ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಯನ್ನು ದೊಣ್ಣೆಯಿಂದ ಬಡಿದು ಕೊಂದ ಭಗ್ನ ಪ್ರೇಮಿ

ನುಂಗಂಬಕ್ಕಂ ರೇಲ್ವೆ ನಿಲ್ದಾಣದಲ್ಲಿ ನಡೆದಿದ್ದ ಟೆಕ್ಕಿ ಸ್ವಾತಿ ಹತ್ಯೆ ಪ್ರಕರಣ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಇಂತಹದೆ ಪ್ರಕರಣವೊಂದು ಕರೂರ್...
ವಿದ್ಯಾರ್ಥಿನಿ ಕೊಲೆ
ವಿದ್ಯಾರ್ಥಿನಿ ಕೊಲೆ

ಕರೂರ್: ನುಂಗಂಬಕ್ಕಂ ರೇಲ್ವೆ ನಿಲ್ದಾಣದಲ್ಲಿ ನಡೆದಿದ್ದ ಟೆಕ್ಕಿ ಸ್ವಾತಿ ಹತ್ಯೆ ಪ್ರಕರಣ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಇಂತಹದೆ ಪ್ರಕರಣವೊಂದು ಕರೂರ್ ನಲ್ಲಿ ನಡೆದಿದೆ.

ಕರೂರು ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಶಿವಗಂಗಾ ಜಿಲ್ಲೆಯ ಮನಮಧುರೈ ಮೂಲದ 19 ವರ್ಷದ ಸೋನಾಲಿಯನ್ನು ಅದೇ ಕಾಲೇಜಿನ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದ 22 ವರ್ಷದ ಉದಯ್ ಕುಮಾರ್ ದೊಣ್ಣೆಯಿಂದ ಮನಬಂದಂತೆ ಥಳಿಸಿ ಹತ್ಯೆ ಮಾಡಿದ್ದಾನೆ.

ಉದಯ್ ಕುಮಾರ್ ಸೋನಾಲಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಅಲ್ಲದೆ ಪದೇ ಪದೇ ಆಕೆಗೆ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾನೆ. ಆದರೆ ಇದಕ್ಕೆ ಸೊಪ್ಪು ಹಾಕದ ಸೋನಾಲಿ ಇದ್ದ ತರಗತಿಗೆ ನುಗ್ಗಿ ದೊಣ್ಣೆಯಿಂದ ಥಳಿಸಿದ್ದಾನೆ.

ಸೋನಾಲಿ ಮೇಲೆ ಹಲ್ಲೆ ನಡೆಸುವಾಗ ಅಲ್ಲೆ ಇದ್ದ ಶಿಕ್ಷಕ ಸತೀಶ್ ಕುಮಾರ್ ಉದಯ್ ನನ್ನು ತಡೆದಿದ್ದಾರೆ. ಈ ವೇಳೆ ಶಿಕ್ಷಕರ ಕೈಗಳಿಗೂ ಗಾಯಗಳಿವೆ. ಥಳಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಸೋನಾಲಿಯನ್ನು ಆಸ್ಪತ್ರೆಗೆ ದಾಖಲಿಸಿದರು ತೀವ್ರ ಗಾಯಗಳಿಂದ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿ ಉದಯ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com