ಭೀಕರ ರಸ್ತೆ ಅಪಘಾತ: ಶಿರಾಡಿಘಾಟ್ ಚಿತ್ರತಂಡದ ಇಬ್ಬರು ಸಿಬ್ಬಂದಿ ದುರ್ಮರಣ

'ಶಿರಾಡಿಘಾಟ್‌' ಚಿತ್ರದ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ, ಚಿತ್ರ ತಂಡದ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ...
'ಶಿರಾಡಿಘಾಟ್‌' ಚಿತ್ರದ ಸ್ಟಿಲ್
'ಶಿರಾಡಿಘಾಟ್‌' ಚಿತ್ರದ ಸ್ಟಿಲ್

ಹಾಸನ:  'ಶಿರಾಡಿಘಾಟ್‌' ಚಿತ್ರದ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ, ಚಿತ್ರ ತಂಡದ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಶಾಂತಿ ಗ್ರಾಮದಲ್ಲಿ ನಡೆದಿದೆ.

ಶೂಟಿಂಗ್ ಮುಗಿಸಿ ಚಿತ್ರ ತಂಡದ ಸಿಬ್ಬಂದಿ ಕ್ವಾಲಿಸ್‌ನಲ್ಲಿ ಬೆಂಗಳೂರಿನತ್ತ ಪಯಣ ಬೆಳೆಸಿದ್ದರು. ಈ ವೇಳೆ  ಕ್ವಾಲೀಸ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಚಿತ್ರತಂಡದ ಸಹಾಯಕ ಸಿಬ್ಬಂದಿ ಚಿರಂಜೀವಿ(32) ಮತ್ತು ಮಾಲತೇಶ್(35) ಸ್ಥಳದಲ್ಲೇ ಸಾವನಪ್ಪಪಿದ್ದಾರೆ.

ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಂತಿ ಗ್ರಾಮ ಠಾಣೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com