ಗಲ್ಲು ಶಿಕ್ಷೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಯಾಕುಬ್ ಮೆಮನ್

ಮರಣದಂಡನೆ ವಿರೋಧಿಸಿರುವ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕುಬ್ ಮೆಮನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದಾಗಿ ಗುರುವಾರ ತಿಳಿದುಬಂದಿದೆ...
ಯಾಕುಬ್ ಮೆಮನ್
ಯಾಕುಬ್ ಮೆಮನ್
Updated on

ನವದೆಹಲಿ: ಮರಣದಂಡನೆ ವಿರೋಧಿಸಿರುವ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕುಬ್ ಮೆಮನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದಾಗಿ ಗುರುವಾರ ತಿಳಿದುಬಂದಿದೆ.

ನ್ಯಾಯಾಲಯದ ತೀರ್ಪು ಈ ಮೊದಲೇ ನಿರ್ಧಾರ ಕೈಗೊಂಡಂತೆಯಿದೆ.  ಜುಲೈ.30 ರಂದು ಮರಣದಂಡನೆ ವಿಧಿಸುವುದಾಗಿ ನೀಡಿರುವ ಶಿಕ್ಷೆಯು ಕಾನೂನಾತ್ಮಕವಾಗಿ ವಿರೋಧವಾಗಿದ್ದು, ನ್ಯಾಯಾಲಯವು ಕಾನೂನಾತ್ಮಕ ತನ್ನ ತತ್ವಗಳನ್ನು ಪಾಲಿಸದೆ ಶಿಕ್ಷೆ ವಿಧಿಸಿದೆ ಎಂದು ಹೇಳಿದ್ದಾನೆ. .

ಈ ಹಿಂದೆ ಯಾಕುಬ್‌ ಮೆಮನ್‌ಗೆ ವಿಶೇಷ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. 2013ರಲ್ಲಿ ಇದನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಯಾಕುಬ್‌ ಮೆಮನ್‌ ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದನು. ಮಹಾರಾಷ್ಟ್ರ ಸರ್ಕಾರ ನೀಡಿದ ವರದಿಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ಯಾಕುಬ್‌ ಮೆಮನ್‌ ಭೂಗತ ಪಾತಕಿ ಟೈಗರ್‌ ಮೆಮನ್‌ ಸಹೋದರನಾಗಿದ್ದು, 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದಲ್ಲಿ 250 ಜನರು ಸಾವನ್ನಪ್ಪಿದ್ದರು. ಸುಮಾರು 700 ಜನ ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com