಕ್ಷಿಸಲು ರಕ್ಷಣಾತಂಡಗಳು ಹರಸಾಹಸ ಪಡುತ್ತಿದ್ದರೆ, ಪ್ರಾಣಿ-ಪಕ್ಷಿಗಳ ಕಥೆ...
ಚೆನ್ನೈ ಪ್ರವಾಹ: ಸಾಕು ನಾಯಿಯನ್ನು ಹೊತ್ತುಯುತ್ತಿರುವ ಯುವಕ
ಚೆನ್ನೈ ಪ್ರವಾಹ: ಸಾಕು ನಾಯಿಯನ್ನು ಹೊತ್ತುಯುತ್ತಿರುವ ಯುವಕ
Updated on

ಚೆನ್ನೈ: ಮಳೆಯಿಂದ ತತ್ತರಿಸಿರುವ ತಮಿಳುನಾಡಲ್ಲಿ ಜನರನ್ನೇ ರಕ್ಷಿಸಲು ರಕ್ಷಣಾತಂಡಗಳು ಹರಸಾಹಸ ಪಡುತ್ತಿದ್ದರೆ, ಪ್ರಾಣಿ-ಪಕ್ಷಿಗಳ ಕಥೆ ಕೇಳುವವರಾರು? 

ಇಂಥ ಸ್ಥಿತಿಯಲ್ಲಿ ಮೂಕಪ್ರಾಣಿಗಳ ರೋದನಕ್ಕೆ ಕಿವಿಯಾದದ್ದು `ಹೋಟೆಲ್ ಫಾರ್ ಡಾಗ್ಸ್' ಎಂಬ ಸಂಸ್ಥೆ. ಚೆನ್ನೈ ಮೂಲದ ಈ ಸಂಸ್ಥೆಯು ಪ್ರವಾಹಪೀಡಿತ ಸ್ಥಳಗಳಲ್ಲಿನ ನಾಯಿಗಳನ್ನು ತನ್ನ ಬೆಂಗಳೂರಿನ ಹೋಟೆಲ್‍ಗೆ ಸ್ಥಳಾಂತರ ಮಾಡುತ್ತಿವೆ. 

ಸಾಕುಪ್ರಾಣಿಗಳ ಮಾಲೀಕರು ಈ ಸಂಸ್ಥೆಯನ್ನು ಸಂಪರ್ಕಿಸುತ್ತಿದ್ದು, ತಮ್ಮ ಪ್ರಾಣಿಗಳ ಸುರಕ್ಷೆಯ ಹೊಣೆಯನ್ನು ಇವರಿಗೆ ವಹಿಸಿದ್ದಾರೆ. ಅದರಂತೆ, ನಾಯಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿದೆ. 

ತಮಿಳು ನಾಡಿನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಇವುಗಳನ್ನು ಮರಳಿ, ಮಾಲೀಕರಿಗೆ ಒಪ್ಪಿಸ ಲಾಗುವುದು ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com