ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರೀತಿ ಆಡುವುದನ್ನು ಮೊದಲು ನಿಲ್ಲಿಸಬೇಕೆಂದು ಬಿಜೆಪಿ ಹೇಳಿಕೊಂಡಿದೆ.
ಈ ಕುರಿತಂತೆ ಮಾತನಾಡಿರುವ ಪಶ್ಚಿಮ ಬಂಗಾಳದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧಾರ್ಥ್ ನಾಥ್ ಸಿಂಗ್ ಅವರು, ಮಮತಾ ಬ್ಯಾನರ್ಜಿಯವರಿಗೆ ಒಂದು ಸಲಹೆ ನೀಡಲು ಇಚ್ಛಿಸುತ್ತೇನೆ. ಮಮತಾ ಅವರು ಮೊದಲು ಅರವಿಂದ ಕೇಜ್ರಿವಾಲ್ ರಂತೆ ವರ್ತಿಸುವುದನ್ನು ನಿಲ್ಲಿಸಿ, ಉತ್ತಮವಾಗಿ ಆಡಳಿತ ನಡೆಸಲಿ ಎಂದು ಹೇಳಿದ್ದಾರೆ.
ಬಂಗಾಳದ ಗೋವು ಗಣತಿಯನ್ನಿಡಿದು ಬಿಜೆಪಿಯನ್ನು ದೂಷಿಸುವುದನ್ನು ಬಿಟ್ಟು, ಬಂಗಾಳದಿಂದ ಬಾಂಗ್ಲಾದೇಶಕ್ಕೆ ಆಗುತ್ತಿರುವ ಹಸು ಕಳ್ಳಸಾಗಣೆ ಕುರಿತಂತೆ ಮಮತಾ ಅವರು ಗಣತಿ ಕಾರ್ಯವನ್ನು ನಡೆಸಲಿ. ಗೋವು ಕಳ್ಳಸಾಗಣೆಗೆ ಮಮತಾ ಅವರ ಕಾರ್ಯಕರ್ತರೇ ಬೆಂಬಲ ನೀಡುತ್ತಿದ್ದಾರೆಂದು ಹೇಳಿದ್ದಾರೆ.
Advertisement