ಸತ್ಯಂ ಕಂಪ್ಯೂಟರ್ ಹಗರಣ: ತೀರ್ಪು ಮುಂದೂಡಿಕೆ

ವಿಶ್ವಾದ್ಯಂತ ಸಾವಿರಾರು ಷೇರುದಾರನ್ನು ಹೊಂದಿದ್ದ ಸತ್ಯಂ ಕಂಪ್ಯೂಟರ್‌‌ ಸರ್ವೀಸಸ್‌‌ ಲಿಮಿಟೆಡ್‌ಗೆ ಸಂಬಂಧಿಸಿದ ಬಹುಕೋಟಿ ಹಗರಣದ ತೀರ್ಪು ಮುಂದೂಡಲಾಗಿದೆ...
ಬಿ. ರಾಮಲಿಂಗಾ ರಾಜು
ಬಿ. ರಾಮಲಿಂಗಾ ರಾಜು
Updated on

ಹೈದ್ರಾಬಾದ್: ವಿಶ್ವಾದ್ಯಂತ ಸಾವಿರಾರು ಷೇರುದಾರನ್ನು ಹೊಂದಿದ್ದ ಸತ್ಯಂ ಕಂಪ್ಯೂಟರ್‌‌ ಸರ್ವೀಸಸ್‌‌ ಲಿಮಿಟೆಡ್‌ಗೆ ಸಂಬಂಧಿಸಿದ ಬಹುಕೋಟಿ ಹಗರಣದ ತೀರ್ಪು ಮುಂದೂಡಲಾಗಿದೆ.  
ಹೈದ್ರಾಬಾದ್ ನ ವಿಶೇಷ ನ್ಯಾಯಾಲಯ ಏಪ್ರಿಲ್ 9ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಹಗರಣ ಸಂಬಂಧ ಕಳೆದ ಡಿ.23ರಂದು ಅಂತಿಮವಾಗಿ ವಿಚಾರಣೆ ನಡೆಸಿ ವಾದ-ವಿವಾದಗಳನ್ನು ಆಲಿಸಿದ್ದ ವಿಶೇಷ ನ್ಯಾಯಾಲಯ, ಮಾ.9ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ನ್ಯಾಯಾಮೂರ್ತಿ ಬಿವಿಎಲ್‌‌‌‌ಎನ್‌‌ ಚಕ್ರವರ್ತಿ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
 ಸಿಬಿಐ ನ್ಯಾಯಾಲಯವು ಕಳೆದ ಆರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸುಮಾರು 3000 ಪುಟಕ್ಕೀ ಅಧಿಕ ದಾಖಲೆ ಪತ್ರಗಳು ಹಾಗೂ 226 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತ್ತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮುಖ್ಯಸ್ಥ ಬಿ. ರಾಮಲಿಂಗಾ ರಾಜು ಅವರನ್ನು ಬಂಧಿಸಲಾಗಿದೆ.
 ಈ ಹಗರಣವನ್ನು ಲೆಕ್ಕ ವಿಭಾಗದಲ್ಲಿ ನಡೆದಿರುವ ದೇಶದ ಅತಿ ದೊಡ್ಡ ಹಗರಣ ಎಂದು ಹೇಳಲಾಗಿದ್ದು, ಇದು 2009ರಲ್ಲಿ ಬೆಳಕಿಗೆ ಬಂದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com