ಕಾನ್‌ಸ್ಟೆಬಲ್‌ ಹತ್ಯೆ: ಸಂಸದ ಸಂಜಯ್‌ ಸಿಂಗ್‌ ಪುತ್ರನ ಬಂಧನ

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಡೆದಿದ್ದ ಕಾನ್‌ಸ್ಟೆಬಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್‌ ನಾಯಕ ಸಂಜಯ್‌ ಸಿಂಗ್‌ ಅವರ...
ಅನಂತ್ ವಿಕ್ರಮ್ ಸಿಂಗ್
ಅನಂತ್ ವಿಕ್ರಮ್ ಸಿಂಗ್
Updated on

ಅಮೇಠಿ: ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಡೆದಿದ್ದ ಕಾನ್‌ಸ್ಟೆಬಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್‌ ನಾಯಕ ಸಂಜಯ್‌ ಸಿಂಗ್‌ ಅವರ ಪುತ್ರ ಅನಂತ್ ವಿಕ್ರಮ್‌ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಭೂಪತಿ ಭವನದ ಮಾಲೀಕತ್ವಕ್ಕೆ ಸಂಬಂಧಿಸಿದ ಆಸ್ತಿ ವಿವಾದದಲ್ಲಿ ಕಾನ್‌ಸ್ಟೆಬಲ್‌ ವಿಜಯ್‌ ಕುಮಾರ್‌ ಮಿಶ್ರಾ ಅವರನ್ನು ಅದೇ ಸ್ಥಳದಲ್ಲಿ ಹತ್ಯೆಗೈಯಲಾಗಿತ್ತು ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಹೀರಾ ಲಾಲ್‌ ತಿಳಿಸಿದ್ದಾರೆ.

ಅಮೇಠಿಯ ರಾಜ ಕುಟುಂಬದ ಹಲವರು ಭೂಪತಿ ಭವನದ ಮಾಲಕತ್ವ ತಮ್ಮದೆಂದು ಹೇಳಿಕೊಳ್ಳುತ್ತಿದ್ದು ಇದೇ ಭವನದಲ್ಲಿ ಅನಂತ್‌ ಅವರನ್ನು ಬಂಧಿಸಲಾಗಿದೆ. ಅನಂತ್ ವಿಕ್ರಮ್ ಸಿಂಗ್ ವಿರುದ್ಧ ಸ್ಥಳೀಯ ನ್ಯಾಯಾಲಯವು ಜಾಮೀನು ರಹಿತ ವಾರಂಟನ್ನು ಹೊರಡಿಸಿದೆ ಎಂದು ಎಸ್‌ ಪಿ ಹೀರಾ ಲಾಲ್‌ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com