ಶ್ರೀಲಂಕಾ ಪ್ರಗತಿಗೆ ಭಾರತ ಕೈಜೋಡಿಸಲಿದೆ: ಪ್ರಧಾನಿ ಮೋದಿ

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಕೊಲಂಬೊ: ಶ್ರೀಲಂಕಾ ಪ್ರಗತಿಯಲ್ಲಿ ಭಾರತ ಕೈ ಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಶ್ರೀಲಂಕಾ ಸಂಸತ್‌ನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಶ್ರೀಲಂಕಾ ದಶಗಳ ಕಾಲ ಉಗ್ರವಾದವನ್ನು ಅನುಭವಿಸಿದೆ. ನಾವೂ ಅತಿ ಕೆಟ್ಟ ಹಾಗೂ ಕ್ರೂರ ಉಗ್ರವಾದವನ್ನು ಸಮರ್ಥವಾಗಿ ಎದುರಿಸಿದ್ದೇವೆ. ವಿವಿಧತೆಯಲ್ಲಿ ಏಕತೆ ಎಲ್ಲಾ ದೇಶಗಳ ಅದ್ಭುತ ಶಕ್ತಿ ಎಂದು ಹೇಳಿದರು.

ಏಕತೆ ಮತ್ತು ಅಖಂಡತೆಗೆ ಶ್ರೀಲಂಕಾ ಮಾದರಿಯಾಗಿದೆ ಎಂದ ಪ್ರಧಾನಿ, ಉಭಯ ರಾಷ್ಟ್ರಗಳ ಮಧ್ಯೆ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಬಂಡವಾಳ ಹೂಡಿಕೆ ಮಾಡಲು ಶ್ರೀಲಂಕಾಗೆ ಭಾರತ ನೈಸರ್ಗಿಕ ಮೂಲವಾಗಿದೆ ಎಂದರು.

ಇದೇ ವೇಳೆ ಮೀನುಗಾರರ ವಿಚಾರ ಪ್ರಸ್ತಾಪಿಸಿದ ಮೋದಿ, ಸಮುದ್ರ ರಕ್ಷಣೆ ಬಗ್ಗೆ ನಾಗರಿಕರು ಗಮನ ಹರಿಸಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com