ರಾಷ್ಟ್ರಗೀತೆ ವಿವಾದ: ಕೇರಳ ಲೇಖಕನ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲು

ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂಬ ಆರೋಪ ಮೇರೆಗೆ ಮಲಯಾಳಂ ಲೇಖಕ ಹಾಗೂ ನಾಟಕ ಕಲಾವಿದ ಕಮಲ್ ಸಿ ಚಲಾವ ಅಲಿಯಾಸ್ ಕಮಲ್ಸಿ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವನಂತಪುರ: ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂಬ ಆರೋಪ ಮೇರೆಗೆ ಮಲಯಾಳಂ ಲೇಖಕ ಹಾಗೂ ನಾಟಕ ಕಲಾವಿದ ಕಮಲ್ ಸಿ ಚಲಾವ ಅಲಿಯಾಸ್ ಕಮಲ್ಸಿ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿದೆ ಎಂದು ಸೋಮವಾಲ ತಿಳಿದುಬಂದಿದೆ.

ನಿನ್ನಯಷ್ಟೇ ಕಮಲ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಕಮಲ್ ಅವರು, 'ಸ್ಮಶಾನಂಗಳುದೆ ನೋಟ್ ಪುಸ್ತಕಂ' ಕಾದಂಬರಿಯ ಕೆಲ ಅಂಶಗಳನ್ನು ಹಾಕಿದ್ದರು. ಇದಕ್ಕೆ ಬಿಜೆಪಿಯ ಯುವ ಮೋರ್ಚಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕಮಲ್ ಅವರು ರಾಷ್ಟ್ರಗೀತೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ದೂರನ್ನು ದಾಖಲಿಸಿತ್ತು.

ಈ ದೂರನ್ನು ಪರಿಗಣಿಸಿರುವ ಕೇರಳದ ನಡಕ್ಕಾವು ಪೊಲೀಸರು, ಲೇಖಕ ಕಮಲ್ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿಕೊಂಡು ನಿನ್ನೆ ಲೇಖಕನ್ನು ಬಂಧನಕ್ಕೊಳಪಡಿಸಿದೆ ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com