ಮೋದಿ ಆಡಳಿತಾವಧಿಗಿಂತ ವೈದಿಕ ಕಾಲದಲ್ಲಿ ಮಹಿಳೆಯರು ಹೆಚ್ಚು ಸ್ವತಂತ್ರ್ಯರಾಗಿದ್ದರು: ಕೇಜ್ರಿವಾಲ್

ವಿದೇಶಿ ಪ್ರವಾಸಿಗರು ಸ್ಕರ್ಟ್ ಧರಿಸಬಾರದು ಎಂಬ ಕೇಂದ್ರ ಸಂಸ್ಕ್ರತಿ ಸಚಿವರ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ವಿದೇಶಿ ಪ್ರವಾಸಿಗರು ಸ್ಕರ್ಟ್ ಧರಿಸಬಾರದು ಎಂಬ ಕೇಂದ್ರ ಸಂಸ್ಕ್ರತಿ ಸಚಿವರ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಗೆ ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರು ಮೋದಿ ಆಡಳಿತಾವಧಿಗಿಂತ, ವೇದಿಕ ಕಾಲದಲ್ಲೇ ಹೆಚ್ಚು ಸ್ವತಂತ್ರ್ಯರಾಗಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇನ್ನು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ, ನಾನು ಹೇಳಿದ್ದು ಧಾರ್ಮಿಕ ಸ್ಥಳಗಳಲ್ಲಿ ವಿದೇಶಿ ಪ್ರವಾಸಿಗರು ಸ್ಕರ್ಟ್ ಧರಿಸಬಾರದು ಎಂದು ಮಹಿಳೆಯರ ಹಿತದೃಷ್ಟಿಯಿಂದ ಹೇಳಿದ್ದಾಗಿ ತಿಳಿಸಿದ್ದಾರೆ.

ಮಹಿಳೆಯರು ಯಾವ ಉಡುಗೆ ತೊಡಬೇಕು, ಯಾವ ಉಡುಗೆ ತೊಡಬಾರದು ಎಂಬುದರ ಬಗ್ಗೆ ನಾನು ಹೇಳಿಲ್ಲ, ರಾತ್ರಿ ವೇಳೆ ಓಡಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದೆ, ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com