ಸಂಸತ್'ನಲ್ಲಿ ಇಂದಿನಿಂದ ಅಸಹಿಷ್ಣುತೆ ಬಗ್ಗೆ ಚರ್ಚೆ

ಕಳೆದ ವಾರ ಆರಂಭವಾಗಿದ್ದ ಸಂಸತ್ ಅಧಿವೇಶನ, ಸೋಮವಾರದಿಂದ ಬಿರುಸು ಪಡೆಯಲಿದೆ. ಲೋಕಸಭೆ, ರಾಜ್ಯ ಸಭೆಗಳಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯಲಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಕಳೆದ ವಾರ ಆರಂಭವಾಗಿದ್ದ ಸಂಸತ್ ಅಧಿವೇಶನ, ಸೋಮವಾರದಿಂದ ಬಿರುಸು ಪಡೆಯಲಿದೆ. ಲೋಕಸಭೆ, ರಾಜ್ಯ ಸಭೆಗಳಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯಲಿದೆ.

ಇನ್ನೊಂದೆಡೆ, ಜಿಎಸ್‍ಟಿ ವಿಧೇಯಕ ಅಂಗೀಕರಿಸಿಕೊಳ್ಳುವ ತವಕದಲ್ಲಿದೆ ಬಿಜೆಪಿ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಯುಗಳು ಈಗಾಗಲೇ ಈ ಚರ್ಚೆಗೆ ನೋಟಿಸ್ ನೀಡಿವೆ. ಲೋಕಸಭೆಯಲ್ಲಿ ಕಾಂಗ್ರೆಸ್, ಸಿಪಿಎಂ ನೋಟಿಸ್ ನೀಡಿದ್ದು, ಅಸಹಿಷ್ಣುತೆ ಘಟನೆಗಳ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಸಚಿವರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲು ಸಜ್ಜಾಗಿವೆ.

ಈಗಾಗಲೇ ನಡೆದಿರುವ 2 ದಿನ ಸದನ ಕಲಾಪ ಸಂವಿಧಾನ ಕರ್ತೃಗಳ ಸ್ಮರಣೆಗೆ ಮೀಸಲಾಗಿದ್ದುದರಿಂದ ಪ್ರತಿಪಕ್ಷಗಳು ಹೆಚ್ಚಿ ನ ಗದ್ದಲಕ್ಕೆ ಮುಂದಾಗಿರಲಿಲ್ಲ. ಆದರೂ ಪ್ರತಿಪಕ್ಷಗಳ ಮುಖಂಡರು ಸರ್ಕಾರವನ್ನು ಈ ವಿಚಾರದಲ್ಲಿ ಟೀಕಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com