ಅಪಘಾತ ಮಾಡಿ ಪೊಲೀಸರೊಂದಿಗೆ ದುರ್ವತನೆ ತೋರಿದ ರಷ್ಯಾ ರಾಯಭಾರಿ

ರಷ್ಯಾ ರಾಯಭಾರಿಯೊಬ್ಬರು ಅಪಘಾತ ಮಾಡಿ ನಂತರ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಯೊಂದು ದಕ್ಷಿಣ ದೆಹಲಿಯ ಮೋತಿಭಾಗ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ...
ಅಪಘಾತ ಮಾಡಿ ಪೊಲೀಸರೊಂದಿಗೆ ದುರ್ವತನೆ ತೋರಿದ ರಷ್ಯಾ ರಾಯಭಾರಿ
ಅಪಘಾತ ಮಾಡಿ ಪೊಲೀಸರೊಂದಿಗೆ ದುರ್ವತನೆ ತೋರಿದ ರಷ್ಯಾ ರಾಯಭಾರಿ
Updated on

ರಷ್ಯಾ: ರಷ್ಯಾ ರಾಯಭಾರಿಯೊಬ್ಬರು ಅಪಘಾತ ಮಾಡಿ ನಂತರ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಯೊಂದು ದಕ್ಷಿಣ ದೆಹಲಿಯ ಮೋತಿಭಾಗ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ರಷ್ಯಾ ರಾಯಭಾರಿಯಿದ್ದ ಕಾರು ನಿನ್ನೆ ರಾತ್ರಿ ವೇಗವಾಗಿ ಬಂದು  ಬೈಕ್ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿದೆ. ನಂತರ ಪೊಲೀಸರ ಬ್ಯಾರಿಕೇಡ್ ಗೂ ಗುದ್ದಿದೆ. ಸ್ಥಳದಲ್ಲಿ ಪೊಲೀಸರು ರಾಯಭಾರಿಯನ್ನು ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಿ ಮಾತನಾಡಲು ಮುಂದಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ್ದು, ಬೆದರಿಕೆ ಹಾಕಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ರಷ್ಯಾ ರಾಯಭಾರಿಯಾಗಿರುವುದರಿಂದ ಅವರಿಗೆ ಈ ಬಗ್ಗೆ ವಿನಾಯಿದ್ದು, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com