ಎಸಿಬಿ ಮುಖ್ಯಸ್ಥ ಎಂ.ಕೆ ಮೀನಾ ಅಧಿಕಾರ ಮೊಟಕುಗೊಳಿಸಿದ ಎಎಪಿ

ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿ ಭ್ರಷ್ಟಾಚಾರ ವಿರೋಧಿ ಶಾಖೆ ನೇಮಕ ಮಾಡಿದ್ದ ಎಂ.ಕೆ ಮೀನಾ ಅವರ ಅಧಿಕಾರವನ್ನು ಅಪ್ ಸರ್ಕಾರ ಮೊಟಕುಗೊಳಿಸಿದೆ.
ಎಂ.ಕೆ ಮೀನಾ
ಎಂ.ಕೆ ಮೀನಾ
Updated on

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿ  ಭ್ರಷ್ಟಾಚಾರ ವಿರೋಧಿ ಶಾಖೆಗೆ ನೇಮಕ ಮಾಡಿದ್ದ ಎಂ.ಕೆ ಮೀನಾ ಅವರ ಅಧಿಕಾರವನ್ನು ಅಪ್ ಸರ್ಕಾರ ಮೊಟಕುಗೊಳಿಸಿದೆ. ದೆಹಲಿ ಹೈಕೋರ್ಟ್ ನಿಂದ ಅಂತಿಮ ತೀರ್ಪು ಬರುವವರೆಗೂ ತರಬೇತಿ ಕೆಲಸ ಹಾಗೂ ಪ್ರಕರಣಗಳ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ದೆಹಲಿ ಸರ್ಕಾರ ಮೀನಾ ಅವರಿಗೆ ಸೂತಿಸಿದೆ.

ಎಬಿಸಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಕೆ ಮೀನಾ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಆಪ್ ಸರ್ಕಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ತೀರ್ಪು ಇನ್ನು ಹೊರ ಬರಬೇಕಿರುವುದರಿಂದ ಅಲ್ಲಿಯವರೆಗೂ ಎಲ್ಲಾ ಮುಖ್ಯ ಕೆಲಸಗಳ ಮೇಲ್ವಿಚಾರಣೆಯನ್ನು ಹೆಚ್ಚುವರಿ ಆಯುಕ್ತ ಎಸ್.ಎಸ್ ಯಾದವ್ ನೋಡಿಕೊಳ್ಳಲು ಆಪ್ ಸರ್ಕಾರ ತಿಳಿಸಿದೆ.

ಎಂಕೆ ಮೀನಾ ಎಸಿಬಿಯ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತರಿಗೆ ಯಾವುದೇ ಒಂದು ನಿಖರವಾದ ಹುದ್ದೆ ಇರುವುದಿಲ್ಲ ಎಂದು ಆಪ್  ಸರ್ಕಾರ ಹೇಳಿದೆ, ಇನ್ನು ಜಾಗೃತ ದಳವೇ ಪ್ರಮುಖವಾಗಿದ್ದು, ಜಾಗೃತ ದಳ ನಿರ್ದೇಶಕರ ಅಡಿಯಲ್ಲಿ ಎಬಿಸಿ ಕೆಲಸ ಮಾಡಬೇಕು ಎಂದು ಆಪ್ ಸರ್ಕಾರ ಸಮರ್ಥಿಸಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com